31 C
Mumbai
June 8, 2026
Mumbai News Kannada
ಪ್ರಕಟಣೆ

ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು) 16ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ. ಸಾಧಕರಿಗೆ ಸನ್ಮಾನ.





ಮುಂಬಯಿ :ಶ್ರಾವಣ ಮಾಸದ ಶುಭ ದಿನಗಳಲ್ಲಿ ಸಂಪತ್ತಿನ ಆದಿ ದೇವತೆ ಶ್ರೀ ಮಹಾಲಕ್ಷ್ಮೀಯ ಪೂಜೆಯ ಮೂಲಕ ಪ್ರಸನ್ನಗೊಳಿಸುವ ಮಹಾಕಾರ್ಯದ ಅಂಗವಾಗಿ   ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು) ವತಿಯಿಂದ 16ನೇ ವಾರ್ಷಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು   ಸಂತೋಷ್ ಭಟ್ ಚಾರ್‌ಕೋಪ್ ಕಾಂದಿವಲಿ ಇವರ ಪೌರೋಹಿತ್ಯದಲ್ಲಿ ಆ.11ರಂದು ಬೆಳಿಗ್ಗೆ 7.30 ರಿಂದ ಸಂಜೆ 6 ರ ತನಕ  ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗೋಮಂತಕ್ ಸೇವಾ ಸಂಘ, ಗೋಮಂತಕ್ ಚೌಕ್, ಮಾಲವೀಯ ರಸ್ತೆ, ವಿಲೆ ಪಾರ್ಲೆ ಪೂರ್ವ, ಮುಂಬಯಿ ಇಲ್ಲಿ ನಡೆಯಲಿದೆ

ಬೆಳಿಗ್ಗೆ ಗಂಟೆ 7.30ರಿಂದ ಭಜನಾ ಸಂಕೀರ್ತನೆ,  ಶ್ರೀ ಸದ್ಗುರು ನಿತ್ಯಾನಂದ ಭಜನಾ ಮಂಡಳಿ ಸಹಕಾರವಾಡಿ ಗೊರೆಗಾಂವ್ ಪೂರ್ವ ಮತ್ತು ಗುರುವಂದನಾ ಭಜನಾ ಮಂಡಳಿ, ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿ , ಕುಲಾಲ ಸಂಘ ಮುಂಬಯಿ ಇವರಿಂದ  , ಬೆಳಿಗ್ಗೆ10 .30 ರಿಂದ ಸಭಾ ಕಾರ್ಯಕ್ರಮ,  11.30ರಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ.  

   ಮಧ್ಯಾಹ್ನ 2 ರಿಂದ ಸಾಯಂಕಾಲ 6ರ ತನಕ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ, ನೃತ್ಯ, ಬಳಗ್ ದ. ಸದಸ್ಯ ರಿಂದ ವಿವಿಧ ಪ್ರತಿಭೆಗಳಿಂದ ನಡೆಯಲಿದೆ.

ಬೆಳಿಗ್ಗೆ 11:00 ಕ್ಕೆ ನಡೆಯುವ ಸಭಾ ಕಾರ್ಯಕ್ರಮದ  ಬಳಗದ ಅಧ್ಯಕ್ಷರಾದ ಹರೀಶ್‌ ಡಿ. ಮೂಲ್ಯ   ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಆಶೀರ್ವಚನವನ್ನು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ಪರಮಪೂಜ್ಯನೀಯ ಲಕ್ಷ್ಮಿ ನಾರಾಯಣ ಆಸ್ರಣ್ಣ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ,  ಕುಲಾಲ ಸಂಘ ಮುಂಬಯಿ ಗೌರವ ಅಧ್ಯಕ್ಷರಾದ ಪಿ ದೇವದಾಸ್ ಎಲ್ ಕುಲಲ್, ಸಮಾಜ ಸೇವಕಿ ಸುಲತಾ ಶಶಿಧರ್ ಶೆಟ್ಟಿ, ನಲಾಸೋಪಾರ ಸಾಯಿಕೃಪಾ ಹೋಟೆಲಿನ ಅಶೋಕ್ ಶೆಟ್ಟಿ, ನಾನಿಲ್ತಾರ್ ಕುಲಾಲ ಸಂಘ ಮುಂಡ್ಕೂರು ಇದರ ಅಧ್ಯಕ್ಷ ಜಯರಾಮ ಕುಲಾಲ್,  ಕಾರ್ಕಳ ತಾಲೂಕು ಪಂಚಾಯತಿನ ಮಾಜಿ ಉಪಾಧ್ಯಕ್ಷ ಗೋಪಾಲ್ ಮೂಲ್ಯ  . 

ಕುಲಾಲ ಸಂಘ ನವಿ ಮುಂಬಯಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಕುಲಾಲ್ , ಉಪ ಕಾರ್ಯಾಧ್ಯಕ್ಷೆ ದೇವಕಿ ಎಸ್ ಸಾಲ್ಯಾನ್, ತುಳುಕುಟ ಫೌಂಡೇಶನ್ ನಲಸೊಪಾರ ಮಹಿಳಾ ವಿಭಾಗದ ಕೋಶಾಧಿಕಾರಿ ನಳಿನಿ ಎಸ್ ಪೂಜಾರಿ, ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ನಿಗಮ ನಿಯಮಿತ ಇದರ ಕಿರಿಯ ಅಭಿಯಂತಕ ರವಿ ಕುಲಾಲ್ ಮತ್ತು ಸಮಾಜ ಸೇವಕಿ ತುಳಸಿ ಬಂಗೇರ ಮೀರಾ ರೋಡ್ ಇವರು ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಲಿರುವರು.

 ಈ ಸಮಾರಂಭದಲ್ಲಿ ಕುಲಾಲ ಸಂಘ ಮುಂಬಯಿಯ ಅಧ್ಯಕ್ಷ  ರಘು ಎ ಮೂಲ್ಯ ಪಾದೆಬೆಟ್ಟು ಮತ್ತು ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು)  ಇದರ ಹಿರಿಯ ಸದಸ್ಯೆ ಕಲ್ಯಾಣಿ ಮಹಾಬಲ ಬಂಗೇರ ಖಾರ್ ಧಾಂಡ ಇವರನ್ನು ಸನ್ಮಾನಿಸಲಾಗುವುದು.

ಈ ಧಾರ್ಮಿಕ ಕಾರ್ಯದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು)  ಪರವಾಗಿ ಸಂಚಾಲಕ ಕೃಷ್ಣ ಮೂಲ್ಯ ನಾಲಾಸೋಪಾರ, ಉಪಾಧ್ಯಕ್ಷ ದಿನೇಶ್‌ ಮೂಲ್ಯ, ಅಂಧೇರಿ, ಕಾರ್ಯದರ್ಶಿ

ದಿನೇಶ್‌ ಬಂಗೇರ, ಖಾರ್‌ದಾಂಡ ,  ಕೋಶಾಧಿಕಾರಿ ರೋಹಿದಾಸ್‌ ಕೆ, ಬಂಜನ್, ನಾಲಾಸೋಪಾರ, ಜೊತೆ ಕಾರ್ಯದರ್ಶಿ ಲೋಕೇಶ್ ಮೂಲ್ಯ, ಗೊರೆಗಾಂವ್,  ಜೊತೆ ಕೋಶಾಧಿಕಾರಿ ವಿಶ್ವನಾಥ ಕುಂದರ್‌, ಅಂಧೇರಿ ಸಲಹಾ ಸಮಿತಿತ ಸದಸ್ಯರುಗಳಾದ , ಹರೀಶ್ ಕುಲಾಲ್ ಮೀರಾ ರೋಡ್,  ಸುರೇಶ್ ವಿ ಬಂಗೇರ ಶೇರ್ ಪಂಜಾಬ್,  ಕೇಶವ ಬಂಜನ್, ಜೋಗೇಶ್ವರಿ,  ನಾರಾಯಣ ಅರ್ಕ್ಯಾನ್, ಅಂಧೇರಿ,  ವಿಠ್ಠಲ್ ಮೂಲ್ಯ ಅಂದೇರಿ, ವಾಮನ್ ಡಿ ಮೂಲ್ಯ  ಆಧ್ಯಪಾಡಿ,  ಯಶೋದರ ಬಂಗೇರ ಮೀರಾ ರೋಡ್ , ಸರೋಜಾ ಎಚ್ ಮೂಲ್ಯ ಅಂದೇರಿ, ಅರ್ಚನಾ ಎಸ್ ಮೂಲ್ಯ ವಸಯಿ, 

ಸೌಮ್ಯ ಡಿ ಬಂಗೇರ ಖಾರ್, ನಳಿನಿ ಎನ್. ಬಂಜನ್, ವಿರಾ‌ರ್,  ವಿಜಯಲಕ್ಷ್ಮಿ ಬಂಜನ್ ನಾಲಾಸೋಪಾರ,  ಕವಿತಾ ಸಾಲ್ಯಾನ್, ಮೀರಾ ರೋಡ್, ರೇವತಿ ಮೂಲ್ಯ, ಅಂಧೇರಿ, ಬೇಬಿ ಮೂಲ್ಯ ಜೋಗೇಶ್ವರಿ, ಸುನಿತಾ ಎಸ್‌. ಮೂಲ್ಯ, ವಿರಾರ್, ದಿವ್ಯಾ ಮೂಲ್ಯ, ಗೋರೆಗಾಂವ್,   ದೀಪಾ ಬಂಜನ್, ವಿರಾರ್, ಜ್ಯೋತಿ ಬಂಜನ್ ಡೋಂಬಿವಲ್ಲಿ,  ಸವಿತ ದೇವಾಡಿಗ, ಸುಕೇಶ್ ಮೂಲ್ಯ ವಿರಾರ್,  ಶಶಿಕಾಂತ್ ಮೂಲ್ಯ ವಿರಾರ್,  ಸದಾಶಿವ ಮೂಲ್ಯ ವಿರಾರ್, ನಿತಿನ್ ಸಿ ಬಂಜನ್ ವಿರಾರ್,  ರಮೇಶ್ ಮೂಲ್ಯ ಖಾರ್ಗರ್, ಶಂಕರ್ ಮೂಲ್ಯ ವಸಯಿ, ನಾಗಪ್ಪ ಸಿ ಮೂಲ್ಯ ವಿರಾರ್, ಪ್ರಕಾಶ್ ಮೂಲ್ಯ ಸಾಕಿನಾಕ,  ಸಚಿನ್ ಬಂಜನ್ ಡೊಂಬಿವಲಿ,  ಸುರೇಶ್ ನಾಯಕ್ ಬಾಂದ್ರಾ,  ದಿನೇಶ್ ಪೂಜಾರಿ ಸಾಕಿನಾಕ,  ಸುಧಾಕಾರ್ ಮೂಲ್ಯ ನಲಾಸೋಪಾರ, ದಿನೇಶ್ ಹೆಮ್ಮಾಡಿ ಜೋಗೇಶ್ವರಿ, ಹಾಗೂ ಎಲ್ಲಾ ಸದಸ್ಯರು ವಿನಂತಿಸಿದ್ದಾರೆ.



Related posts

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ: ಅ. 11 ಮತ್ತು 12ರಂದು 48ನೇ ವಾರ್ಷಿಕ ಏಕಾಹ ಭಜನಾ ಮಂಗಲೋತ್ಸವ

Mumbai News Desk

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಜೋಡು ಜೀಟಿಗೆ ನಾಟಕ : ಮಂಗಳೂರಿನ ಪುರಭವನದಲ್ಲಿ ಅದ್ದೂರಿ ಕಾರ್ಯಕ್ರಮ

Mumbai News Desk

ಶ್ರೀ ಸದ್ಗುರು ಶನೀಶ್ವರ ಸೇವಾ ಸಮಿತಿ ಕಾಂದಿವಲಿ ಪೂರ್ವ : ನ. 15ರಂದು, 51ನೇ ವಾರ್ಷಿಕ ಶ್ರೀ ಶನೇಶ್ವರ ಗ್ರಂಥ ಪಾರಾಯಣ ಮಹೋತ್ಸವ ಮತ್ತು ಭಂಡಾರ

Mumbai News Desk

ಮೂಲ್ಕಿ : ನ. 30ರಂದು ಹರಿಶ್ಚಂದ್ರ ಪಿ ಸಾಲ್ಯಾನ್ ಅವರ “ಮುಲ್ಕಿಯ ಕೀರ್ತಿಶೇಷ ಸಾಧಕರು ” ಕ್ರತಿ ಬಿಡುಗಡೆ ಸಮಾರಂಭ

Mumbai News Desk

ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ -ಜೂನ್ 8 ರಂದು ಉಡುಪಿಯಲ್ಲಿ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆಯವರಿಗೆ ಪದ್ಮವಿಭೂಷಣ ಜಾರ್ಜ್ ಫೆರ್ನಾಂಡೀಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ – 2025 ಪ್ರದಾನ

Mumbai News Desk

ಡಿ.24 ಕ್ಕೆ ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಮೀರಾ ,ಭಾರತಿ ಪಾರ್ಕ್ ಮೀರಾರೋಡ್, 27ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk