ಮುಂಬೈಯ ಹಿರಿಯ ಸಾಮಾಜಿಕ ಸಂಘಟನೆಗಳಲ್ಲಿ ಒಂದಾದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ, ಚೈತನ್ಯ ಕಲಾವಿದರು ಬೈಲೂರು,ಇದರ ಕಲಾವಿದರಿಂದ “ಅಷ್ಟೆಮಿ ” ಸಾಂಸರಿಕ ತುಳು ನಾಟಕ ನವಂಬರ್ 9, ರವಿವಾರ ಅಪರಾನ್ಹ 2:30ಕ್ಕೆ, ಅಂಧೇರಿ ಪಶ್ಚಿಮ ಎಂ ವಿ ಎಂ ಎಜುಕೇಶನ್ ಮಾರ್ಗ, ಮೊಗವೀರ ಭವನದ ಶಾಲಿನಿ ಜಿ ಶಂಕರ್ ಕನ್ವೆನ್ಷನ್ ಸೆಂಟರ್ ನಲ್ಲಿ ಪ್ರದರ್ಶನಗೊಳ್ಳಲಿದೆ.
ಕಲಾ ಪ್ರೇಮಿಗಳು, ಉಚಿತ ಪ್ರವೇಶದ ನಾಟಕ ವೀಕ್ಷಿಸುವಂತೆ, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಗಣೇಶ್ ಕೆ ಕಾಂಚನ್, ಗೌರವ ಪ್ರಧಾನ ಕಾರ್ಯದರ್ಶಿ ದಿಲೀಪ್ ಕುಮಾರ್ ಮೂಲ್ಕಿ, ಗೌರವ ಕೋಶಾಧಿಕಾರಿ ದೇವರಾಜ್ ಎಚ್ ಕುಂದರ್, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ್ ಎಸ್ ಕರ್ಕೇರ, ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ದಯಾವತಿ ಎಂ ಸುವರ್ಣ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.
previous post




