30.9 C
Mumbai
June 8, 2026
Mumbai News Kannada
ಮುಂಬಯಿ

ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ ಅಭಿನಂದನಾ ಸಭೆ





 ಸಂಸ್ಥೆಯ ವಿಶ್ವಸ್ಥ ರ, ಕಾರ್ಯಕರ್ತರ , ಕೊಡುಗೈ ದಾನಿಗಳ  ಸಹಕಾರವೇ  ಯಶಸ್ಸಿನ ಪ್ರೇರಣೆ: ಕೈರಬೆಟ್ಟು ವಿಶ್ವನಾಥ್ ಭಟ್..

ಚಿತ್ರ ವರದಿ : ದಿನೇಶ್ ಕುಲಾಲ್ 

    ಮುಂಬಯಿ  ಜ25.   ಶ್ರೀಕೃಷ್ಣ ವಿಠ್ಠಲ ಪ್ರತಿಷ್ಠಾನವು ಕಳೆದ 26 ವರ್ಷ ಗಳಿಂದ ಅದ್ಭುತ ಯಶಸ್ಸಿನ ಕಾರ್ಯಕ್ರಮಗಳನ್ನು ನಡೆಸಲು ಮುಂಬೈಯ ತುಳು ಕನ್ನಡಿಗರ,ವಿಶ್ವಸ್ಥರ , ಕಾರ್ಯಕರ್ತರ, ಕೊಡುಗೈ ದಾನಿಗಳ ಪೂರ್ಣ ಸಹಕಾರವೇ ಕಾರಣ, “ಸಂಘೆ ಶಕ್ತಿ ಕಲೌ ಯುಗೇ “ ಎಂಬ ಸುಭಾಷಿತ ದಂತೆ ಒಬ್ಬನಿಂದ ಮಾಡಲಾಗದ ಉತ್ತಮ ಕಾರ್ಯಗಳನ್ನು ನೂರಾರು ಜನರು ಒಟ್ಟು ಸೇರಿ ನಡೆಸಬಹುದು,ಅದರಿಂದ ಎಲ್ಲ ಸಹ ಭಾಗಿಗಳ ಜೀವನ ವಿಕಸಿತ,ಪವಿತ್ರವಾಗುವುದ ರೊಂದಿಗೆ ಸಮಾಜಕ್ಕೂ ಉತ್ತಮ ಕೊಡುಗಯನ್ನು ನೀಡಬಹುದಾಗಿದೆ, ಕಾರ್ಯಕ್ರಮದ ಮುಂಚಿನ ಎಲ್ಲ ಪರಿ ಶ್ರಮಗಳು,ಜನರ ತುಂಬಿದಶುಭ ಹಾರೈಕೆ,ತೃಪ್ತಿಯ ಮಾತುಗಳಿಂದ ಪೂರ್ಣ ನಿವಾರಣೆ ಯಾಗುತ್ತದೆ ಎಂದು ವಿದ್ವಾನ್ ಕೈರಬೆ ಟ್ಟು ವಿಶ್ವನಾಥ್ ಭಟ್ ಅವರು ನುಡಿದರು,, 

     ಅವರು ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನವೂ ಕಳೆದ ಡಿಸೆಂಬರ್ 24ರಂದು ಸಂಸ್ಥೆಯು ಅದ್ಭುತವಾಗಿ ನಡೆಸಿದ ವಾರ್ಷಿಕೋತ್ಸವದ ನಂತರ ಪೇಜಾವರ ಮಠದಲ್ಲಿ ನಡೆಸಲಾದ ಅಭಿನಂದನಾ ಸಭೆಯ ಅಧ್ಯಕ್ಷತೆ ಯನ್ನು ವಹಿಸಿ ಮಾತನಾಡಿದರು,, 

   ಸಂಸ್ಥೆಯ ವಿಶ್ವಸ್ಥರ, ಕಾರ್ಯಕಾರಿ ಸಮಿತಿಯ ಪೂರ್ಣ ಸಹಕಾರ ಇಲ್ಲದಿದ್ದರೆ ಇಂಥಹ ಉತ್ತಮ ಕಾರ್ಯಗಳನ್ನು ನಡೆಸುವುದು ಖಂಡಿತ ಅಸಾಧ್ಯ , ಕಳೆದ ಡಿಸೆಂಬರ್ 24ರಂದು ನಡೆಸಿದ ಸಾಮೂಹಿಕ ಮಹಾಗಣಪತಿ ಯಾಗ, ಶನೈಶ್ಚರ ಶಾಂತಿ ಹವನಕ್ಕೆ ಸಹಕರಿಸಿದ ಎಲ್ಲ ಭಕ್ತರನ್ನು ನೆನಪಿಸಿದರು,

ಜ 13 ರಂದು ಪೇಜಾವರ ಮಠದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ವಿಶ್ವಸ್ಥ ರಾದ ಅವಿನಾಶ್ ಶಾಸ್ತ್ರಿ,ಸುಶೀಲಾ ದೇವಾಡಿಗ, ಲಕ್ಷ್ಮಿ ಕೋಟ್ಯಾನ್,ಸುಚಿತ್ರ ಶೆಟ್ಟಿ,ಶ್ಯಾಮ್ ಸುಂದರ್ ಸಾಲಿಯಾನ್,ದಿನೇಶ್ ಕರ್ಕೇರ,ಪದ್ಮನಾಭ್ ಸಸಿಹಿತ್ಲು,ಹ್ಯಾರಿ ಸಿಕ್ವೇರಾ,ಅಮಿತ್ ಪೂಜಾರಿ,, ಸಂದೀಪ್ ಶೆಟ್ಟಿಗಾರ್ ಮತ್ತಿತರರನ್ನು  ಪೂರ್ಣವಾಗಿ ದುಡಿದ ಕಾರ್ಯಕರ್ತರನ್ನು ಶ್ರೀ ಕೃಷ್ಣ ಪ್ರತಿಮೆ,ಸ್ಮರಣಿಕೆ ಯನ್ನಿತ್ತು ಆಶೀರ್ವದಿಸಿ ಗೌರವಿಸಲಾಯಿತು,

ಸುಚಿತ್ರ ಶೆಟ್ಟಿ ಯವರ ಪ್ರಾರ್ಥನೆ ಮಾಡಿದರು, ಕಾರ್ಯಕ್ರಮವು ಸುಶೀಲಾ ದೇವಾಡಿಗ  ನಿರೂಪಿಸಿದರು, ಸಭೆಯ ನಂತರ ಪ್ರಸಾದ ರೂಪದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು,



Related posts

ಬಿಲ್ಲವರ ಎಸೋಸಿಯೇಶನ್‌ನಿಂದ ‘ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ’ಗೆ ಚಾಲನೆ

Mumbai News Desk

ಮಲಾಡ್ ಪೂರ್ವ ದ  ಲಕ್ಷ್ಮಣ್ ನಗರದ ಶ್ರೀ ಶನೀಶ್ವರ ಮಹೋತಭಾರ  ದೇವಸ್ಥಾನದ ಟ್ರಸ್ಟಿನ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗು ಶಿಕ್ಷಣದ ನೆರವು.

Mumbai News Desk

ಅಯ್ಯಪ್ಪ ಸ್ವಾಮಿ ಭಕ್ತವೃಂದ ಚೆಂಬೂರು, ವಾರ್ಷಿಕ ಪಡಿಪೂಜೆ ಮತ್ತು ಮಹಾಪೂಜೆ

Mumbai News Desk

ಶ್ರೀ ನಿತ್ಯಾನಂದ ಸೇವಾ ಸಮಿತಿ (ರಿ) ಮೀರಾಭಾಯಂದರ್ ಇದರ ವಾರ್ಷಿಕ ಮಹಾಸಭೆ

Mumbai News Desk

ಜಯ ಲೀಲಾ ಟ್ರಸ್ಟ್ ವತಿಯಿಂದ ಸಂಶೋಧನ ವಿದ್ಯಾರ್ಥಿಗಳಿಗೆ ಗೌರವ ಧನ ವಿತರಣೆ

Mumbai News Desk

ಎಸ್ ಎಸ್ ಸಿ ಪ್ರತಿಭ್ವಾನಿತರು: ಭಕ್ತಿ ಭಾಸ್ಕರ್ ಸುವರ್ಣ 93.60%

Mumbai News Desk