


ಮುಲ್ಕಿ : ಲಲಿತ ರುಕ್ಕರಾಮ್ ಸಾಲ್ಯಾನ್ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದ, ಸನ್ಮಾನ್ಯ ಜಯ ಸಿ. ಸುವರ್ಣರ ಮಾರ್ಗದರ್ಶನದ ಮೂಲ್ಕಿ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಹತ್ತನೆಯ ತರಗತಿಯ ಎಲ್ಲ ವಿದ್ಯಾರ್ಥಿಗಳು SSLC ಬೋರ್ಡ್ ನ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಮೂಲ್ಕಿ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ*
*ಶಿಕ್ಷಣಕ್ಕೆ ಪ್ರಾಮುಖ್ಯ ನೀಡುವ ಸಂಸ್ಥೆಯ ಕಾರ್ಯಧ್ಯಕ್ಷರಾದ, ಭಾರತ್ ಬ್ಯಾಂಕ್ ನ ನಿರ್ದೇಶಕರಾದ, ಹೋಟೆಲ್ ಉದ್ಯಮಿ ಭಾಸ್ಕರ್ ಎಂ. ಸಾಲ್ಯಾನ್ ಅವರ ಮುಂದಾಳುತನದಲ್ಲಿ ಟ್ರಸ್ಟಿಗ, ಭಾರತ್ ಬ್ಯಾಂಕ್ ಕಾರ್ಯಧ್ಯಕ್ಷ, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷರಾದ ಶ್ರೀ ಸೂರ್ಯಕಾಂತ್ ಜಯ ಸುವರ್ಣ, ಜೆ. ವಿ ಕೋಟ್ಯಾನ್, ಬಾಲಚಂದ್ರ ಸನಿಲ್, ಹರಿoದ್ರ ಸುವರ್ಣ, ಹೇಮರಾಜ್ ಸಾಲ್ಯಾನ್, ಅವಿನಾಶ್ ಕೋಟ್ಯಾನ್, ವಾಮನ್ ಕೋಟ್ಯಾನ್ ನಡಿಕುದ್ರು ಮತ್ತು ವಿಶೇಷ ಆಮಂತ್ರಿತರುಗಳಾದ ಯೋಗೇಶ್ ಕೋಟ್ಯಾನ್, ಮಿಸ್ ಪ್ರಜ್ಞಾ ಕೋಟ್ಯಾನ್ ಹಾಗೂ ಪ್ರಾಧ್ಯಾಪಕರುಗಳ ಉತ್ತಮ ಮಟ್ಟದ ಶಿಕ್ಷಣ ತರಬೇತಿಯಿಂದಾಗಿ ಶಾಲಾ ವಿದ್ಯಾರ್ಥಿಗಳು 90% ಕ್ಕೂ ಮೇಲ್ಪಟ್ಟು ಅಂಕಗಳನ್ನು ಪಡೆದು ನೂರು ಪ್ರತಿಶತ ಉತ್ತಿರ್ಣರಾಗಿದ್ದಾರೆ.*
*ವಿದ್ಯಾರ್ಥಿಗಳೆಲ್ಲರಿಗೂ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷರಾದ ಭಾಸ್ಕರ್ ಎಂ. ಸಾಲ್ಯಾನ್ ಮತ್ತು ಟ್ರಸ್ಟಿ ಸೂರ್ಯಕಾಂತ್ ಜಯ ಸುವರ್ಣ ಹಾಗೂ ಎಲ್ಲಾ ಟ್ರಸ್ಟಿಗಳು, ಶಾಲಾ ಪ್ರಾಂಶುಪಾಲರು, ಪ್ರಾಧ್ಯಾಪಕರುಗಳು ಅಭಿನಂದನೆ ಸಲ್ಲಿಸಿದ್ದಾರೆ.*




