
ಕುತ್ಪಾಡಿ: ಇಲ್ಲಿನ ಇತಿಹಾಸ ಪ್ರಸಿದ್ಧ ಅಮೀನ್ ಮೂಲಸ್ಥಾನ, ಮೂಡುತೋಟದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವವು ಭಾನುವಾರ (ಮೇ 03) ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಡಗರದೊಂದಿಗೆ ಸಂಪನ್ನಗೊಂಡಿತು.

ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳ ಭಾಗವಾಗಿ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು. ಮುಖ್ಯವಾಗಿ ನವಕ ಪ್ರಧಾನ ಕಳಶಾಭಿಷೇಕ, ನಾಗದೇವರಿಗೆ ಪ್ರಿಯವಾದ ತನುತಂಬಿಲ ಸೇವೆ, ಹಾಗೂ ವಿಶೇಷ ಆಶ್ಲೇಷ ಬಲಿ ಪೂಜೆಗಳು ನಡೆದವು. ಮಧ್ಯಾಹ್ನ ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ಭವ್ಯ ಮಹಾಪೂಜೆ ನೆರವೇರಿಸಲಾಯಿತು.
ವರ್ಧಂತ್ಯುತ್ಸವದ ಅಂಗವಾಗಿ ಅಮೀನ್ ಕುಟುಂಬದ ಸಮಸ್ತ ಸದಸ್ಯರು ಹಾಗೂ ಸುತ್ತಮುತ್ತಲಿನ ನೂರಾರು ಭಕ್ತಾದಿಗಳು ಆಗಮಿಸಿ ದೈವ-ದೇವರ ಕೃಪೆಗೆ ಪಾತ್ರರಾದರು. ಪೂಜಾ ಕಾರ್ಯಕ್ರಮದ ನಂತರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಲು ತನು-ಮನ-ಧನಗಳಿಂದ ಸಹಕರಿಸಿದ ಅಮೀನ್ ಮೂಲಸ್ಥಾನದ ಕುಟುಂಬಸ್ಥರಿಗೆ ಹಾಗೂ ಸಮಸ್ತ ಭಗವದ್ಭಕ್ತರಿಗೆ ಮೂಲಸ್ಥಾನದ ಆಡಳಿತ ಮಂಡಳಿಯು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದೆ. ಕುಟುಂಬದ ಏಕತೆ ಮತ್ತು ದೈವಿಕ ಶ್ರದ್ಧೆಯ ಸಂಕೇತವಾಗಿ ಈ ಬಾರಿಯ ವರ್ಧಂತಿಯು ಯಶಸ್ವಿಯಾಗಿ ಮೂಡಿಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಾಹಿತಿ: ಅಶೋಕ್ ಅಮೀನ್




