30.5 C
Mumbai
June 8, 2026
Mumbai News Kannada
ಪ್ರಕಟಣೆ

ಬಂಟರ ಸಂಘ ಮುಂಬಯಿ : ಫೆ 4 ರಂದು ವಸಯಿ-ದಾಹಣು ಪ್ರಾದೇಶಿಕ ಸಮಿತಿ ಇದರ ನೂತನ ಸಮಿತಿಯ ಪದಗ್ರಹಣ ಸಮಾರಂಭ





      ವಸಯಿ  ಪೆ 2. ಬಂಟರ ಹೆಸರಿನಲ್ಲಿಯೇ ಒಂದು ಶಕ್ತಿ ಸಂಘಟನೆ ಇದೆ. ಯಾವುದು ಅಸಾಧ್ಯವೋ ಅದನ್ನು ಸಾದಿಸಿ ತೋರಿಸುವ ಗುಣ ಬಂಟರಲ್ಲಿದೆ. ಮುಂಬಯಿ ಬಂಟರ ಸಂಘ ಮಾಡುತ್ತಿರುವ ಸಮಾಜ ಸೇವೆ ಅನನ್ಯವಾದುದು. ದುಡಿದ ಹಣ ಸಮಾಜದ ಹಿತಕ್ಕೆ ಬಳಸಿದರೆ ಸಮಾಧಾನ ಸಂತ್ರಪ್ತಿ ಎರಡು ಇದೆ ಸಮಾಜ ಸೇವೆಯೇ ದೇವರ ಸೇವೆ, ಶ್ರದ್ದಾ, ಭಕ್ತಿಯಿಂದ ಅ ಕೆಲಸ ಬದುಕಿದಷ್ಟು ಕಾಲ ಪ್ರಾಮಾಣಿಕವಾಗಿ ಮಾಡಿದರೆ ಸಾಕ್ಷಾತ್ಕಾರ ವಾಗಿ ಎಲ್ಲರ ಸಹಕಾರ ಸಿಗುತ್ತದೆ. ಮುಂಬಯಿ ಬಂಟರ ಸಂಘ ಸಮಾಜ ಬಂದುಗಳ ಅಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದೊಂದಿಗೆ 9 ಪ್ರಾದೇಶಿಕ ಸಮಿತಿ ಹೊಂದಿದ್ದು, ಪ್ರಾದೇಶಿಕ ಸಮಿತಿತಿಯ ಅದಾರದಿಂದ ತನ್ನ ಕಾರ್ಯಾಚಟುವಟಿಕೆಗಳನ್ನು ಸಮಾಜ ಬಾಂಧವರಿಗೆ ತಲುಪಿಸುವಂತೆ ಮಾಡುತ್ತಿದೆ..

2009 ರಲ್ಲಿ ಬಂಟರ ಧೀಮಂತ ನಾಯಕ ಆಗಿನ ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಪ್ರಾರಂಭ ಗೊಂಡ ಸಮಿತಿ. ಅದರ 2023=2026 ರ ಅವಧಿಯ ನೂತನ ಕಾರ್ಯಧ್ಯಕ್ಷರಾಗಿ ಕೊಡುಗೈ, ದಾನಿ, ನಗುಮೊಗದ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ ಪದಾಧಿಕಾರಿಗಳು ಅವಿರೋಧ ಆಯ್ಕೆ ಯಾಗಿದ್ದು,ನೂತನ ಸಮಿತಿಯ ಪದಗ್ರಹಣ ಸಮಾರಂಭವು ಫೆ :4 ರಂದು  ಆದಿತ್ಯವಾರ ಸಂಜೆ 5:00 ಗಂಟೆಗೆ ಹೋಟೆಲ್ ಗ್ಯಾಲಕ್ಸಿ ಸಭಾಂಗಣ ನಾಲಾಸೋಪಾರ. ಎಸ್. ಟಿ. ಡೆಪೋ ಹತ್ತಿರ ಇಲ್ಲಿ..

ಬಂಟರ ಸಂಘ ಮುಂಬಯಿ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ, ಇವರ ಅದ್ಯಕ್ಷತೆಯಲ್ಲಿ ಮುಖ್ಯ ಅತಿಥಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರು ಐಕಳ ಹರೀಶ್ ಶೆಟ್ಟಿ ಯವರ ನೇತೃತ್ವದಲ್ಲಿಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟತದ ಉಪಾಧ್ಯಕ್ಷರು ಕರ್ನಿರೆ ವಿಶ್ವನಾಥ ಶೆಟ್ಟಿ ಉಪಸ್ಥಿತತಿಯಲ್ಲಿ ಉಪಾಧ್ಯಕ್ಷರಾದ ಮಹೇಶ್ ಎಸ್ ಶೆಟ್ಟಿ, ಗೌರವ ಪ್ರದಾನ ಕಾರ್ಯದರ್ಶಿ ಡಾ :ಆರ್. ಕೆ. ಶೆಟ್ಟಿ ಕೋಶಾಧಿಕಾರಿ ಸಿಎ ರಮೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ಆರ್ ಶೆಟ್ಟಿ ತೆಲ್ಲಾರ್, ಜೊತೆ ಕೋಶಾಧಿಕಾರಿ ಶಶಿಧರ, ಕೆ, ಶೆಟ್ಟಿ ಇನ್ನಂಜೆ.   ಪಶ್ಚಿಮ ವಲಯ ಸಂಚಾಲಕ ಕಾಂದೇಶ್ ಭಾಸ್ಕರ್ ಶೆಟ್ಟಿ,  ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಚಿತ್ರಾ ಆರ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸವಿನ್. ಜೆ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರ ಉಪಸ್ಥಿತಿಯಲ್ಲಿ  ನಡೆಯಲಿದೆ.

ಪ್ರಾದೇಶಿಕ ಸಮಿತಿಯ ನೂತನ ಕಾರ್ಯಧ್ಯಕ್ಷರಾಗಿ ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಸಂಚಾಲಕರು, ಹರೀಶ್ ಪಾಂಡು ಶೆಟ್ಟಿ, ಸಲಹೆಗಾರ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಗುರ್ಮೆ, ಕಾರ್ಯಕ್ರಮ ಸಮಿತಿಯ ಸಂಚಾಲಕರು ಜಯಂತ್ ಆರ್ ಪಕ್ಕಳ,ಉಪ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರ್, ಕಾರ್ಯದರ್ಶಿಯಾಗಿ ಜಗನಾಥ್ ಶೆಟ್ಟಿ ಪಳ್ಳಿ, ಕೋಶಾಧಿಕಾರಿಯಾಗಿ ವಿಜಯ್. ಎಮ್, ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ನಾರಾಯಣ ಶೆಟ್ಟಿ, ಜೊತೆ ಕೋಶಾಧಿಕಾರಿ ಯಾಗಿ ರತೀಶ್ ಶೆಟ್ಟಿ,  ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಉಮಾ ಸತೀಶ್ ಶೆಟ್ಟಿ ಹಾಗೂ ಯುವ ವಿಭಾಗದ ಕಾರ್ಯಧ್ಯಕ್ಷೆ ಯಾಗಿ ವರ್ಷ ಶೇಖರ್ ಶೆಟ್ಟಿ ಆಯ್ಕೆಯಾಗಿದ್ದರೆ.

ಇದಲ್ಲದೆ ವಿವಿಧ ಸಮಿತಿಯ ಕಾರ್ಯಧ್ಯಕ್ಷರು 

ವಿಜಯ್ ಶೆಟ್ಟಿ ಕುತ್ತೆತೂರು (ಸಾಂಸ್ಕೃತಿಕ ಕಾರ್ಯಕ್ರಮ ಕಾರ್ಯಧ್ಯಕ್ಷರು)

ಶ್ರೀಮತಿ ಜಯ ಅಶೋಕ್ ಶೆಟ್ಟಿ

(ಕಾರ್ಯಧ್ಯಕ್ಷೆ ಶಿಕ್ಷಣ, ಹಾಗೂ ಸಮಾಜ ಕಲ್ಯಾಣ ಸಮಿತಿ)

ಸುಪ್ರೀತ್ ಶೆಟ್ಟಿ ನೀರೆ

(ಕಾರ್ಯಾಧ್ಯಕ್ಷ ಕ್ರೀಡೆ ಸಮಿತಿ)

ಸತೀಶ್ ಶೆಟ್ಟಿ ಅಡ್ವೇ ನಂದಿಕೂರು

(ಕಾರ್ಯಧ್ಯಕ್ಷರು ವೈದ್ಯಕೀಯ ಸಮಿತಿ)

ತಾರಾನಾಥ್ ಶೆಟ್ಟಿ ವಸಯಿ

ಕಾರ್ಯಧ್ಯಕ್ಷರು ಮ್ಯಾರೇಜ್ ಸೆಲ್ ಸಮಿತಿ)

ನವೀನ್ ಶೆಟ್ಟಿ ಪಳ್ಳಿ

(ಕಾರ್ಯಧ್ಯಕ್ಷರು ಸದಸತ್ವ ನೋಂದಣಿ ಸಮಿತಿ)

 ರಿತೇಶ್ ಶೆಟ್ಟಿ

(ಕಾರ್ಯಧ್ಯಕ್ಷರು ಇ-ಎಂಪ್ಲೇಯಮೆಂಟ್ ಸಮಿತಿ)

ಕ್ಯಾಟರಿಂಗ್ ಕಾರ್ಯಧ್ಯಕ್ಷರು

ದಯಾನಂದ್ ಶೆಟ್ಟಿ ಮಲ್ಲಾರ್

ಡೆಕೋರೇಷನ್ ಕಾರ್ಯಧ್ಯಕ್ಷರು

ಸುಭಾಸ್ ಶೆಟ್ಟಿ ಎರ್ಮಲ್

ಹಾಗೂ ಪ್ರಾದೇಶಿಕ ಸಮಿತಿಯ ಉತ್ಸಹಿ ಸಮಾಜ ಬಾಂದವರು ವಿವಿಧ ಹುದ್ದೆಗಳನ್ನು ಪಡೆದು ಸೇವೆಗೈಯಲ್ಲೂ ಸದಾ ತಯಾರಾಗಿರುವರು. 

ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಉಮಾ ಸತೀಶ್ ಶೆಟ್ಟಿ ಅಲ್ಲದೆ ಮಹಿಳಾ ವಿಭಾಗದ  ಉಪಕಾರ್ಯಧ್ಯಕ್ಷೆ ಅರುಣಾ ಎ. ಶೆಟ್ಟಿ, ಪಾಲಘರ್ ವಲಯದ ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆ ಸಹನಾ ಶೆಟ್ಟಿ, ಕಾರ್ಯದರ್ಶಿಯಾಗಿ ಸಂಧ್ಯಾ ಶೆಟ್ಟಿ, ಕೋಶಾಧಿಕಾರಿ ಯಾಗಿ ಜಯಶ್ರೀ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಸಂಧ್ಯಾ ಯು. ಶೆಟ್ಟಿ, ಜೊತೆ ಕೋಶಾಧಿಕಾರಿ ಯಾಗಿ ಪ್ರಭಾ ಶೆಟ್ಟಿ ಹಾಗೂ ಯುವ ವಿಭಾಗದ ಕಾರ್ಯಧ್ಯಕ್ಷೆ ಯಾಗಿ ವರ್ಷ ಶೇಖರ್ ಶೆಟ್ಟಿ, ಯುವ ವಿಭಾಗದ ಸಂಚಾಲಕ, ಪ್ರಖ್ಯಾತ್ ಶೆಟ್ಟಿ ಉಪಕಾರ್ಯಧ್ಯಕ್ಷ ರೀತಿನ್. ಎ. ಶೆಟ್ಟಿ,  ಪಾಲಘರ್ ವಲಯ ಯುವ ಉಪ ಕಾರ್ಯಾಧ್ಯಕ್ಷ ಸಚಿತ್ ಶೆಟ್ಟಿ,  ಕಾರ್ಯದರ್ಶಿ ಅಕ್ಷಯ ಶೆಟ್ಟಿ, ಕೋಶಾಧಿಕಾರಿ ವೀರಾಜ್ ಶೆಟ್ಟಿ, ಜೊತೆ ಕಾರ್ಯದರ್ಶಿ ಸಮೀಕ್ಷಾ ಶೆಟ್ಟಿ, ಜೊತೆ ಕೋಶಾಧಿಕಾರಿ ದಿರಾಜ್ ಶೆಟ್ಟಿ ಇವರುಗಳು ಆಯ್ಕೆ ಯಾಗಿರುವರು 

4/2/24 ರಂದು ಆದಿತ್ಯವಾರ ನಡೆಯಲಿರುವ ಪದಗ್ರಹಣ ಕಾರ್ಯಕ್ರಮ ಕ್ಕೆ ಎಲ್ಲಾ ಸಮಾಜ ಬಾಂದವರನ್ನು ಕಾರ್ಯಧ್ಯಕ್ಷರು ಮಂಜುನಾಥ್ ಶೆಟ್ಟಿ ಕೊಡ್ಲಾಡಿ ಹಾಗೂ ನೂತನ ಪದಾಧಿಕಾರಿಗಳು ಆಮಂತ್ರಿಸುತಿದ್ದರೆ.



Related posts

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ನ. 9ರಂದು ಚೈತನ್ಯ ಕಲಾವಿದರು ಬೈಲೂರು, ಇವರಿಂದ “ಅಷ್ಟೆಮಿ” ತುಳು ನಾಟಕ ಪ್ರದರ್ಶನ.

Mumbai News Desk

ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ, ಇರಾನಿ ಕಾಲೋನಿ ಮಲಾಡ್.ಭಕ್ತಿ ಸಂಭ್ರಮದೊಂದಿಗೆ ಶನಿ ಜಯಂತಿ ಆಚರಣೆ.

Mumbai News Desk

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಅ. 26 ರಂದು 24ನೇ ವಾರ್ಷಿಕ ಮಹಾಸಭೆ, ರಜತ ಸಂಭ್ರಮಕ್ಕೆ ಚಾಲನೆ

Mumbai News Desk

ಮಾ 16 ; ಗೋರೆಗಾಂವ್ ಇರಾನಿ ಕೊಲನಿ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಯ 69ನೇ ವಾರ್ಷಿಕ ಮಹೋತ್ಸವ,

Mumbai News Desk

ಬ್ರಹ್ಮಕಲಶ ಸಂಭ್ರಮದಲ್ಲಿ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ಮೂರ್ತಿ ದೇವಸ್ಥಾನ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿಡಿ. 3 ರಂದು 35 ನೇ ವಾರ್ಷಿಕ ಮಹಾಸಭೆ

Mumbai News Desk