30 C
Mumbai
April 24, 2026
Mumbai News Kannada
ತುಳುನಾಡು

ತುಳು ರಂಗಭೂಮಿಯಲ್ಲಿ ಐತಿಹಾಸಿಕ ಮೈಲಿಗಲ್ಲು:ಶ್ರೀಮತಿ ಲಾವಣ್ಯ ವಿಶ್ವಾಸ್ ದಾಸ್ ನಿರ್ದೇಶನದ “ಜೋಡು ಜೀಟಿಗೆ “ 100ನೇ ಪ್ರದರ್ಶನ – 100 ಕಲಾವಿದರಿರುವ ಏಕೈಕ ತಂಡದ ಅಪೂರ್ವ ಸಾಧನೆ





ತುಳು ರಂಗಭೂಮಿಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯುತ್ತಿರುವ ಸಾಯಿ ಶಕ್ತಿ ಕಲಾ ಬಳಗದ ಜನಪ್ರಿಯ ತುಳು ನಾಟಕ ‘ಜೋಡು ಜೀಟಿಗೆ ’ ತನ್ನ 100ನೇ ಪ್ರದರ್ಶನದತ್ತ ಯಶಸ್ವಿಯಾಗಿ ಹೆಜ್ಜೆ ಹಾಕಿದ್ದು, ಇದೀಗ ರಂಗಭೂಮಿ ಪ್ರೇಮಿಗಳಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ. ಜನಪದ ಸಂಸ್ಕೃತಿ, ಸಾಮಾಜಿಕ ಸಂದೇಶ ಹಾಗೂ ಮನರಂಜನೆಯ ಸಮನ್ವಯ ಹೊಂದಿರುವ ಈ ನಾಟಕವು ಆರಂಭದಿಂದಲೇ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದು, ತಡರಾತ್ರಿ ವರೆಗೂ ಕದಲದ ಪ್ರೇಕ್ಷಕ ಬಳಗವೇ ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ವಿಶೇಷವೆಂದರೆ, ಒಂದೇ ತಂಡದಲ್ಲಿ 100ಕ್ಕೂ ಹೆಚ್ಚು ಕಲಾವಿದರು ಸೇರಿಕೊಂಡು ನಿರಂತರವಾಗಿ ಪ್ರದರ್ಶನ ನೀಡುತ್ತಿರುವ ಅಪರೂಪದ ಸಾಧನೆ ‘ಜೋಡು ಜೀಟಿಗೆ ’ಯದ್ದು. ಕಲಾವಿದರು, ಸಂಗೀತಗಾರರು, ತಂತ್ರಜ್ಞರು, ವೇಷಭೂಷಣ ಹಾಗೂ ವೇದಿಕೆ ವಿನ್ಯಾಸಕಾರರು ಸೇರಿ ಒಟ್ಟಾಗಿ ಕಾರ್ಯನಿರ್ವಹಿಸುತ್ತಿರುವ ಈ ಬೃಹತ್ ತಂಡವು ತುಳು ರಂಗಭೂಮಿಯ ಸಂಘಟಿತ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.

‘ಜೋಡು ಜೀಟಿಗೆ’ ನಾಟಕವು ಕರ್ನಾಟಕದ ವಿವಿಧ ಭಾಗಗಳಲ್ಲದೇ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮುಂಬೈ , ಕೇರಳ ರಾಜ್ಯ ಸೇರಿದಂತೆ ಹೊರರಾಜ್ಯಗಳಲ್ಲಿಯೂ ಯಶಸ್ವಿ ಪ್ರದರ್ಶನಗಳನ್ನು ನೀಡಿದ್ದು, ಪ್ರತಿಯೊಂದು ಪ್ರದರ್ಶನದಲ್ಲೂ ಸಾವಿರಾರು ಪ್ರೇಕ್ಷಕರನ್ನು ಸೆಳೆಯುವ ಮೂಲಕ ತುಳು ಜನಪದ ರಂಗಭೂಮಿಯ ಮಹತ್ವವನ್ನು ಮರುಸಾಬೀತುಪಡಿಸಿದೆ. ಕಥಾವಸ್ತುವಿನ ಶಕ್ತಿ, ಕಲಾವಿದರ ಜೀವಂತ ಅಭಿನಯ, ಜನಪದ ಸಂಗೀತ ಮತ್ತು ಭಾವನಾತ್ಮಕ ಸಂಭಾಷಣೆಗಳು ಈ ನಾಟಕದ ಪ್ರಮುಖ ಆಕರ್ಷಣೆಯಾಗಿವೆ.

ಈ ಐತಿಹಾಸಿಕ 100ನೇ ಪ್ರದರ್ಶನವು ದಿನಾಂಕ 24-01-2026ರಂದು ರಾತ್ರಿ 10 ಗಂಟೆಗೆ, ಕಿರಿಮಂಜೇಶ್ವರ ನಾಗೂರು ಪ್ರದೇಶದಲ್ಲಿ ನಡೆಯಲಿದ್ದು, 101ನೇ ಪ್ರದರ್ಶನವೂ ಅದೇ ದಿನ ಉಡುಪಿ ಜಿಲ್ಲೆಯ ಪಟ್ಲ ಮಣಿಪಾಲದ ವೇದಿಕೆಯಲ್ಲಿ ಆಯೋಜನೆಗೊಳ್ಳಲಿದೆ. ಈ ವಿಶೇಷ ಪ್ರದರ್ಶನಕ್ಕೆ ರಂಗಭೂಮಿ ಪ್ರೇಮಿಗಳು, ಸಾಂಸ್ಕೃತಿಕ ಆಸಕ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ನಾಟಕದ ನಿರ್ಮಾಣ ಮತ್ತು ನಿರ್ದೇಶನ ತಂಡದ ಸಾರಥಿ ಶ್ರೀಮತಿ ಲಾವಣ್ಯ ವಿಶ್ವಾಸ್ ದಾಸ್ , ರಚನೆ ಮತ್ತು ಸಾಹಿತ್ಯ ಶ್ರೀ ಕೀರ್ತನ್ ಭಂಡಾರಿ ಕುಳಾಯಿ, ಪರಿಕಲ್ಪನೆ ಮತ್ತು ನಿರ್ವಹಣೆ ಶ್ರೀ ಗೌರವ್ ಶೆಟ್ಟಿಗಾರ್ ಮಠದಕಣಿ ಹಾಗೂ
ವೇದಿಕೆಯ ಮೇಲಿನ ಕಲಾವಿದರ ಜೊತೆಗೆ ವೇದಿಕೆಯ ಹಿಂದೆ ದುಡಿಯುವ ಪ್ರತಿಯೊಬ್ಬ ತಂತ್ರಜ್ಞ, ಸಂಘಟಕ, ಸ್ವಯಂಸೇವಕ ಹಾಗೂ ಪ್ರೇಕ್ಷಕರ ನಿರಂತರ ಬೆಂಬಲವೇ ಈ ಯಶಸ್ಸಿನ ಮೂಲ ಶಕ್ತಿ ಎನ್ನಬಹುದು. ‘ಜೋಡು ಜೀಟಿಗೆ’ಯ 100ನೇ ಪ್ರದರ್ಶನದ ಈ ಸಾಧನೆ, ತುಳು ರಂಗಭೂಮಿಯ ಬೆಳವಣಿಗೆಯಲ್ಲಿ ಮಹತ್ವದ ಮೈಲಿಗಲ್ಲಾಗಿ ದಾಖಲಾಗಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.



Related posts

ಉದ್ಯಮಿ ಮನೋಹರ ಎಸ್ ಶೆಟ್ಟಿ ದಂಪತಿಗಳಿಗೆ : ಕಾಪು ಬಂಟರ ಸಂಘದಿಂದ ಸನ್ಮಾನ

Mumbai News Desk

ಕುಲಶೇಖರ ವೀರನಾರಾಯಣ ದೇವಸ್ಥಾನದ ಮೇಲ್ಛಾವಣಿ  ಲೋಕಾರ್ಪಣೆ

Mumbai News Desk

ಕಾಪು: ಗಾಳಿ – ಮಳೆಗೆ ಮನೆಗೆ ಮರಬಿದ್ದು ಅಪಾರ ನಷ್ಟ.

Mumbai News Desk

ಹೆಜಮಾಡಿ ಕೋಡಿಕರೆ ಬಿಲ್ಲವರ ಸಮಿತಿ – ವಿದ್ಯಾರ್ಥಿವೇತನ ವಿತರಣಾ ಹಾಗೂ ಪ್ರತಿಭಾ ಪುರಸ್ಕಾರ

Mumbai News Desk

ಮುಲ್ಕಿ ಬಪ್ಪನಾಡು ದೇವಸ್ಥಾನದಲ್ಲಿ ಭವ್ಯ ಸ್ವಾಗತ ಗೋಪುರ ನಿರ್ಮಾಣಕ್ಕೆ ಬಿಲ್ಲವ ಸಮಾಜದ ಸಿದ್ಧತೆ

Mumbai News Desk

ನಮ್ಮ ಕಾಪು ನ್ಯೂಸ್ ಆಡಳಿತ ನಿರ್ದೇಶಕ ವಿಕ್ಕಿ ಮಡುಂಬು : ಉಡುಪಿ ಬೊಬ್ಬರ್ಯ ದೈವಸ್ಥಾನದಲ್ಲಿ ಸನ್ಮಾನ

Mumbai News Desk