30.5 C
Mumbai
June 8, 2026
Mumbai News Kannada
ಮುಂಬಯಿ

ಕರ್ನಾಟಕ ಸಂಘ, ಸಯನ್ ದಸರಾ ಹಬ್ಬದ ನಿಮಿತ್ತ ಭಜನೆ ಕಾರ್ಯಕ್ರಮ






ಭಜನೆ ಸನಾತನ ಧರ್ಮದ ಜೀವಾಳ – ಡಾ ಎಂ.ಜೆ.ಪ್ರವೀಣ್ ಭಟ್

ಮುಂಬಯಿ ಅ.23.ನಮ್ಮ ನೂತನ ಕರ್ನಾಟಕ ಸಂಘದ ಪ್ರಥಮ ಕಾರ್ಯಕ್ರಮವಾಗಿ ದಸರಾ ಹಬ್ಬದ ಈ ಶುಭ ಸಂದರ್ಭದಲ್ಲಿ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸೂಕ್ತವಾಗಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ದೇವರ ಕೃಪೆಗೆ ಪಾತ್ರರಾಗೋಣ. ಭಜನೆ ಎಂಬುದು ಮುಕ್ತಿಗೆ ಹೆದ್ದಾರಿ. ಅದು ಸನಾತನ ಧರ್ಮದ ಜೀವಾಳ. ಭಗವಂತನಿಗೆ ಅರ್ಪಿಸುವ ನೈವೇದ್ಯವದು. ಭಜನೆಯು ಆತ್ಮದ ಆಂತರಿಕ ಶಬ್ದಗಳ ಮೇಲೆ ಧ್ಯಾನವನ್ನು ಕೇಂದ್ರೀಕರಿಸುತ್ತದೆ ಆದುದರಿಂದ ಭಜನಾ ಕಾರ್ಯಕ್ರಮದಲ್ಲಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕುತ್ತದೆ ಎಂದು ಸಂಘದ ಅಧ್ಯಕ್ಷರಾದ ಡಾ. ಎಂ ಜೆ ಪ್ರವೀಣ್ ಭಟ್ ಅವರು ನುಡಿದರು.

ಅವರು ತಾ. 22/ 10/ 2023 ರಂದು ಸಂಜೆ 5 ರಿಂದ ಸಯನ್ ನಿತ್ಯಾನಂದ ಸಭಾಗೃಹದಲ್ಲಿ ಏರ್ಪಡಿಸಲಾದ ಭಜನಾ ಕಾರ್ಯಕ್ರಮದ ಬಳಿಕ ಮಂಗಳಾರತಿ ನೆರವೇರಿಸಿ ,ಭಜನಾ ತಂಡಗಳನ್ನು ಗೌರವಿಸಿ ಮಾತನಾಡಿದರು.

‘ಚಂದ್ರಹಾಸ ರೈ ಪುತ್ತೂರು ಭಜನಾ ಬಳಗ’, ಡೊಂಬಿವಿಲಿ ಮತ್ತು ಶ್ರೀ ಶನೀಶ್ವರ ಚಾಮುಂಡೇಶ್ವರಿ ಅಯ್ಯಪ್ಪ ಭಜನಾ ಮಂಡಳಿ, ಕೋಳಿವಾಡ, ಸಯನ್ ಇವರುಗಳು ಆಗಮಿಸಿ, ಭಜನಾ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಿಕೊಟ್ಟರು.

ಸಂಘದ ಉಪಾಧ್ಯಕ್ಷರುಗಳಾದ ಶ್ರೀ ಸತೀಶ್ ಆರ್. ಶೆಟ್ಟಿ , ಶ್ರೀ ಸದಾನಂದ ಶೆಟ್ಟಿ, ಸದಾಶಿವ ಬಿ ಎನ್ ಶೆಟ್ಟಿ, ಸಲಹೆಗಾರ ಸುಂದರ ಮೂಲ್ಯ, ಸಂಸ್ಥಾಪಕ ಸದಸ್ಯರಲ್ಲಿ ಓರ್ವರಾದ ಹ್ಯಾರಿ ಸಿಕ್ವೇರಾ, ಗೌ.ಕಾರ್ಯದರ್ಶಿ ಡಾ.ಜಿ.ಪಿ.ಕುಸುಮಾ, ಜೊತೆ ಕಾರ್ಯದರ್ಶಿಗಳಾದ ಶ್ರೀ ಪ್ರವೀಣ್ ಶೆಟ್ಟಿ, ಜಯಶೀಲ ಬಿ ಮೂಲ್ಯ, ಶ್ರೀ ಉಮೇಶ್ ಶೆಟ್ಟಿ ಕುಕ್ಕುಂದೂರು, ಶ್ರೀ ದಯಾ ಮೂಲ್ಯ, ಜೊತೆ ಕೋಶಾಧಿಕಾರಿ ಶ್ರೀಮತಿ ಚಂದ್ರಿಕಾ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಶ್ರೀಮತಿ ಪ್ರಭಾ ಸುವರ್ಣ, ಮೊದಲಾದವರು ಉಪಸ್ಥಿತರಿದ್ದರು.

ಮಂಗಳಾರತಿಯಾದ ಬಳಿಕ ನೆರೆದ ಭಕ್ತಾಭಿಮಾನಿಗಳಿಗೆ ಪ್ರಸಾದ
ವಿತರಣೆಗೈಯಲಾಯಿತು. ಕೊನೆಗೆ ಲಘುಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.


ಕರ್ನಾಟಕ ಸಂಘ ಸಯನ್ ಇದೇ ತಿಂಗಳ 15ರಂದು ನವರಾತ್ರಿಯ ಪರ್ವದಿನದಂದು ಉದ್ಘಾಟನೆಗೊಂಡಿತ್ತು, ಸಂಘವು ಹಮ್ಮಿಕೊಂಡಿದ್ದ ಭಜನಾ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ,ತುಳು-ಕನ್ನಡಿಗರು ಭಾಗವಹಿಸಿದ್ದರು.



Related posts

ನಾನಿಲ್ತಾರ್ ಅಭಿಮಾನಿ ಬಳಗ ಮುಂಡ್ಕೂರು : ನಾನಿಲ್ತಾರ್ನಲ್ಲಿ  ಸ್ನೇಹ ಸಮ್ಮಿಲನದ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ದಹಿಸರ್ ಪೂರ್ವ :ಶ್ರೀ ಜಯಸ್ವಾಮಿ ದಹಿಸರ್ ಅತ್ತೂರು ಗುಂಡ್ಯಡ್ಕ ಇವರ ಆಯೋಜನೆಯಲ್ಲಿ, 18ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ ಸಂಪನ್ನ

Mumbai News Desk

ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿಯ ಅಶ್ರಯದಲ್ಲಿ ಶೈಕ್ಷಣಿಕ ನೆರವು, ದತ್ತು ಸ್ವೀಕಾರ ಕಾರ್ಯಕ್ರಮ

Mumbai News Desk

ಶಹಾಡ್‌ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಸಂಪನ್ನ

Mumbai News Desk

ಬಿಲ್ಲವರ ಅಸೋಸಿಯೇಷನಿನ ಭಾಯಂದರ್ ಸ್ಥಳೀಯ ಕಚೇರಿ. ಹೊಸ ವರ್ಷದ ಗುರುಪೂಜೆ.

Mumbai News Desk

ಮುಂಬಯಿಯ ಉದ್ಯಮಿ ಸುನೀಲ್ ಆರ್ ಸಾಲ್ಯಾನ್ ಅವರಿಂದ ವಿಶೇಷ ಚೇತನಾ ಮಕ್ಕಳ ಆಶ್ರಮದಲ್ಲಿ ಹೊಸ ವರ್ಷಾಚರಣೆ.

Mumbai News Desk