ಮೂಲ್ಕಿ: ಇಲ್ಲಿನ ವಿಜಯಾ ಕಾಲೇಜಿನಲ್ಲಿ 1982ನೇ ಇಸವಿಯಲ್ಲಿ ಬಿ.ಕಾಂ (ಬಿ) ವ್ಯಾಸಂಗ ಮುಗಿಸಿದ ಸಹಪಾಠಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಅ.19ರಂದು ಕಾಲೇಜು ಸಮೀಪದ ಸನ್ಶೈನ್ ರೆಸಾರ್ಟ್ನಲ್ಲಿ ಜರುಗಿತು.
ಆರಂಭದಲ್ಲಿ, ಸಹಪಾಠಿಗಳನ್ನು ಒಗ್ಗೂಡಿಸಲು ಮುತುವರ್ಜಿ ವಹಿಸಿ ಇತ್ತೀಚೆಗೆ ನಿಧನರಾದ ಸಹಪಾಠಿ ವಾಗ್ದೇವಿ ಕಾಂಚನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸುಮಾರು 20 ಮಂದಿ ಸಹಪಾಠಿಗಳು ವಾಗ್ದೇವಿ ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡು ಸಂತಾಪ ಸೂಚಿಸಿದರು. ಮುಂದಿನ ದಿನಗಳಲ್ಲಿ ವಾಗ್ದೇವಿ ಅವರ ನೆನಪಿಗಾಗಿ ಪ್ರತಿ ವರ್ಷ ಸ್ನೇಹ ಸಮ್ಮಿಲನ ಆಯೋಜಿಸಲು ಹಾಗೂ ಅವರ ಪುಣ್ಯತಿಥಿಯಂದು ಅನಾಥಾಶ್ರಮಕ್ಕೆ ಸೇವೆ ಸಲ್ಲಿಸಲು ನಿರ್ಧರಿಸಲಾಯಿತು.
ವಿವಿಧ ಮನರಂಜನಾ ಚಟುವಟಿಕೆಗಳು ಹಾಗೂ ಊಟೋಪಚಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.




