32 C
Mumbai
April 24, 2026
Mumbai News Kannada
ತುಳುನಾಡು

ಮುಲ್ಕಿ : ಹೊಸ ಅಂಗಣ ‘ತಿಂಗಳ ಬೆಳಕು’ ಕಾರ್ಯಕ್ರಮದಲ್ಲಿ ಸವೀನ್ ಪಂಬದ ಅವರಿಗೆ ಸನ್ಮಾನ





ಮುಲ್ಕಿಯ ಹೊಸ ಅಂಗಣ ಮಾಸ ಪತ್ರಿಕೆಯ ವತಿಯಿಂದ ಆಯೋಜಿಸಲಾಗಿದ್ದ ‘ತಿಂಗಳ ಬೆಳಕು’ ಸರಣಿ ಕಾರ್ಯಕ್ರಮದಲ್ಲಿ ಏಪ್ರಿಲ್ ತಿಂಗಳ ಪತ್ರಿಕೆಯನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲಾಯಿತು. ಮುಲ್ಕಿಯ ಪುನರೂರು ಟ್ಯೂರಿಸ್ಟ್ ಹೊಟೇಲ್ ಸಭಾಂಗಣದಲ್ಲಿ ನಡೆದ ಈ ವಿಶೇಷ ಸಮಾರಂಭದ ಅಧ್ಯಕ್ಷತೆಯನ್ನು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿರುವ ಸವೀನ್ ಪಂಬದ ಅವರನ್ನು ಗುರುತಿಸಿ, ಅವರಿಗೆ ಗೌರವಪೂರ್ವಕವಾಗಿ ಸನ್ಮಾನ ಮಾಡಲಾಯಿತು. ಇಂತಹ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಮುಂದಿನ ಪೀಳಿಗೆಗೆ ಮತ್ತು ಸಾಧಕರಿಗೆ ಉತ್ತಮ ಕೆಲಸ ಮಾಡಲು ದೊಡ್ಡ ಪ್ರೇರಣೆಯಾಗುತ್ತದೆ ಎಂದು ಪುನರೂರು ಆಶಯ ವ್ಯಕ್ತಪಡಿಸಿದರು.


ಈ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಹರ್ಷರಾಜ್ ಶೆಟ್ಟಿ, ಗುತ್ತಿನಾರ್ ವಿಶು ಕುಮಾರ್ ಕಲ್ಲಟ್ಟೆ, ಕೇಶವಾನಂದ ಸ್ವಾಮೀಜಿ ಚಿತ್ರಾಪು, ಅತಿಕಾರು ಬೆಟ್ಟು ಗ್ರಾ. ಪ. ಮಾಜಿ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಹಾಗೂ ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ರಮೇಶ್ ಅಮೀನ್ ಕೊಕ್ಕದಕಲ್, ಸರೋಜಿನಿ ಸುವರ್ಣ, ಜನಾರ್ದನ್ ಬಂಗೇರ ಕೆ.ಎಸ್ ರಾವ್ ನಗರ, ಕರುಣಾಕರ ಸುವರ್ಣ, ನಿವೃತ್ತ ಬ್ಯಾಂಕ್ ಪ್ರಬಂಧಕ ಸುರೇಂದ್ರ ಜಿ. ಶೆಣೈ, ವಾಸು ಪೂಜಾರಿ ಚಿತ್ರಾಪು, ಜಯಪಾಲ ಶೆಟ್ಟಿ ಐಕಳ, ಉದ್ಯಮಿ ಜೋನ್ ಕ್ವಾಡ್ರಸ್, ನಂದಾ ಪಾಯಸ್ , ವಕೀಲ ರಮೇಶ್ ಕಾಮತ್ ಮತ್ತು ಜಯರಾಮ್ ಬಿ. ಎಸ್ ಮುಂತಾದ ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು. ಹರಿಶ್ಚಂದ್ರ ಪಿ. ಸಾಲ್ಯಾನ್ ಸ್ವಾಗತಿಸಿದರು, ವಾಸು ಪೂಜಾರಿ ಧನ್ಯವಾದ ಅರ್ಪಿಸಿದರು ಹಾಗೂ ದಿನೇಶ್ ಕೊಲ್ನಾಡು ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.



Related posts

ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವ ‘ಭಾರತ್ ಬ್ಯಾಂಕ್’: ಬೆಳ್ತಂಗಡಿಯ ಸುಸಜ್ಜಿತ ಕಟ್ಟಡದಲ್ಲಿ ಶಾಖೆ ಕಾರ್ಯಾರಂಭ.

Mumbai News Desk

ಉಡುಪಿ ಕೃಷ್ಣನಿಗೆ ‘ಪಾರ್ಥಸಾರಥಿ’ ಸುವರ್ಣ ರಥ ಸಮರ್ಪಣೆ

Mumbai News Desk

ಪ್ರಪಂಚಾದ್ಯಂತ ನೆಲೆಸಿರುವ ಜನರು ಕಾಪು ಮಾರಿಗುಡಿಯನ್ನೊಮ್ಮೆ ನೋಡಬೇಕು : ಶಿರೂರು ಶ್ರೀ ಶ್ರೀ ವೇದವರ್ಧನ ಸ್ವಾಮೀಜಿ 

Mumbai News Desk

ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಕ್ಷೇತ್ರ ಪ್ರದಕ್ಷಿಣೆಯ 23ನೇ ದಿನ : ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನ ದರುಶನ

Mumbai News Desk

ತುಳು ರಂಗಭೂಮಿಯಲ್ಲಿ ಐತಿಹಾಸಿಕ ಮೈಲಿಗಲ್ಲು:ಶ್ರೀಮತಿ ಲಾವಣ್ಯ ವಿಶ್ವಾಸ್ ದಾಸ್ ನಿರ್ದೇಶನದ “ಜೋಡು ಜೀಟಿಗೆ “ 100ನೇ ಪ್ರದರ್ಶನ – 100 ಕಲಾವಿದರಿರುವ ಏಕೈಕ ತಂಡದ ಅಪೂರ್ವ ಸಾಧನೆ

Mumbai News Desk

ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಬಲಿ ಉತ್ಸವ ಸಂಪನ್ನ

Mumbai News Desk