30 C
Mumbai
April 25, 2026
Mumbai News Kannada
ಸುದ್ದಿ

ಸಂತಾಪ: ಹಿರಿಯ ಸಮಾಜ ಸೇವಕ ಭಾಂಡುಪ್ ಸುಂದರ್ ಆರ್. ಸಾಲಿಯಾನ್ ನಿಧನ





ಮುಂಬೈ, ಭಾಂಡುಪ್: ಮೂಲತಃ ಉಡುಪಿ ಜಿಲ್ಲೆಯ ಎರ್ಮಾಳಿನವರಾಗಿದ್ದು, ದಶಕಗಳಿಂದ ಮುಂಬೈನ ಭಾಂಡುಪ್‌ನಲ್ಲಿ ನೆಲೆಸಿದ್ದ ಹಿರಿಯರಾದ ಸುಂದರ್ ಆರ್. ಸಾಲಿಯಾನ್ (80) ಅವರು ಇಂದು ಮುಂಜಾನೆ ನಿಧನರಾದರು.

​ಮೃತರು ವೃತ್ತಿಯಲ್ಲಿ ‘ನಿತ್ಯಾನಂದ ಟೈಲರ್ಸ್’ ಸಂಸ್ಥೆಯ ಮಾಲೀಕರಾಗಿ ಪರಿಚಿತರಾಗಿದ್ದರು. ಭಾಂಡುಪ್ ಪಶ್ಚಿಮದ ಟ್ಯಾಂಕ್ ರೋಡ್ ನಿವಾಸಿಯಾಗಿದ್ದ ಇವರು, ಮೃದು ಸ್ವಭಾವ ಹಾಗೂ ಸಮಾಜಮುಖಿ ಚಿಂತನೆಗಳಿಂದ ಸ್ಥಳೀಯವಾಗಿ ಎಲ್ಲರ ಪ್ರೀತಿಪಾತ್ರರಾಗಿದ್ದರು.

​ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಅಂತಿಮ ಸಂಸ್ಕಾರ:

ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 2:00 ಗಂಟೆಗೆ ಭಾಂಡುಪ್ ಪಶ್ಚಿಮದ ಟ್ಯಾಂಕ್ ರೋಡ್‌ನಲ್ಲಿರುವ ಅವರ ಸ್ವಗೃಹ ‘ವಕ್ರತುಂಡ ಪ್ಯಾಲೇಸ್’ (ಬಿ ವಿಂಗ್, ಫ್ಲಾಟ್ ನಂ. 303) ನಿಂದ ಹೊರಟು ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.



Related posts

ಮಂಗಳೂರು-ಮಸ್ಕತ್ ನೇರ ವಿಮಾನಯಾನ ಭಾನುವಾರದಿಂದ (ಮಾ. 1)ಪುನರಾರಂಭ: ಕ್ಯಾಪ್ಟನ್ ಬ್ರಿಜೇಶ್ ಚೌಟ

Mumbai News Desk

ಶಬರಿಮಲೆ ಯಾತ್ರೆಗೆ ಈ ವರ್ಷದಿಂದ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ

Mumbai News Desk

ದೆಹಲಿ : ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆ

Mumbai News Desk

ಆಯೋದ್ಯ ಶ್ರೀರಾಮ ಮಂದಿರದಲ್ಲಿ ಹರೀಶ್ ಪೂಜಾರಿ ಅವರಿಂದ ಸೇಕ್ಸೋಪೋನ್ ವಾದನ

Mumbai News Desk

ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಪ್ರದಾನ ಸಮಾರಂಭ “ನೆರವು”

Mumbai News Desk

ಗೋವಾದ ನೈಟ್ ಕ್ಲಬ್ ನಲ್ಲಿ ಭೀಕರ ಅಗ್ನಿ ದುರಂತ: 23 ಮಂದಿ ಸಾವು

Mumbai News Desk