September 6, 2026
Mumbai News Kannada
ಸುದ್ದಿ

ನಾವುಂದ ಮೂರ್ತೆದಾರರ ಸೊಸೈಟಿಯಿಂದ 9 ಲಕ್ಷ ರೂ. ಠೇವಣಿ ಹಣ ವಂಚನೆ : 16 ಮಂದಿಯ ವಿರುದ್ದ ಪ್ರಕರಣ ದಾಖಲು





ಉಡುಪಿ ಜಿಲ್ಲೆಯ ನಾವುಂದ ಮೂರ್ತೆದಾರರ ಸೊಸೈಟಿಯ ಅಧ್ಯಕ್ಷರು ಹಾಗೂ ನಿರ್ದೇಶಕರ ಮಂಡಳಿಯ ಸಲಹೆಯ ಮೇರೆಗೆ 9 ಲಕ್ಷ ರೂಪಾಯಿಯನ್ನು ಆರುವರೆ ವರ್ಷ ಅವಧಿಗೆ ಡೆಪಾಸಿಟ್‌ ಇಟ್ಟರೆ ಅವಧಿ ಮುಗಿದ ಬಳಿಕ 18 ಲಕ್ಷ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿದ್ದರು. ಅದರಂತೆಯೇ ಉಮೇಶ್‌ ಅವರು 2021 ರ ಜುಲೈ 29 ರಂದು ಸೊಸೈಟಿಯಲ್ಲಿ 9 ಲಕ್ಷ ರೂಪಾಯಿ ಹಣವನ್ನು ಜಮೆ ಮಾಡಿದ್ದರು.
ಠೇವಣಿ ಇರಿಸಿದ್ರೆ 6 ವರ್ಷಗಳಲ್ಲೇ ಹಣವನ್ನು ಡಬ್ಬಲ್‌ ಮಾಡಿಕೊಡುವುದಾಗಿ ಭರವಸೆ ನೀಡಿ 9 ಲಕ್ಷ ರೂಪಾಯಿ ಹಣವನ್ನು ಡೆಪಾಸಿಟ್‌ ಇರಿಸಿಕೊಂಡು, ನಂತರ ಹಣ ವಾಪಾಸ್‌ ನೀಡದೇ ವಂಚಿಸಿರುವ ಕುರಿತು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಮೂರ್ತೆದಾರರ ಸೊಸೈಟಿ (Navunda Murthedarara Seva Sahakari Sangha ) ಯ ವಿರುದ್ದ ಆರೋಪ ಕೇಳಿಬಂದಿದ್ದು, ಸೊಸೈಟಿ ಸೇರಿದಂತೆ ಒಟ್ಟು 16 ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ.
ಕುಂದಾಪುರ : ಠೇವಣಿ ಇರಿಸಿದ್ರೆ 6 ವರ್ಷಗಳಲ್ಲೇ ಹಣವನ್ನು ಡಬ್ಬಲ್‌ ಮಾಡಿಕೊಡುವುದಾಗಿ ಭರವಸೆ ನೀಡಿ 9 ಲಕ್ಷ ರೂಪಾಯಿ ಹಣವನ್ನು ಡೆಪಾಸಿಟ್‌ ಇರಿಸಿಕೊಂಡು, ನಂತರ ಹಣ ವಾಪಾಸ್‌ ನೀಡದೇ ವಂಚಿಸಿರುವ ಕುರಿತು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ನಿವಾಸಿಯಾಗಿರುವ ಉಮೇಶ್‌ ಎಂಬವರು ನಾವುಂದ ಮೂರ್ತೆದಾರರ ಸೊಸೈಟಿಯ ಅಧ್ಯಕ್ಷರು ಹಾಗೂ ನಿರ್ದೇಶಕರ ಮಂಡಳಿಯ ಸಲಹೆಯ ಮೇರೆಗೆ 9 ಲಕ್ಷ ರೂಪಾಯಿಯನ್ನು ಆರುವರೆ ವರ್ಷ ಅವಧಿಗೆ ಡೆಪಾಸಿಟ್‌ ಇಟ್ಟರೆ ಅವಧಿ ಮುಗಿದ ಬಳಿಕ 18 ಲಕ್ಷ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿದ್ದರು. ಅದರಂತೆಯೇ ಉಮೇಶ್‌ ಅವರು 2021 ರ ಜುಲೈ 29 ರಂದು ಸೊಸೈಟಿಯಲ್ಲಿ 9 ಲಕ್ಷ ರೂಪಾಯಿ ಹಣವನ್ನು ಜಮೆ ಮಾಡಿದ್ದರು.

ನಾವುಂದ ಮೂರ್ತೆದಾರರ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿಗಳು ಕಲ್ಪವೃಕ್ಷ ಬಾಂಡ್‌ ಸಿ ನಂಬರ್‌ ಇರುವ ದಾಖಲೆಯನ್ನು ನೀಡಿದ್ದರು. ಆದರೆ ಉಮೇಶ್‌ ಅವರಿಗೆ ಹಣದ ಸಮಸ್ಯೆ ಉಂಟಾದಾಗ ಸೊಸೈಟಿಗೆ ತೆರಳಿ ನಾವು ಡೆಪಾಸಿಟ್‌ ಇರಿಸಿದ್ದ ಹಣವನ್ನು ಹಿಂದಿರುಗಿಸುವಂತೆ ಕೇಳಿದ್ದಾರೆ. ಆದರೆ ಈ ವೇಳೆಯಲ್ಲಿ ಸೊಸೈಟಿಯವರು ಹಣ ನೀಡಲು ನಿರಾಕರಿಸಿದ್ದಾರೆ. ಸೊಸೈಟಯಲ್ಲಿ ನೀವು 9 ಲಕ್ಷ ರೂಪಾಯಿ ಹಣವನ್ನು ನೀವು ಜಮೆ ಮಾಡಿಲ್ಲ. ಸಿಸಿ ಬಾಂಡ್‌ಗೂ ಸೊಸೈಟಿಗೂ ಯಾವುದೇ ಸಂಬಂಧವಿಲ್ಲ, ನಿಮ್ಮ ಹಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬ ಹಿಂಬರಹವನ್ನು ನೀಡಿದ್ದರು.

ಮೂರ್ತೆದಾರರ ಸೊಸೈಟಿಯಿಂದ ತನಗೆ ಅನ್ಯಾಯ ಆಗಿರುವ ಕುರಿತು ನ್ಯಾಯಾಲಯಕ್ಕೆ ದೂರು ನೀಡಿದ್ದರು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಬೈಂದೂರು ಠಾಣೆಯ ಪೊಲೀಸರು ನಾವುಂದ ಮೂರ್ತೆದಾರರ ಸೊಸೈಟಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು. ಪ್ರಕರಣಕ್ಕೆ ಸಂಬಂಧಿಸಿದಂತೆ ನೀಲಾಧರ ಪೂಜಾರಿ ನಾವುಂದ, ದಿನೇಶ ಪೂಜಾರಿ ಕೊಡೇರಿ , ಮೂರ್ತೆದಾರರ ಸೊಸೈಟಿಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಪ್ರತಿನಿಧಿ ವಿರುದ್ದ ಪ್ರಕರಣ ದಾಖಲಾಗಿದೆ.
ಮಾತ್ರವಲ್ಲದೇ ಅಧ್ಯಕ್ಷ ವಿಜಯ ಪೂಜಾರಿ ತ್ರಾಸಿ, ಉಪಾಧ್ಯಕ್ಷ ವಿಜಯ ಕುಮಾರ್ ಕೊಡೇರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಂಕರ ಪೂಜಾರಿ , ಗುಮಾಸ್ತೆ ದೀಪಾ ಪೂಜಾರಿ , ನಿರ್ದೇಶಕರುಗಳಾದ ಅಣ್ಣಪ್ಪ ಪೂಜಾರಿ ಮರವಂತೆ, ನಾರಾಯಣ ಪೂಜಾರಿ ನಾವುಂದ , ಬಾಬು ಪೂಜಾರಿ ನಾವುಂದ , ನಾರಾಯಣ ಪೂಜಾರಿ ಆಳೊಳ್ಳಿ, ಕೊಡೇರಿ , ವೆಂಕಟೇಶ ಪೂಜಾರಿ ಕೊಡೇರಿ, ಆನಂದ ಪೂಜಾರಿ ನಾವುಂದ, ಕೃಷ್ಣ ಪೂಜಾರಿ ನಾಗೂರು, ಪದ್ದು ಪೂಜಾರಿ ತ್ರಾಸಿ ಹಾಗೂ ಕವಿತಾ ಪೂಜಾರಿ ತ್ರಾಸಿ ಅವರ ವಿರುದ್ಧವೂ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ. ದೂರುದಾರರಿಂದ ಹಣವನ್ನು ಠೇವಣಿ ಇರಿಸಿಕೊಂಡು ಹಣವನ್ನು ಹಿಂದಿರುಗಿಸದೆ ನಂಬಿಸಿ ಮೋಸ ಮಾಡಿರುವ ಕುರಿತು ಪ್ರಕರಣ ದಾಖಲಾಗಿದೆ



Related posts

ಬಜೆಟ್ ನಲ್ಲಿ ನಿರ್ಲಕ್ಷ್ಯ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಆಗ್ರಹ* ಬಂಟರ ಅಭಿವೃದ್ದಿ ನಿಗಮ ಸ್ಥಾಪಿಸಿ : ಐಕಳ ಹರೀಶ್ ಶೆಟ್ಟಿ

Mumbai News Desk

ಬೊಯಿಸರ್ ಪಶ್ಚಿಮದ ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಪೂಜಾ ಕಾರ್ಯಕ್ರಮ ಸಂಪನ್ನ.

Mumbai News Desk

ಬಂಟ್ವಾಳ: ಮಕ್ಕಳ ಸಂಭ್ರಮೋತ್ಸವ, ಗಿರಿಜಾ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ : ಪ್ರಶಸ್ತಿ ಸ್ವೀಕರಿಸಿದ ಮುಂಬೈಯ ಪ್ರಭಾ ಎನ್ ಸುವರ್ಣ

Mumbai News Desk

ಹಿರಿಯ ರಂಗಕರ್ಮಿ, ಚಿತ್ರ ನಿರ್ಮಾಪಕ ಸದಾನಂದ ಸುವರ್ಣ ನಿಧನ

Mumbai News Desk

ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್ ವಶಕ್ಕೆ

Mumbai News Desk

ಕುಕ್ಕಳ ಶ್ರೇಯಸ್ ಪೂಜಾರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ

Mumbai News Desk