August 4, 2026
Mumbai News Kannada
ಸುದ್ದಿ

ಸಂತಾಪ: ಹಿರಿಯ ಸಮಾಜ ಸೇವಕ ಭಾಂಡುಪ್ ಸುಂದರ್ ಆರ್. ಸಾಲಿಯಾನ್ ನಿಧನ





ಮುಂಬೈ, ಭಾಂಡುಪ್: ಮೂಲತಃ ಉಡುಪಿ ಜಿಲ್ಲೆಯ ಎರ್ಮಾಳಿನವರಾಗಿದ್ದು, ದಶಕಗಳಿಂದ ಮುಂಬೈನ ಭಾಂಡುಪ್‌ನಲ್ಲಿ ನೆಲೆಸಿದ್ದ ಹಿರಿಯರಾದ ಸುಂದರ್ ಆರ್. ಸಾಲಿಯಾನ್ (80) ಅವರು ಇಂದು ಮುಂಜಾನೆ ನಿಧನರಾದರು.

​ಮೃತರು ವೃತ್ತಿಯಲ್ಲಿ ‘ನಿತ್ಯಾನಂದ ಟೈಲರ್ಸ್’ ಸಂಸ್ಥೆಯ ಮಾಲೀಕರಾಗಿ ಪರಿಚಿತರಾಗಿದ್ದರು. ಭಾಂಡುಪ್ ಪಶ್ಚಿಮದ ಟ್ಯಾಂಕ್ ರೋಡ್ ನಿವಾಸಿಯಾಗಿದ್ದ ಇವರು, ಮೃದು ಸ್ವಭಾವ ಹಾಗೂ ಸಮಾಜಮುಖಿ ಚಿಂತನೆಗಳಿಂದ ಸ್ಥಳೀಯವಾಗಿ ಎಲ್ಲರ ಪ್ರೀತಿಪಾತ್ರರಾಗಿದ್ದರು.

​ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಅಂತಿಮ ಸಂಸ್ಕಾರ:

ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 2:00 ಗಂಟೆಗೆ ಭಾಂಡುಪ್ ಪಶ್ಚಿಮದ ಟ್ಯಾಂಕ್ ರೋಡ್‌ನಲ್ಲಿರುವ ಅವರ ಸ್ವಗೃಹ ‘ವಕ್ರತುಂಡ ಪ್ಯಾಲೇಸ್’ (ಬಿ ವಿಂಗ್, ಫ್ಲಾಟ್ ನಂ. 303) ನಿಂದ ಹೊರಟು ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.



Related posts

ವೇದಮೂರ್ತಿ ಪಂಜ ಭಾಸ್ಕರ ಭಟ್‌ಗೆ ‘ವೇದವಿಭೂಷಣ’ ಪ್ರಶಸ್ತಿ

Mumbai News Desk

2026ರ ಪಂಚರಾಜ್ಯಗಳ ಚುನಾವಣಾ ಸಮರ: ಮತ ಎಣಿಕೆಯ ಕ್ಷಣ ಕ್ಷಣದ ಸಮಗ್ರ ಮಾಹಿತಿ

Mumbai News Desk

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿಗೆ ಮುಂಬೈಯ ನಿಷ್ಠಾವಂತ ಪತ್ರಕರ್ತ ನವೀನ್ ಕೆ ಇನ್ನ ಆಯ್ಕೆ.

Mumbai News Desk

ಕಾಂದಿವಲಿ: ಯೂನಿಯನ್ ಬ್ಯಾಂಕ್ ನಿವೃತ್ತ ಅಧಿಕಾರಿ ಕುಸುಮಲತಾ ಸುವರ್ಣ ನಿಧನ

Mumbai News Desk

ಜಾಗತಿಕ ಮಟ್ಟದಲ್ಲಿ ಕಾರ್ಕಳದ ಪ್ರತಿಭೆ: ಇಥಿಯೋಪಿಯದಲ್ಲಿ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ ನಿಟ್ಟೆಯ ವಿಶಾಲ್ ಪೂಜಾರಿ

Mumbai News Desk

ಮಾಜಿ ಶಾಸಕ ಗೋಪಾಲ್ ಭಂಡಾರಿ ಅವರ ಪುತ್ರ ಸುದೀಪ್ ಆತ್ಮಹತ್ಯೆಗೆ ಶರಣು

Mumbai News Desk