
ಮುಂಬೈ: ಬಿಲ್ಲವರ ಅಸೋಸಿಯೇಷನ್, ಮುಂಬೈ ಕಲ್ವಾ ಸ್ಥಳೀಯ ಸಮಿತಿಯ ವತಿಯಿಂದ 171ನೇ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಸಮಾರಂಭವನ್ನು ಆದಿತ್ಯವಾರ ಸೆಪ್ಟೆಂಬರ್ 14, 2025 ರಂದು, ಕಲ್ವಾ (ಪಶ್ಚಿಮ), ಖಾರೆಗಾಂವ್ನ ಪಾರ್ಸಿಕ್ ನಗರದಲ್ಲಿರುವ ಹೋಟೆಲ್ ಅಮಿತ್ ಗಾರ್ಡನ್ನಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ವಿವರಗಳು:
ಬೆಳಿಗ್ಗೆ 9:00 ರಿಂದ 11:00 ರವರೆಗೆ: ಗಣಪತಿ ಮತ್ತು ಗುರು ಸ್ತೋತ್ರ ಮತ್ತು ಭಜನೆ
ಬೆಳಿಗ್ಗೆ 11:00 ರಿಂದ 11:45 ರವರೆಗೆ: ಕುಣಿತ ಭಜನೆ
ಬೆಳಿಗ್ಗೆ 11:45 ರಿಂದ ಮಧ್ಯಾಹ್ನ 12:45 ರವರೆಗೆ: ಸಭಾ ಕಾರ್ಯಕ್ರಮ
ಮಧ್ಯಾಹ್ನ 12:45 ರಿಂದ 1:00 ರವರೆಗೆ: ಮಂಗಳಾರತಿ
ಮಧ್ಯಾಹ್ನ 1:00 ರಿಂದ 2:00 ರವರೆಗೆ: ತೀರ್ಥ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ (ಶ್ರೀ ಉಮೇಶ್ ಟಿ. ಕರ್ಕೇರಾ)
ನಂತರ ಡಾ. ರಾಜಶೇಖರ್ ಕೋಟ್ಯಾನ್ ನಿರ್ದೇಶನದ
ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ‘ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿ’ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.
ಈ ಕಾರ್ಯಕ್ರಮಕ್ಕೆ ಎಲ್ಲರೂ ಬಂದು, ಭಾಗವಹಿಸಿ ಯಶಸ್ವಿಗೊಳಿಸುವಂತೆ ಬಿಲ್ಲವರ ಅಸೋಸಿಯೇಷನ್, ಮುಂಬೈ ಕಲ್ವಾ ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.




