32 C
Mumbai
April 24, 2026
Mumbai News Kannada
ಪ್ರಕಟಣೆ

ನ.29 ರಂದು ವಿನಾಯಕ ಸೇವಾ ಸಮಿತಿ ವತಿಯಿಂದ ಡೊಂಬಿವಲಿಯಲ್ಲಿ ‘ಶನಿ ಮಹಾಪೂಜೆ’





ಡೊಂಬಿವಲಿ (ಪಶ್ಚಿಮ): ಇಲ್ಲಿನ ವಿನಾಯಕ ಸೇವಾ ಸಮಿತಿ ವತಿಯಿಂದ ಡೊಂಬಿವಲಿಯ ಉಮೇಶ ನಗರದಲ್ಲಿರುವ ಉಮಾ ಹೋಟೆಲ್ ಆವರಣದಲ್ಲಿ 6ನೇ ವರ್ಷದ ‘ಶನಿ ಮಹಾಪೂಜೆ’ ಯನ್ನು ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ಆಚರಿಸಲು ಸಿದ್ಧತೆ ನಡೆಸಿದೆ.

ಸ್ವಸ್ತಿಶ್ರೀ ಶುಭಕೃತ್ ನಾಮ ಸಂವತ್ಸರದ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ದಿನ, ಅಂದರೆ ದಿ: 29.11.2025ನೇ ಶನಿವಾರದಂದು ಈ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

​ ಭಕ್ತಾಭಿಮಾನಿಗಳನ್ನು ಸಹಕುಟುಂಬ ಹಾಗೂ ಬಂಧು-ಮಿತ್ರ ಸಮೇತ ಬಂದು ಶ್ರೀದೇವರ ಕೃಪೆಗೆ ಪಾತ್ರರಾಗಿ ತೀರ್ಥಪ್ರಸಾದವನ್ನು ಸ್ವೀಕರಿಸಬೇಕೆಂದು ಸಮಿತಿಯ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ..

ಕಾರ್ಯಕ್ರಮಗಳ ವಿವರ:

ಸಮಯಕಾರ್ಯಕ್ರಮ
ಬೆಳಿಗ್ಗೆ 12:00ಶನಿದೇವರ ಕಲಶ ಪ್ರತಿಷ್ಠೆ
ಮಧ್ಯಾಹ್ನ 12:30ಸಂಪೂರ್ಣ ಶನಿಗ್ರಂಥ ಪಾರಾಯಣ (ಯಕ್ಷಗಾನ ಹಿಮ್ಮೇಳನದಲ್ಲಿ)
ಸಾಯಂ 07:00ಭಜನೆ
ರಾತ್ರಿ 07:30ಮಂಗಳಾರತಿ – ತೀರ್ಥಪ್ರಸಾದ
ರಾತ್ರಿ 08:30ಮಹಾಪ್ರಸಾದ (ಅನ್ನ ಸಂತರ್ಪಣೆ)

ಸ್ಥಳ: ಉಮಾ ಹೋಟೆಲ್, ಉಮೇಶ ನಗರ, ಡೊಂಬಿವಲಿ (ಪಶ್ಚಿಮ).

ಸಂಘಟಕರು: ವಿನಾಯಕ ಸೇವಾ ಸಮಿತಿ (ಮೆನೆಜಿಂಗ ಕಮಿಟಿ)

ಸಂಪರ್ಕ:

  • ​Co. ಸುವರ್ಣಾ ಟೆಲ‌ರ್, ಉಮೇಶ ನಗರ ನಾಕಾ, ರೇತಿ ಬಂದರ ರೋಡ್, ಡೊಂಬಿವಲಿ ಪಶ್ಚಿಮ.
  • ​ದೂರವಾಣಿ ಸಂಖ್ಯೆಗಳು: 9323032503 / 8097137106.



Related posts

ಶ್ರೀ ಮಂತ್ರ ದೇವಿ ಚಾರಿಟೇಬಲ್ ಟ್ರಸ್ಟ್: ಡಿ.16ರಂದು ವಾರ್ಷಿಕ ಮಹಾಪೂಜೆ

Mumbai News Desk

ಜ. 24:ಪರಮ ಪೂಜ್ಯ ಶ್ರೀ ವಿಜಯಾನಂದ ಸ್ವಾಮೀಜಿ ಅವರ 75ನೇ ಜನ್ಮದಿನಾಚರಣೆಯ ಅಂಗವಾಗಿ ವಜ್ರ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ

Mumbai News Desk

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಅ. 26 ರಂದು 24ನೇ ವಾರ್ಷಿಕ ಮಹಾಸಭೆ, ರಜತ ಸಂಭ್ರಮಕ್ಕೆ ಚಾಲನೆ

Mumbai News Desk

ಕರ್ನಾಟಕ ಸಂಘ ಕಲ್ಯಾಣ: ಮಾ. 9ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk

ಕಾಂದಿವಲಿ ಕನ್ನಡ ಸಂಘ ಮಹಿಳಾ ವಿಭಾಗ,ಜು 7 ರಂದು ಮಹಿಳಾ ಸದಸ್ಯೆಯರಿಂದ ‘ಸುದರ್ಶನ ವಿಜಯ’ ತುಳು ಯಕ್ಷಗಾನ ತಾಳಮದ್ದಳೆ.

Mumbai News Desk

ಫೆ.28 ರಂದು ಡೊಂಬಿವಲಿಯಲ್ಲಿ ಶನಿವಾರ ಸಮೂಹಿಕ ಶ್ರೀ ಶನೀಶ್ವರ ಮಹಾಪೂಜೆ ಮತ್ತು ತಾಳಮದ್ದಳೆ

Mumbai News Desk