30.9 C
Mumbai
June 8, 2026
Mumbai News Kannada
ಕರಾವಳಿ

ವೇಣೂರು ,ಅಂಡೆಂಜ ಗ್ರಾಮದಲ್ಲಿ ವಿಜೃಂಭಣೆಯಿಂದ ಜರಗಿದ ಬುನ್ನಾನ್ ಕುಟುಂಬದ ನೇಮೋತ್ಸವ.





ವೇಣೂರು ಸಮೀಪದ ಅಂಡೆಂಜ ಗ್ರಾಮದ ಮಂಜಿ ಬೆಟ್ಟು ಕೇಶವ ಬುನ್ನಾನ್ ಇವರ ನೇತ್ರತ್ವದಲ್ಲಿ, ಹಾಗೂ ಮುಂಬೈ ವಸಾಯಿ ಪರಿಸರದ ಕೊಡುಗೈ ದಾನಿಗಳು ಹಾಗೂ ಹೊಟೇಲ್ ಉದ್ಯಮಿಗಳಾದ ದೇವೇಂದ್ರ ಬುನ್ನಾನ್, ಹಾಗೂ ರಾಮ ಮಡಿವಾಳ ಇವರ ಮುಂದಾಳ್ತನದಲ್ಲಿ ಬುನ್ನಾನ್ ಕುಟುಂಬದ ದೈವದ ಕೋಲ(ನೇಮವು) ಬಹಳ ವಿಜೃಂಭಣೆಯಿಂದ, ಭಕ್ತಿಯಿಂದ ತಾರೀಕು 13/12/2023 ಬುಧವಾರ ರಾತ್ರಿ 8.30 ರಿಂದ ಜರುಗಿತು.


ಬಿರವು,ಬಾಬು ಬಳಗದರಿಂದ ಕೋಲ ಹಾಗೂ ದಿನೇಶ್ ಮೂಡಬಿದ್ರೆ ಬಳಗದವ ರಿಂದ ವಾಧ್ಯ ನಾದಸ್ವರ, ತುಳುನಾಡು ಹಾಗೂ ಮುಂಬೈಯ ಭೂತಾರಾಧನೆಯ ದಾರ್ಮಿಕ ಸಂಘಟಿಗ ಉಮೇಶ್ ಕಾಂತಾವರ ಇವರ ಮಧ್ಯಸ್ಥಿಕೆಯಲ್ಲಿ ನೆರವೇರಿತು. ಪ್ರಥಮವಾಗಿ, ಗ್ರಾಮದ ಪುರೋಹಿತರಿಂದ ಪೂಜಾ ವಿಧಾನಗಳು ನಡೆದ , ಆನಂತರ 5.30 ಕ್ಕೆ ಸಂಜೆ ಸರಿಯಾಗಿ ಬಂಡಾರ ಇಳಿಸಿವೇಕೆ ನಡೆಯಿತು. ಬಂದ ಭಕ್ತಾದಿಗಳು, ಹಾಗೂ ಗ್ರಾಮದ ನೆರೆಕರೆ ಹಾಗೂ ಕುಟುಂಬದ ಬಂಧು ಬಾಂಧವರಿಗೆ ಅನ್ನದಾನದ ಸೇವೆ ಹಾಗೂ ಚಾ,ಲಘು ಉಪಹಾರದ ವ್ಯವಸ್ಥೆ ಮಾಡಲಾಯಿತು .


ಸುಮಾರು 8 ದೈವಗಳ ನೇಮ ಸೇವೆ ರಾತ್ರಿ 8.30 ರಿಂದ ಮರುದಿನ ಮಧ್ಯಾಹ್ನ 2.30 ತನಕ ಬಹಳ ಅರ್ಥಪೂರ್ಣವಾಗಿ ಸುಮಾರು ಅಂದಾಜು 1000 ಜನ ಭಕ್ತಾಧಿಗಳ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಈ ಧಾರ್ಮಿಕ ದೈವಾರಾಧನೆ, ಕಾರ್ಯಕ್ರಮದಲ್ಲಿ ,ಕೇವಲ ಬುನ್ನಾನ್ ಪರಿವಾರ ಅಲ್ಲದೆ ಇತರ ಜಾತಿ, ಪರಜಾತಿ ಬಂದು ಭಾಂದವರು, ಊರು ಪರವೂರಿನವರು ಶ್ರದ್ಧೆ ಭಕ್ತಿ ಬಂದು , ಬುನ್ನಾನ್ ಕುಟುಂಬದ ದೈವದ ನೇಮೋತ್ಸವದಲ್ಲಿ ಪಾಲ್ಗೊಂಡರು.



Related posts

ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ   ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಪ್ರಧಾನ

Mumbai News Desk

ಕೀರ್ತಿ ವಿ  ಮೂಲ್ಯ 95,83  ಅಂಕ

Mumbai News Desk

ಶಿಬರೂರು ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲ ಪೂರ್ವಭಾವಿ ಸಭೆ,* ನಟಿ ಶಿಲ್ಪಾ ಶೆಟ್ಟಿಯಿಂದ ಬೆಳ್ಳಿಕಲಶ ಸಮರ್ಪಣೆ

Mumbai News Desk

ಜೆ ಸಿ ಐ ಶಂಕರಪುರ ಇದರ 2024 ರ ಸಾಲಿನ ಅಧ್ಯಕ್ಷರಾಗಿ ಇನ್ನಂಜೆ ಹರೀಶ್ ಪೂಜಾರಿ ಆಯ್ಕೆ.

Mumbai News Desk

ಎಂ.ಆರ್.ಜಿ. ಗ್ರೂಪ್ ನಿಂದ ಅಶಕ್ತರಿಗೆ 5 ಕೋಟಿ ರೂ. “ನೆರವು” ಕಾರ್ಯಕ್ರಮ

Mumbai News Desk

ಬೊಂಡಾಲದಲ್ಲಿ ಬಯಲಾಟ ಸುವರ್ಣ ಸಂಭ್ರಮ – ಸಾಧಕರ ಸಮ್ಮಾನ *ಯಕ್ಷಗಾನದಿಂದ ಸಂಸ್ಕೃತಿಯ ಪುನರುತ್ಥಾನ: ಪ್ರವೀಣ ಭೋಜ ಶೆಟ್ಟಿ 

Mumbai News Desk