July 23, 2026
Mumbai News Kannada
ಮುಂಬಯಿ

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವತಿಯಿಂದ ಮಲಾಡ್ ಪೂರ್ವದ ತುಳು  ಕನ್ನಡಿಗರ ಮನೆ ಮನೆಯಲ್ಲಿ ರಾಮ ನಾಮಸ್ಮರಣೆ







 

——-

ಮುಂಬಯಿ . ಮಲಾಡ್  ಪೂರ್ವದ ತುಳು ಕನ್ನಡಿಗರು ಸ್ಥಾಪಿಸಿದ ಶ್ರೀ ವರ ಮಹಾಲಕ್ಷ್ಮಿ ಪೂಜಾ  ಸಮಿತಿಯಲ್ಲಿ ಭಜನಾ ತಂಡ ರೂಪಗೊಂಡಿದ್ದು ಮೀರಾ ರೋಡ್ ಶ್ರೀಧರ್ ಶೆಟ್ಟಿ ಯವರ ಮಾರ್ಗದರ್ಶನದಲ್ಲಿ ಭಜನೆ ಅಭ್ಯಾಸ ನಡೆಯುತ್ತಿದ್ದು ,ಈ ಭಜಕರಿಂದ ಜನವರಿಯ 22 ರಂದು ಆಯ್ಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ಸುಸಂದರ್ಭದಲ್ಲಿ  ಮಲಾಡನ ತುಳು ಕನ್ನಡಿಗರ ಮನೆ ಮನೆ ಯಲ್ಲಿ “ಶ್ರೀ ರಾಮ ನಾಮ ಸ್ಮರಣೆ ಭಜನೆ ಬಹಳ ವಿಜೃಂಭಣೆಯಿoದ ನಡೆಯಿತು.

 ಸಮಿತಿಯ ಅಧ್ಯಕ್ಷ ನ್ಯಾ. ಜಗನ್ನಾಥ್ ಶೆಟ್ಟಿ ಪಣಿಯೂರ್ ಇವರ  ನೇತೃತ್ವದಲ್ಲಿ   ಬೆಳಿಗ್ಗೆ  ದಿನೇಶ್ ಕುಲಾಲ ಇವರ ಮನೆಯಲ್ಲಿ ಪ್ರಥಮ ಪೂಜೆ ಸಲ್ಲಿಸಿ , ಇಲ್ಲಿಂದ  ಸದಾನಂದ ಕೋಟ್ಯಾನ್, ಪ್ರಭಾಕರ ಅಮಿತ ಶೆಟ್ಟಿ, ದಿನೇಶ್ ಆಚಾರ್ಯ, ರಾಮ ಪೂಜಾರಿ, ಸಂತೋಷ್ ಚೌಟ, ದಿನೇಶ್ ಪೂಜಾರಿ, ಶಂಕರ್ ಸುವರ್ಣ ಸ್ವಾಮಿಯವರ ಓಂ ಶಿವ ಸಾಯಿ ದುರ್ಗಾ ನಿತ್ಯಾನಂದ ಟ್ರಸ್ಟ್ ಮಂದಿರದಲ್ಲಿ,,ಜಯಂತಿ ಸಾಲಿಯಾನ್,ಕುಮಾರೇಶ ಆಚಾರ್ಯ,ಕೃಷ್ಣ ಮೂಲ್ಯ, ಜಗನಾಥ್ ಮೆಂಡನ್ , ಸುರೇಂದ್ರ  ಆಚಾರ್ಯ, ಲಕ್ಷ್ಮಣ್ ರಾವ್ ಮತ್ತಿತರ ಮನೆಗಳಲ್ಲಿ ರಾಮ ನಾಮ ಸ್ಮರಣೆ, ಭಜನೆ ನಡೆಯಿತು

.

. ಬೆಳಿಗ್ಗೆ  ಶ್ರೀರಾಮನ ಮೂರ್ತಿಗೆ ವಿಶೇಷ ಪೂಜೆಯನ್ನು ಸನತ್ ಪೂಜಾರಿ, ಸುರೇಂದ್ರ ಆಚಾರ್ಯರು ಸುದೀಪ್ ಪೂಜಾರಿ ,ದಿನೇಶ್ ಪೂಜಾರಿ, ಜಗನ್ನಾಥ್ ಮೆಂಡನ್ ನಡೆಸಿದರು.

 ಬಳಿಕ ಭಜಕರನ್ನು  ಭಜನೆಗೆ  ಆಮಂತ್ರಣ ಮಾಡಿದ ತುಳು ಕನ್ನಡಿಗರ ಮನೆಗಳಲ್ಲಿ ದೀಪ ಬೆಳಗಿಸುವುದರ ಜೊತೆಗೆ ಭಜನೆ ಮಂಗಳಾರತಿ ನಡೆಯಿತು..

ಈ ಸಂದರ್ಭದಲ್ಲಿ ಪೂಜಾ ಸಮಿತಿಯ ಉಪಾಧ್ಯಕ್ಷರುಗಳಾದ ಸಂತೋಷ್. ಕೆ. ಪೂಜಾರಿ ,ಕುಮಾರೇಶ್ ಆಚಾರ್ಯ ,ಪ್ರದಾನ ಕಾರ್ಯದರ್ಶಿ ದಿನೇಶ್ ಪೂಜಾರಿ, ಕೋಶಾಧಿಕಾರಿ ಜಗನ್ನಾಥ್ ಮೆಂಡನ್, ಸದಾನಂದ ಕೋಟ್ಯಾನ್.

ಮಹಿಳಾ ವಿಭಾಗದ  ಕಾರ್ಯದ್ಯಕ್ಷೆ ರತ್ನ . ಡಿ. ಕುಲಾಲ್, ಉಪ ಕಾರ್ಯ ಧ್ಯಕ್ಷೆ   ಗೀತಾ ಮೆಂಡನ್,  ಕಾರ್ಯದರ್ಶಿ ಶ್ರೀಮತಿ ಕೆ ಆಚಾರ್ಯ, ಕೋಶಾಧಿಕಾರಿ ಶೀಲಾ ಪೂಜಾರಿ , ಜೊತೆ ಕಾರ್ಯದರ್ಶಿ ಶೋಭಾ ರಾವ್ . ಜೊತೆ ಕೋಶಧಿಕಾರಿ ನಳಿನೀ ಕರ್ಕೇರ, ಮತ್ತು  ಶೋಭಾ ಶಾಲಿಯಾನ್,. ಪದ್ಮಾವತಿ ಪೂಜಾರಿ,. ಶಾರದಾ ಪೂಜಾರಿ .ಜಯಂತಿ ಸಾಲಿಯಾನ್. ಪುಷ್ಪ ಆಚಾರ್ಯ. ಭಾರತಿ ಆಚಾರ್ಯ  , ವಿದ್ಯಾ ಆಚಾರ್ಯ, ಹರಿಣಾಕ್ಷಿ ಮೂಲ್ಯ, ರೇವತಿ ಪೂಜಾರಿ, ಅರುಣ ಪೂಜಾರಿ, ಪ್ರೇಮ ಆಚಾರ್ಯ,ಪುಷ್ಪಲತಾ ಸಾಲಿಯನ್, ಶೃತಿ ಪೂಜಾರಿ, ಕುಸುಮ  ಶೆಟ್ಟಿ ,ಯುವ ವಿಭಾಗದ  ಕಾರ್ಯದ್ಯಕ್ಷೆ ಸೌಮ್ಯ ಮೆಂಡನ್, ಕಾರ್ಯದರ್ಶಿ ಸುದೀಪ್ ಪೂಜಾರಿ ,. ಸಂಚಾಲಕ ಡಾಕ್ಟರ್ ಶಶಿನ್ ಆಚಾರ್ಯ   ಹಾಗೂ , ಪವನ್ ರಾವ್ , ನಿಧಿ ನಾಯಕ್, ಲಾಸ್ಯ ಕುಲಾಲ್  ಪಾಲ್ಗೊಂಡಿದ್ದರು.



Related posts

ಎಸ್ ಎಸ್ ಸಿ ಪರೀಕ್ಷೆ: ರಕ್ಷ್ಮಾ ಜಯಂತ್ ಕುಳಾಯಿಗೆ ಶೇ. 99.20 ಅಂಕ

Mumbai News Desk

ಫೆ 5 ಮತ್ತು 6ರಂದು ಮುಂಬೈಯ ಕೆಲ ಭಾಗಗಳಲ್ಲಿ 30 ಗಂಟೆಗಳ ಕಾಲ ನೀರಿನ ಪೂರೈಕೆ ಸ್ಥಗಿತ

Mumbai News Desk

ಮುಂಬೈ ಕುಲಾಲ ಸಂಘ ಮುಂಬೈ ಇದರ ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಮಾತಾ ವೈಷ್ಣೋದೇವಿ ದರ್ಶನ: ಭಕ್ತಿ-ಒಗ್ಗಟ್ಟಿನ ಸಮಾಗಮ

Mumbai News Desk

ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆ: ಐತಿಹಾಸಿಕ ಕ್ಷಣದಲ್ಲಿ ಪಾಲ್ಗೊಂಡಿದ್ದ ನ್ಯೂ ಪನ್ವೇಲ್‌ನ ಮಾಜಿ ಕಾರ್ಪೊರೇಟರ್ ಸಂತೋಷ್ ಜಿ ಶೆಟ್ಟಿ

Mumbai News Desk

ಗೋರೆಗಾಂವ್ ಕರ್ನಾಟಕ ಸ಼ಂಘ, “ರಂಗಸ್ಥಳ” ದಿಂದ ಆಟಿಡೊ಼ಂಜಿ ಬಯ್ಯದ ಪೋರ್ತು 2025

Mumbai News Desk

ಕುಲಾಲ ಸಂಘದ ಮುಂಬಯಿಯ ನವಿ ಮುಂಬಯಿ ಸ್ಥಳೀಯ ಸಮಿತಿ, ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ , ಭಜನೆ 

Mumbai News Desk