July 22, 2026
Mumbai News Kannada
ಸುದ್ದಿ

ಜಗದಂಬ ಯುವ ವಿಭಾಗದ ವತಿಯಿಂದ ಮಕ್ಕಳಿಗೆ ಶೈಕ್ಷಣಿಕ ಪರಿಕರ ವಿತರಣೆ.







ಡೊಂಬಿವಲಿ ಪಶ್ಚಿಮದ ಯಕ್ಷ ಕಲಾ ಸಂಸ್ಥೆ ಸಂಚಾಲಿತ ಶ್ರೀ ಜಗದಂಬ ಮಂದಿರದ ಯುವ ವಿಭಾಗದ ಜಗದಂಬಾ ಯುವಕರ ಕಾಳಜಿಯ ಹೃದಯಗಳು ಈ ವಾರ್ಷಿಕ ದೀಪಾವಳಿಯ ಚಾರಿಟಿ ಉಪಕ್ರಮದ ಅಂಗವಾಗಿ ಮುರ್ಬಾದ್ನ ತುಲೈ ತಾಲ್ಲೂಕಿನ ಕಲಂಬೆ ಪೋಸ್ಟ್ನಲ್ಲಿರುವ ಬೊಂಡ್ಖಲ್ವಾಡಿ ಪ್ರಾಥಮಿಕ ಶಾಲೆಗೆ ನವೆಂಬರ್ 19 ರ ಭಾನುವಾರ ಬೆಳಿಗ್ಗೆ ಭೇಟಿ ನೀಡಿ ಶಿಶುವಿಹಾರದಿಂದ 5 ನೇ ತರಗತಿಯವರೆಗಿನ ಸುಮಾರು 70ಕ್ಕೂ ಅಧಿಕ ಮಕ್ಕಳಿಗೆ ವಿವಿಧ ಅಗತ್ಯದ ವಸ್ತುಗಳನ್ನು , ಮಕ್ಕಳಿಗೆ ಶೈಕ್ಷಣಿಕ ಪರಿಕರಗಳಾದ ಪೇಪರ್, ನೋಟ್ ಬುಕ್ ಗಳು, ಪೆನ್ನು, ಪೆನ್ಸಿಲ್, ಡ್ರಾಯಿಂಗ್ ಪುಸ್ತಕ, ಕಲರಿಂಗ್ ಸಾಮಗ್ರಿಗಳು, ಶಾಲಾ ಬ್ಯಾಗ್ ಗಳು, ವೈಟ್ ಬೋರ್ಡ್ ಗಳು, ಫಲಕಗಳು, ಮತ್ತು ಇನ್ನಿತರ ವಸ್ತುಗಳನ್ನು ನೀಡಿ ಆ ದಿನದ ಊಟೋಪಚಾರದ ವ್ಯವಸ್ಥೆಯನ್ನು ಮಾಡಿ ಆ ಮಕ್ಕಳ ಜೇವನದಲ್ಲಿ ದೀಪಾವಳಿಯ ಬೆಳಕಿನ ಮಂದಹಾಸವನ್ನು ಚೆಲ್ಲಿದ್ದಾರೆ.

ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರಸಾದ್ ದೇವಾಡಿಗ, ಸದಸ್ಯರುಗಳಾದ ವಿನೀಶ್ ದೇವಾಡಿಗ, ಅಕ್ಷಯ್ ಶೆಟ್ಟಿ, ಕಿರಣ್ ಪೂಜಾರಿ, ರತನ್ ಪೂಜಾರಿ, ಸಚಿನ್ ದೇವಾಡಿಗ ಮತ್ತಿತರ ಸದಸ್ಯರು ಈ ಕಾರ್ಯದಲ್ಲಿ ಭಾಗಿಯಾದರು. ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್, ಜೊತೆ ಕಾರ್ಯದರ್ಶಿ ಸಚಿನ್ ಪೂಜಾರಿ, ಜೊತೆ ಕೋಶಾಧಿಕಾರಿ ಸಂತೋಷ್ ಶೆಟ್ಟಿ, ದಿನೇಶ್ ಪೂಜಾರಿ ಮೊದಲಾದವರು ಈ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ಸಹಕರಿಸಿದರು.

ಶ್ರೀ ಜಗದಂಬ ಮಂದಿರದ ಗೌರವ ಅಧ್ಯಕ್ಷರು, ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿಯ ಸಂಪೂರ್ಣ ಸಹಕಾರ ದಿಂದ ಈ ಹಿಂದೆಯೂ ಹಲವಾರು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಅವರೊಂದಿಗೆ ಸಮಯ ಕಳೆದು, ಅವರ ಅಗತ್ಯತೆಗಳನ್ನು ಪೂರೈಸಲು ಸದಾ ಶ್ರಮಿಸುತ್ತಿರುವ ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರಸಾದ ದೇವಾಡಿಗ ಹಾಗೂ ಬಳಗದ ಕಾರ್ಯ ಪ್ರಶಂಸನೀಯ, ಶ್ರೀ ಜಗದಂಬೆ ಮಾತೆ ಇವರಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ನಡೆಸುವಂತೆ ಪ್ರೇರೇಪಿಸಿ, ಅನುಗ್ರಹಿಸಲಿ, ಸಹೃದಯಿ ಬಂಧುಗಳ ಸಹಕಾರ ಇವರಿಗೆ ಸದಾ ಇರಲಿ.



Related posts

ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಟಿ.ಕರ್ಕೇರ ಅವರಿಗೆ ಸಹಕಾರ ರತ್ನ ಪ್ರಶಸ್ತಿ

Mumbai News Desk

ಉಡುಪಿಯ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ

Mumbai News Desk

ವಸಯಿ ತಾಲೂಕ ಮೊಗವೀರ ಸಂಘದ ಆಯೋಜನೆಯಲ್ಲಿ ವಿಟಿಎಂಎಸ್ ಟ್ರೋಪಿ 2024ಕ್ಕೆ ಚಾಲನೆ

Mumbai News Desk

ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ವತಿಯಿಂದಹೊರ ರಾಜ್ಯದಲ್ಲೂ ಅಸಾಯಕರಿಗೆ ಸಹಾಯ ಹಸ್ತ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟ ವತಿಯಿಂದ ಪ್ರತಿಷ್ಠ ತ  ಹೋಟೆಲ್ ಉದ್ಯಮಿ ಶಿವಚಂದ್ರ ಶೆಟ್ಟಿ ದಂಪತಿಗಳಿಗೆ ಸನ್ಮಾನ

Mumbai News Desk

ತಿರುಮಲದಲ್ಲಿ ವಿಜೃಂಭಣೆಯಿಂದ ನಡೆದ ಪುರಂದರ ದಾಸರ ಆರಾಧನ ಮಹೋತ್ಸವ

Mumbai News Desk