30 C
Mumbai
April 24, 2026
Mumbai News Kannada
ಮುಂಬಯಿ

ಬೋರಿವಲಿ ಐ.ಸಿ. ಕಾಲೋನಿ ಮಂಡಳಿಯ 33ನೇ ಗಣೇಶೋತ್ಸವ ಭಕ್ತಿ ಸಂಭ್ರಮದೊಂದಿಗೆ ಆಚರಣೆ






ಚಿತ್ರ,ವರದಿ : ದಿನೇಶ್ ಕುಲಾಲ್


ಮುಂಬಯಿ ಸೆ13. ಬೋರಿವಲಿ ಪಶ್ಚಿಮದ ಐಸಿ ಕೊಲೋನಿಯ ತುಳು ಕನ್ನಡಿಗರೊಂದಿಗೆ ಗಣೇಶ ಭಕ್ತರು 1992 ರಲ್ಲಿ ಸ್ಥಾಪಿಸಿರುವ ಐಸಿ ಕೊಲೋನಿ ಗಣೇಶೋತ್ಸವ ಮಂಡಲಿಯ ಗಣೇಶ ಉತ್ಸವ ಸೆಪ್ಟೆಂಬರ್ 7 ರಿಂದ 11 ವರಗೆ ಭಕ್ತಿ ಸಂಭ್ರಮದೊಂದಿಗೆ ನಡೆಯಿತು.ಐಸಿ ಕೊಲೋನಿಯ ಮುಖ್ಯರಸ್ತೆಯಲ್ಲಿ ನಿರ್ಮಿಸಿರುವ ಭವ್ಯ ಮಂಟಪದಲ್ಲಿ 33 ನೇ ವಾರ್ಷಿಕೋತ್ಸವದ ವೈಭವದ ಗಣೇಶ ಉತ್ಸವ ಸಪ್ಟಂಬರ್ 7ರಂದು ಗಣೇಶನ ಭವ್ಯ ಮೂರ್ತಿಯನ್ನು ಸ್ಥಾಪಿಸಿ, ಸೆಪ್ಟೆಂಬರ್ 11ರವರೆಗೆ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಭಜನೆ, ಹಳದಿ ಕುಂಕುಮ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. .ಪ್ರತಿದಿನ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಗಣೇಶನ ದರ್ಶನವನ್ನು ಪಡೆದರು. ನಗರದ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ರಾಜಕೀಯ ಮುಖಂಡರು, ಧಾರ್ಮಿಕ ಸೇವಾಕರ್ತರು ಮಂಡಳಿಯ ಮಹಾಪ್ರಸಾದವನ್ನು, ಗೌರವವನ್ನು ಸ್ವೀಕರಿಸಿದರು. ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ. ಮತ್ತು ನಿರ್ದೇಶಕ ಮಂಡಳಿ, ದೇವರ ದರ್ಶನವನ್ನು ಪಡೆದು ಗೌರವವನ್ನು ಸ್ವೀಕರಿಸಿದರು. ಪಾಲ್ಗೊಂಡ ಎಲ್ಲರನ್ನು ಐ.ಸಿ. ಕಾಲೋನಿ ಸರ್ವಜನಿಕ ಗಣೇಶೋತ್ಸವ ಮಂಡಲದ ಅಧ್ಯಕ್ಷರು ಹರೀಶ್ ಸುವರ್ಣ.ಉಪಾಧ್ಯಕ್ಷರುಗಳದ ರಾಜು ಪೂಜಾರಿ, ಸಿದ್ದು ಗಾಯಕವಾಡ, ರಾಜೇಂದ್ರ ಇಂದುಲ್ಕರ್, ಕಾರ್ಯದರ್ಶಿ, ಶಂಕರ ಪೂಜಾರಿ, ಕೋಶಾಧಿಕಾರಿ ಶ್ರೀಕಾಂತ್ ಹೆಜಮಾಡಿ. ಮಹಿಳಾ ಸದಸ್ಯರು ಯುವ ಸದಸ್ಯರು ಗೌರವಿಸಿದರು.



Related posts

ಕುಂದರ್ ಮೂಲಸ್ಥಾನ ಸಭಾ ಮುಂಬಯಿ : ವಾರ್ಷಿಕ ಮಹಾಸಭೆ

Mumbai News Desk

ಸಾಂತಾಕ್ರೂಜ್ ಶ್ರೀ ಪೇಜಾವರ ಮಠದಲ್ಲಿ ಶೀರೂರು ಪರ್ಯಾಯೋತ್ಸವ – 2026 ಪೂರ್ವಭಾವಿ ಸಭೆ

Mumbai News Desk

ಫಲಿಮಾರು ಮಠದೀಶರಿಗೆ ವಿಶ್ವ ಬಂಟರ ಕಾರ್ಯಕ್ರಮದ ಆಮಂತ್ರಣ.

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

Mumbai News Desk

ಕರ್ನಾಟಕ ಸಂಘ ಕಲ್ಯಾಣ್, ವಾರ್ಷಿಕ ಮಹಾ ಸಭೆ : ಹಾಗೂ ನೂತನ ಪದಾಧಿಕಾರಿಗಳ ನಿಯುಕ್ತಿ, ಅಧ್ಯಕ್ಷರಾಗಿ ಜಯಂತ್ ದೇಶಮುಖ್

Mumbai News Desk

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ )ಥಾಣೆ ಸಮಿತಿಯ ಅಧ್ಯಕ್ಷರಾಗಿ ಗೋಪಾಲ ಎಸ್ ಚಂದನ್ ಆಯ್ಕೆ.

Mumbai News Desk