July 23, 2026
Mumbai News Kannada
ಸುದ್ದಿ

ಭಾರತ್ ಬ್ಯಾಂಕ್ ಗೆ ಅತ್ಯುತ್ತಮ ಮಾನವ ಸಂಪನ್ಮೂಲ ನಿರ್ವಹಣಾ ಪ್ರಶಸ್ತಿ ( Best HR Management Award )







ಸಹಕಾರಿ ರಂಗದ ಶ್ರೇಷ್ಠ ಬ್ಯಾಂಕ್ ಗಳಲ್ಲಿ ಒಂದಾದ ಭಾರತ್ ಬ್ಯಾಂಕ್ ನ ಪ್ರಶಸ್ತಿಯ ಸರಮಾಲೆಗೆ ಮತ್ತೊಂದು ಮಣಿ ಸೇರ್ಪಡೆಗೊಂಡಿತು.
ಅಕ್ಟೊಬರ್ 19ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಆಲ್ ಇಂಡಿಯಾ ಕೋ -ಆಪರೇಟಿವ್ ಬ್ಯಾಂಕ್ಸ್ ಸಮ್ಮಿತ್ ನಲ್ಲಿ ಭಾರತ್ ಬ್ಯಾಂಕ್ ಗೆ ಅತ್ಯುತ್ತಮ ಮಾನವ ಸಂಪನ್ಮೂಲ ನಿರ್ವಹಣಾ ಪ್ರಶಸ್ತಿ (Best HR Management Award) ಪ್ರಧಾನಿಸಲಾಯಿತು.
ಗುಜರಾತ್ ಸರಕಾರದ ಕ್ಯಾಬಿನೆಟ್ ಸಚಿವ ಜಯೇಶ್ ರಾಡಿಯ ಅವರು ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ ಅವರಿಗೆ ಪ್ರಶಸ್ತಿ ಹಸ್ತಾಂತರಿಸಿದರು.
ಈ ಶುಭ ಸಂದರ್ಭದಲ್ಲಿ ಎಂ ಎಸ್ ಸಿ ಬ್ಯಾಂಕ್ ನ ಪ್ರಮೋದ್ ಕಾರ್ನಾಡ್, ಮನೋಜ್ ಅಗರ್ವಾವಾಲ್, ಬ್ಯಾಂಕಿಂಗ್ ಫ್ರ್ಯಾಂಟಿಯರ್ಸ್ ನ ಬಾಬು ನಾಯರ್, ಭಾರತ್ ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾನಂದ ಎಸ್ ಕರ್ಕೇರ, ಜಂಟಿ ಆಡಳಿತ ನಿರ್ದೇಶಕ , ದಿನೇಶ್ ಬಿ ಸಾಲ್ಯಾನ್ ಉಪಸ್ಥಿತರಿದ್ದರು.

ಭಾರತ್ ಬ್ಯಾಂಕ್ ತನ್ನ 101 ಶಾಖೆಗಳು, 3 ವಿಸ್ತರಣ ಕೌಂಟರ್‌ಗಳು, 104 ಆನ್-ಸೈಟ್ ಎಟಿಎಂ ಕೇಂದ್ರಗಳು ಮತ್ತು 3 ಆಫ್-ಸೈಟ್ ಎಟಿಎಂ ಕೇಂದ್ರಗಳ ಮೂಲಕ ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಾದ್ಯಂತ ಸೇವೆಗಳನ್ನು ನೀಡುತ್ತಿದೆ.
2023-24ರ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ವಿವಿಧ ಸಂಸ್ಥೆಗಳಿಂದ ಒಟ್ಟು ನಾಲ್ಕು ಪ್ರತಿಷ್ಠಿತ ಪ್ರಶಸ್ತಿಗಳನ್ನು ಸ್ವೀಕರಿಸಿದೆ.



Related posts

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಭಾಭವನ ನಿರ್ಮಾಣಕ್ಕೆ ಸಹಕಾರ ರತ್ನ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಸಹಕಾರ

Mumbai News Desk

ಶ್ರೀನಿವಾಸ ಜೋಕಟ್ಟೆ ಅವರಿಗೆ ‘ಎಡನೀರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ’ ಪ್ರದಾನ

Mumbai News Desk

ಸಾಧಕ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿಗೆ ಉಡುಪಿಯಲ್ಲಿ ಭವ್ಯ ಸನ್ಮಾನ: ದೇಶದ ಭವಿಷ್ಯ ಕಟ್ಟಲು ಮಕ್ಕಳಿಗೆ ಸಂಸ್ಕಾರ ಅಗತ್ಯ – ಶ್ರೀ ಶೀರೂರು ಶ್ರೀಗಳು

Mumbai News Desk

ಮುಂಬೈ ಮೇಯರ್ ಪಟ್ಟ ಅಲಂಕರಿಸಿದ್ದ ಮೊದಲ ಬಿಜೆಪಿ ನಾಯಕ ಕನ್ನಡಿಗ ಡಾ. ಪ್ರಭಾಕರ್ ಪೈ

Mumbai News Desk

ದೆಹಲಿ ಹೋಟೆಲ್ ಅಗ್ನಿ ದುರಂತ: 21 ಜನ ದುರ್ಮರಣ

Mumbai News Desk

ಕಾಂತಾವರ : ಶೋಧನ್ ಜೈನ್ ಕೊಡಗುತ್ತು ನಿರ್ಮಿಸಿದ ಕಾಂತೇಶ್ವರ ದೇವರ ಭಕ್ತಿ ಗೀತೆಯ ಆಲ್ಬಂ ಸಾಂಗ್ ಲೋಕಾರ್ಪಣೆ

Mumbai News Desk