ಮುಂಬಯಿ, ನ. 24: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರದ ಸದಸ್ಯರು ಹಾಗೂ ಹಿರಿಯ ಪತ್ರಕರ್ತರಾದ ಶ್ರೀನಿವಾಸ ಜೋಕಟ್ಟೆ ಅವರ ಧರ್ಮಪತ್ನಿ ವಿಜಯಲಕ್ಷ್ಮೀ ಎಸ್. ರಾವ್ (55) ಇಂದು ಮುಂಜಾನೆ ತೀವ್ರ ಹೃದಯಾಘಾತದಿಂದ ವಸಾಯಿ ಪೂರ್ವದ ಎವರ್ಶೈನ್ ಸಿಟಿಯ ಅವೆನ್ಯೂ ಫೇಸ್–2ನ ಎವರ್ಶೈನ್ ತುಲಿಪ್ ನಿವಾಸದಲ್ಲಿ ನಿಧನರಾದರು.
ಉಡುಪಿ–ಬ್ರಹ್ಮವಾರ ಮೂಲದ ಮೃತರು ಕುಟುಂಬ ಮತ್ತು ಬಂಧು–ಬಳಗವನ್ನು ಅಗಲಿದ್ದಾರೆ. ವಿಜಯಲಕ್ಷ್ಮೀ ರಾವ್ ಅವರ ಅಕಾಲಿಕ ನಿಧನಕ್ಕೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಹಾರಾಷ್ಟ್ರ ಘಟಕಗಳು, ಮಧ್ಯಮ ಮಿತ್ರರು, ಹಾಗೂ ಮುಂಬೈ ನ್ಯೂಸ್ ಪರಿವಾರ ತೀವ್ರ ಸಂತಾಪ ವ್ಯಕ್ತಪಡಿಸಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಹಾಗೂ ಅವರ ಪರಿವಾರಕ್ಕೆ ಆಘಾತವನ್ನು ಸಹನ ಮಾಡಲು ಧೈರ್ಯ ನೀಡಲೆಂದು ಪ್ರಾರ್ಥಿಸಿದ್ದಾರೆ.




