

ಕಲ್ಯಾಣ ಸಮೀಪದ ಹಿರಿಯ ಧಾರ್ಮಿಕ ಕ್ಷೇತ್ರ ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ ಸಂಚಾಲತ್ವದ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ ವಾರ್ಷಿಕೋತ್ಸವ, ನವರಾತ್ರಿ ಉತ್ಸವವನ್ನು ಬಹು ಅಚ್ಚುಕಟ್ಟಾಗಿ ಅದ್ದೂರಿಯಾಗಿ ಆಚರಿಸುತ್ತಿದ್ದು, ಸಂಸ್ಥೆಯು ಧಾರ್ಮಿಕ ಕಾರ್ಯದೊಂದಿಗೆ ಸಮಾಜ ಕಲ್ಯಾಣ, ಶೈಕ್ಷಣಿಕ ,ಕಾರ್ಯವನ್ನು ಮಾಡುತ್ತಾ ಸಂಸ್ಥೆಯ ಹೆಸರನ್ನು ಮಹಾನಗರದಲ್ಲಿ ಚಿರಪರಿಚಿತವನ್ನಾಗಿಸಿದೆ.

ಪರಿಸರದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಸೆಂಟ್ರಲ್ ಪಾರ್ಕ್ ಇವರ ಮುಂದಾಳತ್ವದಲ್ಲಿ ಶೈಕ್ಷಣಿಕ ಸಾಮಗ್ರಿ ನೀಡುವ ಕಾರ್ಯಕ್ರಮವು ಅಗಸ್ಟ್ 15 ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ದೇವಸ್ಥಾನದ ಸಭಾಂಗಣದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ .
ಈ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಉದ್ಯಮಿ ಪ್ರಭಾಕರ್ ಶೆಟ್ಟಿ
ಡಾ. ಸುರೇಂದ್ರ ಶೆಟ್ಟಿ ಸಿಎಂಡಿ ಜಸ್ವಿನ್ ಕೋ ಆಪರೇಟಿವ್ ಆಫ್ ಸೊಸೈಟಿ
ಜಗನ್ನಾಥ್ ಶೆಟ್ಟಿ ಹೋಟೆಲ್ ಶೈಲಜಾ ರವೀಂದ್ರ ವೈ ಶೆಟ್ಟಿ ಸಂಚಾಲಕರು ಬಂಟರ ಸಂಘ ಮುಂಬೈ ಪ್ರಾದೇಶಿಕ ಸಮಿತಿ ಬಿವಂಡಿ ಟು ಬದ್ಲಾಪುರ್ ಹೋಟೆಲ್ ಉದ್ಯಮಿ ದಯಾನಂದ ಶೆಟ್ಟಿ ಉಲ್ಲಾಸ್ ನಗರ್ ಹಾಗೂ ಉದ್ಯಮಿ ಸದಾಶಿವ್ ಡಿ ಶೆಟ್ಟಿ ಮಂಡಳಿಯ, ಕಾರ್ಯಧ್ಯಕ್ಷ ಚಂದ್ರಕಾಂತ ಎಸ್ ಶೆಟ್ಟಿ ಮಂಡಳಿ ಅಧ್ಯಕ್ಷ ರಾಜೇಶ್ ಜೆ ಶೆಟ್ಟಿ ಹಾಗೂ ದೇವಸ್ಥಾನದ ಪದಾಧಿಕಾರಿಗಳು ಉಪಸ್ಥಿತರಿರುವರು,
ಈ ಕಾರ್ಯಕ್ರಮದಲ್ಲಿ ಮಂಡಳಿಯ ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕೆಂದು ಸಂಚಾಲಕರಾದ ಕರುಣಾಕರ ಶೆಟ್ಟಿ ಉಪಾಧ್ಯಕ್ಷರಾದ ಯುವರಾಜ್ ಪೂಜಾರಿ, ಗೌರವ ಕಾರ್ಯದರ್ಶಿ ಜಗದೀಶ ಶೆಟ್ಟಿ ಬೇಳಂಜೆ, ಕೋಶಾಧಿಕಾರಿ ಸಂತೋಷ ಶೆಟ್ಟಿ ಜೊತೆ ಕಾರ್ಯದರ್ಶಿ ಪ್ರೇಮ್ ಕುಮಾರ್ ರೈ ಜೊತೆ ಕಾರ್ಯದರ್ಶಿ ಗಣೇಶ ಶೆಟ್ಟಿ ನಂದ್ರೋಳಿ ,ಜೊತೆ ಕೋಶಾಧಿಕಾರಿ ಸದಾನಂದ ಸಾಲಿಯನ್ ಮತ್ತು ವಸಂತ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದಕ್ಷೆ ಜ್ಯೋತಿ ಸುದಾನಂದ ಶೆಟ್ಟಿ, ಯುವ ಯುವ ಭಾಗದ ಕಾರ್ಯಾಧ್ಯಕ್ಷ ದೀಪಕ್ ಬಂಗೇರ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.




