28 C
Mumbai
September 19, 2026
Mumbai News Kannada
ಸುದ್ದಿ

ಸಂತಾಪ: ಹಿರಿಯ ಸಮಾಜ ಸೇವಕ ಭಾಂಡುಪ್ ಸುಂದರ್ ಆರ್. ಸಾಲಿಯಾನ್ ನಿಧನ





ಮುಂಬೈ, ಭಾಂಡುಪ್: ಮೂಲತಃ ಉಡುಪಿ ಜಿಲ್ಲೆಯ ಎರ್ಮಾಳಿನವರಾಗಿದ್ದು, ದಶಕಗಳಿಂದ ಮುಂಬೈನ ಭಾಂಡುಪ್‌ನಲ್ಲಿ ನೆಲೆಸಿದ್ದ ಹಿರಿಯರಾದ ಸುಂದರ್ ಆರ್. ಸಾಲಿಯಾನ್ (80) ಅವರು ಇಂದು ಮುಂಜಾನೆ ನಿಧನರಾದರು.

​ಮೃತರು ವೃತ್ತಿಯಲ್ಲಿ ‘ನಿತ್ಯಾನಂದ ಟೈಲರ್ಸ್’ ಸಂಸ್ಥೆಯ ಮಾಲೀಕರಾಗಿ ಪರಿಚಿತರಾಗಿದ್ದರು. ಭಾಂಡುಪ್ ಪಶ್ಚಿಮದ ಟ್ಯಾಂಕ್ ರೋಡ್ ನಿವಾಸಿಯಾಗಿದ್ದ ಇವರು, ಮೃದು ಸ್ವಭಾವ ಹಾಗೂ ಸಮಾಜಮುಖಿ ಚಿಂತನೆಗಳಿಂದ ಸ್ಥಳೀಯವಾಗಿ ಎಲ್ಲರ ಪ್ರೀತಿಪಾತ್ರರಾಗಿದ್ದರು.

​ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಅಂತಿಮ ಸಂಸ್ಕಾರ:

ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 2:00 ಗಂಟೆಗೆ ಭಾಂಡುಪ್ ಪಶ್ಚಿಮದ ಟ್ಯಾಂಕ್ ರೋಡ್‌ನಲ್ಲಿರುವ ಅವರ ಸ್ವಗೃಹ ‘ವಕ್ರತುಂಡ ಪ್ಯಾಲೇಸ್’ (ಬಿ ವಿಂಗ್, ಫ್ಲಾಟ್ ನಂ. 303) ನಿಂದ ಹೊರಟು ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.



Related posts

ಜೆ. ಬಿ. ನಗರ : ಸುನಂದಾ ಕೇಶವ ಶ್ರೀಯಾನ್ ನಿಧನ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣಕ್ಕೆ ಶಶಿಧರ ಶೆಟ್ಟಿ ಬರೋಡಾ ಅವರಿಂದ 1.25 ಕೋಟಿ ರೂ. ದೇಣಿಗೆ: ದ್ವಿತೀಯ ಹಂತದ ಕಾಮಗಾರಿಗೆ ಚಾಲನೆ: ವಿಶೇಷ ಸಭೆ

Mumbai News Desk

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನಾ ನೇತಾರ ಮನೋಹರ್ ಜೋಷಿ ವಿಧಿವಶ

Mumbai News Desk

ಗೋರೆಗಾಂವ್ ; ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ನ ಆಧ್ಯಕ್ಷ, ಸಮಾಜಸೇವಕ ಪುರುಷೋತ್ತಮ ಕೆ. ಐಲ್ ನಿಧನ

Mumbai News Desk

ಕಾಂದಿವಲಿ: ಯೂನಿಯನ್ ಬ್ಯಾಂಕ್ ನಿವೃತ್ತ ಅಧಿಕಾರಿ ಕುಸುಮಲತಾ ಸುವರ್ಣ ನಿಧನ

Mumbai News Desk

  ’ಕಾಂತಾರ ಚಾಪ್ಟರ್ 1’ ಸೆಟ್​​ನಲ್ಲಿ ಮತ್ತೊಂದು ಭಾರಿ ಅವಘಡ, ರಿಷಬ್ ಶೆಟ್ಟಿ ಸಹಿತ 30 ಜನ ಸಹಕಲಾವಿದರುಅಪಾಯದಿಂದ ಪಾರು

Mumbai News Desk