September 6, 2026
Mumbai News Kannada
ಕರಾವಳಿ

ಶಂಕರಪುರ ರಾಮಣ್ಣ ಪೂಜಾರಿ ನಿಧನ.





ಪಾಂಗಾಳ ಗ್ರಾಮದವರಾದ ರಾಮಣ್ಣ ಪೂಜಾರಿ (86)ಸ್ವಲ್ಪ ಕಾಲದ ಅಸೌಖ್ಯದಿಂದ ಪಾಂಗಾಳದ ಸ್ವಗೃಹ ದಲ್ಲಿ ನಿಧನ ಹೊಂದಿದರು, ಮೃತರ ಪತ್ನಿ ಓರ್ವ ಪುತ್ರ ಈ ಹಿಂದೆಯೇ ಮೃತರಾಗಿದ್ದು, ಮೂವರು ಪುತ್ರರು ಹಾಗೂ ಒಬ್ಬರು ಪುತ್ರಿಯನ್ನು ಅಗಲಿದ್ದಾರೆ, ಶಂಕರಪುರ ಪೇಟೆಯಲ್ಲಿ ಸುಮಾರು 60ವರುಷಗಳ ಸುದೀರ್ಘ ಟೈಲರ್ ವೃತ್ತಿಯೊಂದಿಗೆ ರಾಮಣ್ಣ ಟೈಲರ್ ಎಂದೇ ಪ್ರಸಿದ್ದಿ ಪಡೆದು ನಲವತ್ತು ವರುಷಗಳ ಹಿಂದೆ ಅಶ್ವತ್ತಕಟ್ಟೆ ಸ್ಥಾಪಿಸಿ ನಿತ್ಯ ನಿರಂತರ ಪೂಜೆ ಕೈಂಕರ್ಯದೊಂದಿಗೆ ಗಂಟೆ ಬಾರಿಸಿ ಪಕ್ಷಿಗಳಿಗೆ ಆಹಾರ ನೀಡುವುದು ಅವರ ದಿನಚರಿ ಆಗಿತ್ತು, ಹಲವು ವರ್ಷ ಸ್ವತ: ಶ್ರೀ ಅಯ್ಯಪ್ಪ ಮಾಲಾಧಾರಣೆ ಮಾಡಿ ಶಿಬಿರದಲ್ಲಿ ಸೇವೆ ನೀಡಿರುವುದಲ್ಲದೆ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಕೂಡ ಸಕ್ರಿಯರಾಗಿದ್ದರು, ಪೇಟೆ ಯಲ್ಲಿ ಯಾರಾದರೂ ಅನಾಥರು ಸಿಕ್ಕಿದಲ್ಲಿ, ತನ್ನಲ್ಲಿ ಇದ್ದುದರಲ್ಲಿ ಅವರಿಗೆ ನೀಡಿ ಉಪಚರಿಸುತಿದ್ದರು,

ಅವರ ನಿಧನಕ್ಕೆ ಅಯ್ಯಪ್ಪ ಭಕ್ತ ವೃಂದ ಮುಂಬಯಿಯ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ ಹಾಗೂ ಶಿಷ್ಯಂದಿರು, ಹಾಗೂ ಇನ್ನಂಜೆ, ಪಾಂಗಳ, ಶಂಕರಪುರ ಪರಿಸರದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.



Related posts

ಅಯೋಧ್ಯೆಯಿಂದ ಬಂದು ಕಾಪು ಹೊಸ ಮಾರಿಗುಡಿ ದೇವಳದಲ್ಲಿ : 9 ದೀಪ ಬೆಳಗಿದ ಪೇಜಾವರ ಶ್ರೀಗಳು

Mumbai News Desk

ಶಿಲಾಮಯಗೊಳ್ಳುತ್ತಿರುವ ಕಾಪು ಮಾರಿಯಮ್ಮನ ದೇಗುಲ ಕಾಮಗಾರಿ ವೀಕ್ಷಣೆ : ಆದ್ಯಾತ್ಮ ಗುರು ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ

Mumbai News Desk

ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನ, . 22 ರಿಂದ 28ರ ತನಕ ಬ್ರಹ್ಮಕಳಸಾಭಿಷೇಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾದಿ ಶಕ್ತಿ ಕ್ಷೇತ್ರ ಸಂಭ್ರಮದ ನಿಧಿಕುಂಬ ಪ್ರತಿಷ್ಠಾಪನೆ.. ರುದ್ರ ಯಾಗ 

Mumbai News Desk

ಮಂಗಳೂರಿನ ನಗರ ಸೇವಕ ಜಗದೀಶ್ ಶೆಟ್ಟಿ ಆತ್ಮ ಹತ್ಯೆಗೆ ಯತ್ನ.

Mumbai News Desk

 ಕಾಪು ಲೀಲಾಧರ ಶೆಟ್ಟಿ ಸ್ಮರಣಾರ್ಥ ರಕ್ತದಾನ ಶಿಬಿರ,

Mumbai News Desk