31 C
Mumbai
June 17, 2026
Mumbai News Kannada
ಮುಂಬಯಿ

ಚಿಣ್ಣರ ಬಿಂಬ ನೆರೂಲ್ ಶಿಬಿರದ   ಕನ್ನಡ ಕಲಿಕೆ ಹಾಗೂ ಇತರ ಚಟುವಟಿಕೆಗಳು ಪ್ರಾರಂಭ





.    

ಚಿಣ್ಣರ ಬಿಂಬದಲ್ಲಿ ಮಕ್ಕಳಿಗೆ ಸೂಕ್ತ ಅವಕಾಶ: ತಾರಾ ಕೆ ಶೆಟ್ಟಿ 

  ನವಿ ಮುಂಬಯಿ:ಚಿಣ್ಣರ ಬಿಂಬ ನೆರೂಲ್ ಶಿಬಿರದ 2026-2027ನೇ ವರ್ಷದ ಕನ್ನಡ ಕಲಿಕೆ ಹಾಗೂ ಇತರ ಚಟುವಟಿಕೆಗಳ ಜೂ14 ರವಿವಾರದಂದು  ಚಿಣ್ಣರ ವಂದೇ ಮಾತರಂ ಹಾಡಿನೊಂದಿಗೆ ಪ್ರಾರಂಭಗೊಂಡಿತು                                                                                 ಬ್ರಾಮರಿ  ನೆರುಲ್ ಶಿಬಿರದ ಪ್ರಮುಖೆ ಹಾಗೂ ಬಂಟರ ಸಂಘ ಮುಂಬೈಯ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕೋಶಾಧಿಕಾರಿಯಾದ  ತಾರಾ ಕೆ ಶೆಟ್ಟಿಯವರು ಹಾಗೂ ಶಿಬಿರದ ಪದಾಧಿಕಾರಿಗಳು ಸೇರಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಮಾಜಿ ಶಿಬಿರ ಮುಖ್ಯಸ್ಥೆ  ಭವ್ಯ ಪೂಜಾರಿಯವರು  ಅತಿಥಿಯನ್ನು ಪರಿಚಯ ಮಾಡಿದರು.ಅನಂತರ ಚಿಣ್ಣರು ಅತಿಥಿಗಳಿಗೆ ಶಾಲು ಹೊದಿಸಿ ಗೌರವಿಸಿದರು.

    ತಾರಾ ಕೆ ಶೆಟ್ಟಿ  ಚಿಣ್ಣರನ್ನು ಉದ್ದೇಶಿಸಿ ಮಾತನಾಡುತ್ತ, ನನ್ನ ಮಗಳು ಚಿಣ್ಣರ ಬಿಂಬದಲ್ಲಿ ಇದ್ದು, ತುಂಬ ಅವಕಾಶಗಳನ್ನು ಪಡೆದು ಒಳ್ಳೆಯ ಮಟ್ಟಕ್ಕೆ ಬೆಳೆದಿದ್ದಾಳೆ, ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕೃತಿ ಸಂಸ್ಕಾರದ ಅರಿವನ್ನು ಮೂಡಿಸಿದಾಗ. ಮಕ್ಕಳು ಪ್ರಭುದ್ಧತೆಗೆ ಬಂದಾಗ ಸಂಸ್ಕಾರವಂತರಾಗಿ ತಿಳಿಯಲು ಸಾಧ್ಯವಾಗುತ್ತದೆ ಈ ಶಿಬಿರದಲ್ಲಿ

 ಇನ್ನು ಹೆಚ್ಚು  ಚಿನ್ನರು  ಬರಲಿ ಎಂದು ಶುಭ ಹಾರೈಸಿದರು.

 ಅನಂತರ ಕನ್ನಡ ಶಿಕ್ಷಕಿ  ಮೋಹಿನಿ ಪೂಜಾರಿ ಅವರು ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಿದರು, ಕನ್ನಡ ವರ್ಣಮಾಲೆ ಬರೆದರು. ಸಾಂಸ್ಕೃತಿಕ ಮುಖ್ಯಸ್ಥೆ  ದಿವ್ಯ ರಾವ್ ಅವರು ಧನ್ಯವಾದ ಹೇಳಿದರು.

ಕಾರ್ಯಕ್ರಮದಲ್ಲಿ ನೆರೂಲ್ ಶಿಬಿರದ ಪದಾಧಿಕಾರಿಗಳಾದ ನಾಗರಾಜ್ ದೇವಾಡಿಗ,  ಸುಕುಮಾರಿ ಶೆಟ್ಟಿ,  ಗಾಯತ್ರಿ ಪಿ ಶೆಟ್ಟಿ, ಭಜನೆ ಶಿಕ್ಷಕಿ  ಕ್ಷಮಾ ತಾಮನಕರ್, ಸ್ವಯಂ ಸೇವಕರು ಹಾಗೂ ಪಾಲಕರು ಉಪಸ್ಥಿತರಿದ್ದರು.

ಕೊನೆಯಲ್ಲಿ ಮಕ್ಕಳಿಗೆ ಹಾಗೂ ಪಾಲಕರಿಗೆ ಸಿಹಿ ಹಂಚಿ ಜನಗಣಮನ ಹಾಡಿ ತರಗತಿಯನ್ನು  ಮುಗಿಸಲಾಯಿತು.



Related posts

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಸ್ಥಳೀಯ ಸಮಿತಿವತಿಯಿಂದ ಸಮಾಜದ ಮಹಿಳೆಯರಿಗಾಗಿ ಆಯೋಜಿಸಿದ ಅರಿಶಿಣ ಕುಂಕುಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ :-

Mumbai News Desk

ಬೋರಿವಲಿ   :  ಮಹಿಷಾಮರ್ಧಿನಿ ದೇವಸ್ಥಾನದಲ್ಲಿ ಬಂಟರ ಸಂಘದ ಜೋಗೇಶ್ವರಿ – ದಹಿಸರ್  ಸಮಿತಿಯ ಮಹಿಳಾ ಸದಸ್ಯರಿಂದ  ಭಜನೆ ಸಂಕೀರ್ತನೆ.

Mumbai News Desk

ಕರ್ನಾಟಕ ಸಂಘ ಡೊಂಬಿವಲಿ: ನಾಡಹಬ್ಬದ ನಿಮಿತ್ತ ‘ಕವಿಗೋಷ್ಠಿ’ಯ ವೈಭವ

Mumbai News Desk

ಸಾಫಲ್ಯ ಸೇವಾ ಸಂಘ ಮಹಿಳಾ ವಿಭಾಗದ ವತಿಯಿಂದ ಆಟಿಡ್ ಒಂಜಿ ದಿನ ಕಾರ್ಯಕ್ರಮ

Mumbai News Desk

ಮೊಗವೀರ ಬ್ಯಾಂಕ್ ಕೇಂದ್ರ ಕಚೇರಿಗೆ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಪದಾಧಿಕಾರಿಗಳ ಭೇಟಿ

Mumbai News Desk

ಮೂರು ದಶಕಗಳ ಅವಿರತ ಸೇವಾ ಪಯಣ: ಭಾರತ್ ಬ್ಯಾಂಕಿನ ಹಿರಿಯ ಅಧಿಕಾರಿ ಸುಧೀರ್ ಸುವರ್ಣರಿಗೆ ಅಭಿನಂದನಾ ಪೂರ್ವಕ ಬೀಳ್ಕೊಡುಗೆ

Mumbai News Desk