30 C
Mumbai
April 24, 2026
Mumbai News Kannada
ಪ್ರಕಟಣೆ

ಜ. 5 : ಶ್ರೀ ಅಯ್ಯಪ್ಪ ಭಕ್ತ ವೃಂದ ಸಾಮಾಜಿಕ ಸಂಸ್ಥೆ ನಾಲಾಸೋಪಾರ, 29ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ





.

ನಾಲಾಸೋಪಾರ ಪೂರ್ವದ ಶ್ರೀ ಅಯ್ಯಪ್ಪ ಭಕ್ತ ವೃಂದ ಸಾಮಾಜಿಕ ಸಂಸ್ಥೆಯ ವತಿಯಿಂದ 29ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ ದಿನಾಂಕ 5. 01.2025ರ ರವಿವಾರ ನಾಲಾಸೋಪಾರ ಮಜಿಟೀಯ ನಾಕ, ದ್ವಾರಕಾ ಹೋಟೆಲ್ ನ ಎದುರುಗಡೆಯ ಮೈದಾನದಲ್ಲಿ ನಡೆಯಲಿದೆ.
ಕಾರ್ಯಕ್ರಮ
ಬೆಳಿಗ್ಗೆ 5 ರಿಂದ : ಗಣ ಹೋಮ ( ಶೇಖರ್ ಶಾಂತಿ ಅವರಿಂದ )
ಬೆಳಿಗ್ಗೆ 6 ಗಂಟೆಗೆ : ಶರಣು ಘೋಷ
ಬೆಳಿಗ್ಗೆ 8 ರಿಂದ 9 : ಸಹಸ್ರನಾಮಾವಳಿ
ಬೆಳಿಗ್ಗೆ 9:00 ರಿಂದ 12 : ಭಜನೆ (ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಹಾಗೂ ಶ್ರೀ ಗುರು ನಾರಾಯಣ ಭಜನಾ ಮಂಡಳಿ ನಾಲಸೋಪಾರ )
ಮಧ್ಯಾಹ್ನ 12 ರಿಂದ 12:30 : ಪಡಿ ಪೂಜೆ
ಮಧ್ಯಾಹ್ನ 12:30 ರಿಂದ 1 : ಮಹಾ ಆರತಿ
ಮಧ್ಯಾಹ್ನ 1 ರಿಂದ 4 : ಮಹಾಪ್ರಸಾದ – ಅನ್ನಸಂತರ್ಪಣೆ
ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಅಯ್ಯಪ್ಪ ಭಕ್ತ ವೃಂದ ಸಾಮಾಜಿಕ ಸಂಸ್ಥೆಯ ಗೌರವಾಧ್ಯಕ್ಷರಾದ ಜಗನ್ನಾಥ್ ಎನ್ ರೈ, ಅಧ್ಯಕ್ಷರು ಮತ್ತು ಗುರುಸ್ವಾಮಿ ಸದಾಶಿವ ಎ ಕರ್ಕೇರ,
ಉಪಾಧ್ಯಕ್ಷ ಸೀತಾರಾಮ ಶೆಟ್ಟಿ, ಗುರುಸ್ವಾಮಿ ಪದ್ಮನಾಭ ಪೂಜಾರಿ, ಗೌರವ ಕಾರ್ಯದರ್ಶಿ ಸುದರ್ಶನ್ ಆರ್ ಸಾಲಿಯನ್, ಗೌರವ ಕೋಶಾಧಿಕಾರಿ ಹರೀಶ್ ಪೂಜಾರಿ, ಜೊತೆ ಕಾರ್ಯದರ್ಶಿ ಪ್ರಸನ್ನ ಜೆ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದೇವಕಿ ಎಸ್ ಕರ್ಕೇರ, ಉಪಕಾರ್ಯಾಧ್ಯಕ್ಷರುಗಳಾದ ಪುಷ್ಪ ಎಸ್ ಕೋಟ್ಯಾನ್, ಪಾವನ ವೇಣುಗೋಪಾಲ್ ಶೆಟ್ಟಿ , ಕಾರ್ಯದರ್ಶಿ ಹರಿಣಾಕ್ಷಿ ಎಚ್ ಪೂಜಾರಿ ಜೊತೆ ಕಾರ್ಯದರ್ಶಿಗಳಾದ ಸರಿತಾ ಪೂಜಾರಿ, ಜ್ಯೋತಿ ಎಸ್ ಕೋಟ್ಯಾನ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು ಮತ್ತು ಯುವ ವಿಭಾಗ ಹಾಗೂ ಭಜನಾ ಮಂಡಳಿ ಸದಸ್ಯರು ವಿನಂತಿಸಿದ್ದಾರೆ .
ತಾರೀಕು 8-1- 2025 ನೇ ಬುಧವಾರ ಬೆಳಿಗ್ಗೆ ಇರುಮುಡಿ ಕಟ್ಟುವಿಕೆ ಕಾರ್ಯಕ್ರಮ ಜರಗಲಿದೆ.
ಭಕ್ತಾಭಿಮಾನಿಗಳು ನೀಡುವ ಯಾವುದೇ ರೀತಿಯ ಸಹಕಾರವನ್ನು ಭಕ್ತಿ ಪೂರ್ವಕವಾಗಿ ಸ್ವೀಕರಿಸಲಾಗುವುದು.
ಇರುಮುಡಿಗೆ ತುಪ್ಪದ ಕಾಯಿ ನೀಡಬಯಸುವ ಭಕ್ತಾದಿಗಳು ಮುಂಚಿತವಾಗಿ ಶಿಬಿರದ ಸ್ವಾಮಿಗಳಿಗೆ ತಿಳಿಸಿ ರೂಪಾಯಿ 201/ನ್ನು ತೆತ್ತು ರಶೀದಿ ಪಡೆಯಬೇಕಾಗಿ ವಿನಂತಿ.



Related posts

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು, ಮಹಾರಾಷ್ಟ್ರ ಘಟಕ ವತಿಯಿಂದ ಅಖಿಲ ಭಾರತ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನ

Mumbai News Desk

ಮದರ್ ಇಂಡಿಯಾದ 19th east ಬಾಂಬೆ ಸ್ಕೌಟ್ ಮಿತ್ರರ ಮತ್ತು ಮದರ್ ಇಂಡಿಯಾ ಹಳೆ ವಿದ್ಯಾರ್ಥಿ ಫೌಂಡೇಶನ್ ನ ಜಂಟಿ ಆಶ್ರಯದಲ್ಲಿ ನವೆಂಬರ್ 15 ಮತ್ತು 16 ರಂದು ಫಾರ್ಮ್ ರಿಜೆನ್ಸಿಯಲ್ಲಿ 6 ನೇ ವರ್ಷದ ಗುರುವಂದನಾ ಕಾರ್ಯಕ್ರಮ.

Mumbai News Desk

ಶ್ರೀ ಸಾಯಿನಾಥ ಮಿತ್ರ ಮಂಡಳಿ ಡೊಂಬಿವಲಿ ವತಿಯಿಂದ (ನಾಳೆ) ಫೆ.26 ರಂದು ಪಾನಕ ಸೇವೆ

Mumbai News Desk

ಜ. 24/25/26 : ಬಿಲ್ಲವರ ಎಸೋಸಿಯೇಷನ್ ಮುಂಬಯಿ ಇದರ ಸಾಂಸ್ಕೃತಿಕ ಉಪ ಸಮಿತಿಯ ಆಶ್ರಯದಲ್ಲಿ ‘ ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ ‘

Mumbai News Desk

ಮೂಲ್ಕಿ : ನ. 30ರಂದು ಹರಿಶ್ಚಂದ್ರ ಪಿ ಸಾಲ್ಯಾನ್ ಅವರ “ಮುಲ್ಕಿಯ ಕೀರ್ತಿಶೇಷ ಸಾಧಕರು ” ಕ್ರತಿ ಬಿಡುಗಡೆ ಸಮಾರಂಭ

Mumbai News Desk

ಮಲಾಡ್ ಪೂರ್ವ ಶ್ರೀ ಮೂಕಾಂಬಿಕಾ ಮಂದಿರ: ಸೆಪ್ಟೆಂಬರ್ 22 ರಿಂದ ನವೆಂಬರ್ 2 ರವರೆಗೆ ದಸರಾ ಮಹೋತ್ಸವ

Mumbai News Desk