30.5 C
Mumbai
June 8, 2026
Mumbai News Kannada
ಸುದ್ದಿ

ಜನಪ್ರಿಯ ಗಾಯಕ ಪಂಕಜ್ ಉಧಾಸ್ ಇನ್ನಿಲ್ಲ





ಗಜಲ್ ಸಂಗೀತದ ಮೂಲಕ ಜನಪ್ರಿಯತೆಯನ್ನು ಪಡೆದಿದ್ದ ಖ್ಯಾತ ಗಾಯಕ ಪಂಕಜ್ ಉಧಾಸ್ (72 ವರ್ಷ) ಇಂದು (ಫೆ.26)ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ದೀರ್ಘ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಗಜಲ್ ಗಾಯಕರಾಗಿ ತನ್ನ ತನ್ನ ವೃತ್ತಿ ಜೀವನ ಆರಂಭಿಸಿದ ಅವರು ಅಲ್ಪ ಕಾಲದಲ್ಲಿ, ತನ್ನ ಕಂಠ ಸಿರಿಯ ಮೂಲಕ ಸಂಗೀತ ಪ್ರಿಯರನ್ನು ಆಕರ್ಷಿಸಿದ್ದರು.
1980 ರಲ್ಲಿ ಅವರು ಹೊರ ತಂದ “ಅಹಟ್ ” ದ್ವನಿ ಸುರುಳಿ ಅವರಿಗೆ ಮತ್ತಷ್ಟು ಖ್ಯಾತಿ ತಂದಿತು.
ಮಹೇಶ್ ಭಟ್ ಅವರ “ನಾಮ್” ಚಿತ್ರದ ಚಿಟ್ಟಿ ಆಯಿ ಹೈ,…. ಗೀತೆ ಹಿಟ್ ಆದ ಬಳಿಕ ಅನೇಕ ಬಾಳಿವುಡ್ ಸೂಪರ್ ಹಿಟ್ ಹಾಡುಗಳಿಗೆ ದ್ವನಿ ನೀಡಿದ್ದರು.

ಅವರ ಸಾಧನೆಯನ್ನು ಗುರುತಿಸಿದ ಭಾರತ ಸರಕಾರ ಅವರಿಗೆ 2006 ರಲ್ಲಿ ಪದ್ಮ ಶ್ರೀ ಪುರಸ್ಕಾರ ನೀಡಿ ಗೌರವಿಸಿತ್ತು.
ಕನ್ನಡ ಚಿತ್ರ ರಂಗದ ಸೂಪರ್ ಸ್ಟಾರ್ ಸುಧೀಪ್ ಅವರ “ಸ್ವರ್ಶ” ಚಿತ್ರದ “ಬರೆಯದ ಮೌನದ ಕವಿತೆ” ಹಾಗೂ “ಚಂದಕ್ಕಿಂತ ಚಂದ ನೀನೇ ಸುಂದರ” ಗೀತೆಗಳು ಉಧಾಸ್ ಅವರ ಕಂಠದಲ್ಲಿ ಉತ್ತಮವಾಗಿ ಮೂಡಿಬಂದಿತ್ತು.
ಅವರ ನಿಧನಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು, ಕರುನಾಡಿನ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.



Related posts

ಬೆಂಗಳೂರು : ರಾಜ್ಯಪಾಲರಿಂದ ಗೀತಾಲಕ್ಷ್ಮಿ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ: ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗೆ ಮನ್ನಣೆ

Mumbai News Desk

ಡಾ| ಆರ್ ಕೆ ಶೆಟ್ಟಿಯವರಿಗೆ ಎಲ್ಐಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಾಧಕ ಗೌರವ

Mumbai News Desk

ನೈರುತ್ಯ ಪದವೀಧರ ಕ್ಷೇತ್ರ ಚುನಾವಣೆ – ಬಿಜೆಪಿಯ ಡಾ. ಧನಂಜಯ ಸರ್ಜಿ ಗೆ ಭಾರಿ ಗೆಲುವು ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಗೆ ಸೋಲು.

Mumbai News Desk

ಇರಾನ್-ಅಮೆರಿಕ ಸಂಘರ್ಷ: ಶಾಂತಿ ಮಾತುಕತೆ ವಿಫಲ ಮತ್ತೆ ಯುದ್ಧದ ಅಂಚಿನಲ್ಲಿ ಮಧ್ಯಪ್ರಾಚ್ಯ

Mumbai News Desk

ಏಷ್ಯನ್ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ ಗೆ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಉದಯ ಎಸ್. ಶೆಟ್ಟಿ

Mumbai News Desk

ವೃತ್ತಿಯಲ್ಲಿ ಇಂಜಿನಿಯರಿಂಗ್ ಪ್ರೊಫೆಸರ್, ಪ್ರವೃತ್ತಿಯಲ್ಲಿ ದೈವ ನರ್ತಕ: ಡಾ. ರವೀಶ್ ಪಡುಮಲೆ ಅವರಿಗೆ ಮಂಗಳೂರು ವಿವಿ ಗೌರವ

Mumbai News Desk