30.5 C
Mumbai
June 8, 2026
Mumbai News Kannada
ಮುಂಬಯಿ

ಶ್ರೀ ಜಗದಂಬಾ ಮಂದಿರ ಡೊಂಬಿವಲಿ, ನೂತನ ಕಾರ್ಯಕಾರಿ ಸಮಿತಿ ರಚನೆ : ಅಧ್ಯಕ್ಷರಾಗಿ ದಿವಾಕರ್ ರೈ ಪುನರಾಯ್ಕೆ





ಶ್ರೀ ಜಗದಂಬಾ ಮಂದಿರದ ವಿಶೇಷ ಮಹಾಸಭೆಯು   ಮಂದಿರದ ಅಧ್ಯಕ್ಷರಾದ  ದಿವಾಕರ್ ರೈಯವರ ಅಧ್ಯಕ್ಷತೆಯಲ್ಲಿ ಮಂದಿರದ ವಠಾರದಲ್ಲಿ ಜರುಗಿತು. 

ಅಂದಿನ ಸಭೆಯಲ್ಲಿ ಶ್ರೀ ಜಗದಂಬಾ ಮಂದಿರದ ನೂತನ ಕಾರ್ಯಕಾರಿ ಸಮಿತಿ (2025-2028) ರಚಿಸಲಾಯಿತು. ನೂತನ ಸಮಿತಿಯಲ್ಲಿ  ಅಧ್ಯಕ್ಷರಾಗಿ ದಿವಾಕರ್ ಜಿ. ರೈ ಅವರನ್ನು ಪುನರಾಯ್ಕೆ ಗೊಳಿಸಲಾಯಿತು. ಉಪಾಧ್ಯಕ್ಷರುಗಳಾಗಿ ಉದ್ಯಮಿ ರವೀಂದ್ರ ವೈ ಶೆಟ್ಟಿ ಹಾಗೂ ಸಮಾಜ ಸೇವಕ ದಿನೇಶ್ ಪೂಜಾರಿ ಕುಪ್ಪೆಟ್ಟು,  
ಕಾರ್ಯದರ್ಶಿಯಾಗಿ ರಾಜೇಶ್ ಕೋಟ್ಯಾನ್, ಜೊತೆ ಕಾರ್ಯದರ್ಶಿಯಾಗಿ ಸಚಿನ್ ಪೂಜಾರಿ ಪಲಿಮಾರು, ಕೋಶಾಧಿಕಾರಿಯಾಗಿ ಸಂತೋಷ್ ಶೆಟ್ಟಿ ಮುಕ್ಕ ಹಾಗೂ ಜೊತೆ ಕೋಶಾಧಿಕಾರಿಯಾಗಿ ಹರೀಶ್ ಕೋಟ್ಯಾನ್, 
ಸಲಹೆಗಾರರಾಗಿ ರಮೇಶ್ ಕುಕ್ಯಾನ್ ಹಾಗು ಉದ್ಯಮಿ ಸತೀಶ್ ಶೆಟ್ಟಿ ಅಜೆಕಾರು,  ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹೇಮಾನಂದ ದೇವಾಡಿಗ,  ಸವಿನ್ ಆಳ್ವ, ಪ್ರಕಾಶ್ ಭಂಡಾರಿ,  ವಿಜಯ್ ಶೆಟ್ಟಿ ಸಜೀಪ ಗುತ್ತು,  
ಗಣೇಶ್ ಕೋಟ್ಯಾನ್, ಹರೀಶ್ ಮಡಿವಾಳ, ಸುರೇಶ್ ಅಂಚನ್,  ಸುರೇಶ್ ಕರ್ಕೇರ, ಯತೀಶ್ ಪೂಂಜ, ಉದಯ್ ಶೆಟ್ಟಿ, ಪ್ರಸಾದ್ ದೇವಾಡಿಗ, ರಕ್ಷನ್ ಸಾಲ್ಯಾನ್,  ರತನ್ ಪೂಜಾರಿ, ಸುರೇಶ್ ಶೆಟ್ಟಿ ಬಳ್ಕುಂಜೆ, ನಿಖಿಲ್ ಕೋಟ್ಯಾನ್,  ಚಿನ್ಮಯ್ ಸಾಲ್ಯಾನ್, ಚಂದ್ರಹಾಸ್ ರೈ, ನಿಶಾಂತ್ ರಾವ್, ರಜತ್ ದೇವಾಡಿಗ.
ವಿಶೇಷ ಆಮಂತ್ರಿತರಾಗಿ :ನ್ಯಾಯವಾದಿ ಸುಂದರ್ ಜೆ. ಶೆಟ್ಟಿ,  ತಿಲಕ್ ಕುಮಾರ್ ಸನಿಲ್,  ಗೋಪಾಲ್ ಕೋಟ್ಯಾನ್,  ಲಕ್ಷ್ಮಣ್ ಚಿತ್ರಾಪು, ಸುಂದರ್ ಮೊಯ್ಲಿ, ಕೃಷ್ಣ ಬಂಗೇರ, ಶ್ರೀಧರ್ ಅಮೀನ್, ಜಗದೀಶ್ ನಿಟ್ಟೆ.
ಸಾಂಸ್ಕೃತಿಕ ಸಮಿತಿ:ಕಾರ್ಯಾಧ್ಯಕ್ಷರಾಗಿ ವಿಜಯ ಶೆಟ್ಟಿ ಸಜೀಪ ಗುತ್ತು, ಕಾರ್ಯದರ್ಶಿಯಾಗಿ ಚಿನ್ಮಯ್ ಸಾಲ್ಯಾನ್, 
ಶನಿ ಪೂಜೆ ಸಮಿತಿ :ಕಾರ್ಯಾಧ್ಯಕ್ಷರಾಗಿ ಸುರೇಶ್ ಕರ್ಕೇರ, ಸದಸ್ಯರಾಗಿ ಲಕ್ಷ್ಮಣ್ ಚಿತ್ರಾಪು, ಉದಯಾನಂದ ಕರುಣಾಕರ್, ಸುರೇಶ್ ಅಂಚನ್,  ಗೋಪಾಲ್ ಕೋಟ್ಯಾನ್, ಭಜನೆ ಸಮಿತಿಯ ಭುವಾಜಿಯವರಾಗಿ ಸಚಿನ್ ಪೂಜಾರಿ ಪಲಿಮಾರು,  ಸುರೇಶ್ ಶೆಟ್ಟಿ ಬಳ್ಕುಂಜೆ,  ಚಂದ್ರಹಾಸ ರೈ,  ಸದಸ್ಯರಾಗಿ ತೇಜಸ್ ಪೂಜಾರಿ,  ನಾಗರಾಜ್ ಶ್ಯಾನುಭಾಗ್,  ಆಂತರಿಕ ಲೆಕ್ಕ ಪರಿಶೋಧಕರಾಗಿ ಸಂತೋಷ್ ಶೆಟ್ಟಿ ಯವರನ್ನು ಆಯ್ಕೆ ಮಾಡಲಾಯಿತು.
l

ತದ ನಂತರ ತಾ: 22/09/2025 ರಿಂದ 02/10/2025 ರ ವರೆಗೆ ನಡೆಯುವ ಶ್ರೀ ಜಗದಂಬಾ ಮಂದಿರದ 11 ನೇ ಶರನ್ನವರಾತ್ರಿ ಮಹೋತ್ಸವದ ಬಗ್ಗೆ ಚರ್ಚಿಸಿ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ರೂಪರೇಷೆ ನೀಡಲಾಯಿತು. 

ನಂತರ ನೂತನ ಅಧ್ಯಕ್ಷರಾಗಿ ಪುನರಾಯ್ಕೆಯಾದ  ದಿವಾಕರ್ ರೈ ರವರು ಆಯ್ಕೆಯಾದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಅಭಿನಂದಿಸಿ, ನವರಾತ್ರಿಗೆ ಮಂದಿರ ಸದಸ್ಯರು ಸಹಕರಿಸಬೇಕು ಎಂದರು. ಕೊನೆಗೆ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್ ವಂದಿಸಿದರು. 



Related posts

ಕರ್ನಾಟಕ ಸಂಘ ಕಲ್ಯಾಣ ವತಿಯಿಂದ ಶ್ರೀ ರಾಮ ನವಮಿ ಆಚರಣೆ

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಮಹಿಳಾ ವಿಭಾಗದ ವತಿಯಿಂದ ಅಷ್ಟ ವಿನಾಯಕ ದರ್ಶನ ಪ್ರವಾಸ.

Mumbai News Desk

ಬಂಟ್ಸ್ ಫೋರಮ್ ಮೀರಾ-ಭಾಯಂದರ್ : ‘ಬಂಟ ಕೂಟ-2026’ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ.

Mumbai News Desk

ಭಾಂಡೂಪ್ ಶ್ರೀ ಪಿಂಪಲೇಶ್ವರ ಮಹಾದೇವ ಮಂದಿರದಲ್ಲಿ ಶ್ರೀ ಶನೀಶ್ವರ ದೇವರ 47ನೇ ವಾರ್ಷಿಕ ಮಹಾಪೂಜೆ: ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆ!

Mumbai News Desk

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಡೊಂಬಿವಲಿ ಸ್ಥಳೀಯ ಕಛೇರಿ : ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ಮುಂಬಯಿ ಕನ್ನಡ ಸಂಘದ ದತ್ತಿ ಉಪನ್ಯಾಸ ಕಾರ್ಯಕ್ರಮ

Mumbai News Desk