ಉಡುಪಿ :ಅಷ್ಟಮಠಗಳಲ್ಲಿನ ಪುತ್ತಿಗೆ ಮಠ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥರು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಣದಲ್ಲಿ ಶುಕ್ರವಾರ ಉಡುಪಿ ಶ್ರೀ ಪೇಜಾವರ ಮಠದ ಮುಂಬಯಿ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ ಕಾಲೋನಿ ಇಲ್ಲಿನ ಮುಂಬಯಿ ಶಾಖೆಯ ಪ್ರಬಂಧಕರಾದ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಅವರಿಗೆ ಶಾಲು ಹೊದಿಸಿ, ಪೇಟ ತೊಡಿಸಿ ಸ್ಮರಣಿಕಾ ಫಲಕ
ಪ್ರದಾನಿಸಿ ಪರ್ಯಾಯ ಗೌರವವನ್ನಿತ್ತು ಶುಭಾಶೀರ್ವಾದಗೈದರು.
ಈಸಂದರ್ಭದಲ್ಲಿ ಪುತ್ತಿಗೆ ಶಿಷ್ಯರಾದ,
ಸುಶೀಂದ್ರ ತೀರ್ಥರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಉಡುಪಿಯ ಪುತ್ತಿಗೆ ಮಠದಲ್ಲಿ,
ಪೂಜಿಸಲ್ಪಡುವ ಪಾಂಡುರಂಗ (ವಿಠಲ) ದೇವರ ಅನುಗ್ರಹದಿಂದ ದೈತ ತತ್ವಶಾಸ್ತ್ರದ ಸ್ಥಾಪಕ ಮಧ್ವಾಚಾರ್ಯರಿಂದ ಸ್ಥಾಪಿತ ಮಾಧ್ವ ವೈಷ್ಣವ ಪಂಥದ ಗುರು ಪರಂಪರೆಯ ಪುತ್ತಿಗೆ ಮಠದ 29ನೇ ಪೀಠಾಧಿಪತಿ ಸುಗುಣೇಂದ ಶ್ರೀಗಳ ಅಭಯಹಸ್ತಗಳ ಈ ಗೌರವದಿಂದ ಧನ್ಯನು.
ಈ ಗೌರವ ಮುಂಬಯಿ ಭಕ್ತರಿಗೆ ಸಂದ ಮನ್ನಣೆಯಾಗಿದೆ ಎಂದು ಡಾ। ರಾಮದಾಸ ಉಪಾಧ್ಯಾಯ ತಿಳಿಸಿದ್ದಾರೆ.




