ದಿ. ದೇಜಪ್ಪ ಕೋಟ್ಯಾನ್ ಅವರ ಧರ್ಮಪತ್ನಿ ಶ್ರೀಮತಿ ಗಿರಿಜಾ ದೇಜಪ್ಪ ಕೋಟ್ಯಾನ್( 90 )ಅವರು ಇಂದು (ಫೆಬ್ರವರಿ 25) ಮುಂಜಾನೆ ಅಲ್ಪಕಾಲದ ಅಸೌಖ್ಯದಿಂದ ಭಾಯಂದರ್ ಪಶ್ಚಿಮ ಮ್ಯಾಗ್ನಮ್ ಪ್ಲಾಜಾ ಸಂಕೀರ್ಣದ ಸ್ವಗ್ರಹದಲ್ಲಿ ನಿಧನರಾದರು.
ಅವರು ಮೂಲತಃ ಪಡುಬಿದ್ರಿಯವರಾಗಿದ್ದು ಅವರ ಪತಿ ದಿ. ದೇಜಪ್ಪ ಕೋಟ್ಯಾನ್ ಅವರು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಭಿವೃದ್ಧಿಯಲ್ಲಿ ಸುಮಾರು 40 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಇಬ್ಬರು ಪುತ್ರಿಯರಾದ ಹೇಮ ಭಾಸ್ಕರ್, ಮಾಲ ಕೋಟ್ಯಾನ್, ಮೊಮ್ಮಕ್ಕಳು, ಅಳಿಯ ಹಾಗೂ ಅಪಾರ ಬಂದು ವರ್ಗವನ್ನು ಅಗಲಿದ್ದಾರೆ. ಮೃತರ ಪುತ್ರಿ ಹಾಗೂ ಅಳಿಯ ಭಾರತ್ ಬ್ಯಾಂಕ್ ನಲ್ಲಿ ಸೇವೆಗೈದು ಇತ್ತೀಚೆಗೆ ನಿವೃತ್ತರಾಗಿದ್ದರು.
ಅವರ ನಿಧನಕ್ಕೆ ಭಾರತ್ ಬ್ಯಾಂಕಿನ ನಿವೃತ್ತ ಮತ್ತು ಪ್ರಸ್ತುತ ಸಿಬ್ಬಂದಿ ವರ್ಗ, ಬಿಲ್ಲವರ ಅಸೋಸಿಯೇಷನ್ ನ ಭಾಯಂದರ್ ಸಮಿತಿಯ ಮುಖ್ಯ ಸಲಹೆಗಾರ ಚಿತ್ರಾಪು ಕೆ. ಎಂ. ಕೋಟ್ಯಾನ್, ಭಾರತ್ ಬ್ಯಾಂಕ್ ನ ನಿರ್ದೇಶಕ ನರೇಶ್ ಪೂಜಾರಿ ಸಂತಾಪ ವ್ಯಕ್ತಪಡಿಸಿದ್ದಾರೆ.




