30.9 C
Mumbai
June 8, 2026
Mumbai News Kannada
ಸುದ್ದಿ

ಐಕ್ಯ ಸ್ವರೂಪಿಣಿ ಕಾಪು ಮಾರಿಯಮ್ಮ ನವ ದುರ್ಗಾ ಲೇಖನಯಜ್ಞ ಪುಸ್ತಕ ವಸಯಿ ದಾಹಣು , ಪ್ರಾದೇಶಿಕ ಸಮಿತಿಯಯಿಂದ  ಭಕ್ತರಿಗೆ ವಿತರಣೆ





     ವಸಯಿ ಜ 4. ಕಾಪು ಶ್ರೀ ಹೊಸ ಮಾರಿಗುಡಿ* ಅಭಿವೃದ್ಧಿ ಸಮಿತಿ ಮಂಬಯಿ ವಸಯಿ ದಾಹಣು ವಲಯದ ವತಿಯಿಂದ.ನವದುರ್ಗ ಐಕ್ಯ ಸ್ವರೂಪಿಣಿ ಕಾಪು ಮಾರಿಯಮ್ಮನ. ನವದುರ್ಗ ಲೇಖನ ಯಜ್ಞ ಪುಸ್ತಕ ವಿತರಣೆ ಕಾರ್ಯಕ್ರಮವು ರೆಜನ್ಸಿ ಬ್ಯಾಂಕ್ವಿಟ್ ಹಾಲ್* *ನಾಲಾಸೋಪಾರ ಇಲ್ಲಿ ಮುಂಬಯಿ ಸಮಿತಿಯ ಉಪಾಧ್ಯಕ್ಷರು,ಶಶಿಧರ ಕೆ ಶೆಟ್ಟಿ ಇನ್ನಂಜೆ, ಕಾಪು ಮಾರಿಗುಡಿ ಯ ವಸಯಿ ದಾಹಣು ವಲಯದ ಸಂಚಾಲಕರುದ ರಮೇಶ್ ಶೆಟ್ಟಿ ಕಾಪು, ಪಾಂಡು ಎಲ್ ಶೆಟ್ಟಿ, ಹಾಗೂ ಪ್ರಾದೇಶಿಕ ಸಮಿತಿಯ ಕೋಶಾಧಿಕಾರಿ ಜಗನಾಥ್ ಡಿ ಶೆಟ್ಟಿ ಪಳ್ಳಿ, ಕಾಪು ಮಾರಿಗುಡಿ ಮುಂಬಯಿ ಸಮಿತಿ ಕಾರ್ಯದರ್ಶಿ ಸದಾಶಿವ ಕರ್ಕೇರ.ಇವರುಗಳ ಉಪಸ್ಥಿತಿಯಲ್ಲಿ ನಡೆಯಿತು*  . 

 ಭಕ್ತರಲ್ಲರಿಗೂ ನವದುರ್ಗ ಲೇಖನ ಯಜ್ಞ ದ ಅಮ್ಮನ ಭಕ್ತರಿಗೆ ಪುಸ್ತಕ ವಿತರಿಸಲಾಯಿತು , ಪ್ರತಿಯೊಂದು ಲೇಖನ ಯಜ್ಞ ಪುಸ್ತಕ ವಿತರಣೆ ಯೋಟ್ಟಿಗೆ ಭಕ್ತರು ಅಮ್ಮನಿಗೆ ಒಂದು ಶಿಲೆ ಕಲ್ಲು ಸ್ವೀಕರಿಸಿ ಪ್ರೋತ್ಸಾಹಿಸಿದರು,

ಮುಂಬಯಿ ಸಮಿತಿಯ ವಸಯಿ ದಾಹಣು ವಲಯದ ಸಂಚಾಲಕರು ರಮೇಶ್ ಶೆಟ್ಟಿ ಕಾಪು ಮಾತನಾಡಿ ಅಮ್ಮನ ಭಕ್ತರಿಗೆ ಶ್ರೀ ಕ್ಷೇತ್ರ ದಲ್ಲಿ ನಡೆಯುವ ಬ್ರಹ್ಮಕಲ ಸೋಸ್ತವ, ಚಂಡಿಕಾ ಯಾಗದಲ್ಲಿ ಭಾಗವಹಿಸಿ ಅಮ್ಮನ ಭಕ್ತಿಗೆ ಎಲ್ಲರೂ ಪಾತ್ರರಾಗಬೇಕೆಂದು  ತಿಳಿಸಿದರು,

.

*ಮುಂಬಯಿ ಸಮಿತಿಯ ಉಪಾಧ್ಯಕ್ಷರು ಶಶಿಧರ ಕೆ ಶೆಟ್ಟಿ ಇನ್ನಂಜೆ ಮಾತನಾಡುತ್ತಾ ಎಲ್ಲಾ ಪುಸ್ತಕಗಳನ್ನು ನವ ಚಂಡಿಕಾಯಾಗದಲ್ಲಿ ಪೂಜೆಗೆ ಇರಿಸಿ. ಲೇಖನ ಬರೆದವರ ಹೆಸರು, ರಾಶಿ, ನಕ್ಷತ್ರ ವನ್ನು ಸಂಕಲ್ಪಿಸಿ, ಹಾಗೂ ಭಕ್ತರು ಬರೆದ ಹಸ್ತಕ್ಷರಾದ ಪುಸ್ತಕ ಸಾನಿಧ್ಯದಲ್ಲಿ ಇರುದಲ್ಲದೆ ಪ್ರತಿ ವರ್ಷ ನವರಾತ್ರಿಯ ಒಂದು ದಿನ ಪೂಜೆ ನೆರವೇರುತ್ತದೆ ಎಂದು ವಿವರಿಸಿದರು,ಅಲ್ಲದೆ ಪುಸ್ತಕ ಬರೆದವರು ಒಂದು ಶಿಲೆ ಕಲ್ಲು ನೀಡಲು ಕಷ್ಟದಲ್ಲಿ ಇರುವವರು ತಮ್ಮ ತನು ಮನದ ಸಹಾಯ ನೀಡಿಪ್ರೊಸ್ತಹಿಸಿರಿ ಉಳಿದ ಮೊತ್ತ ವನ್ನು ವಲಯದ ವತಿಯಿಂದ ನಾವುಗಳು ತುಂಬಿಸುವೆವು ಎಂದು ಹೇಳಿ ಸಲಹೆ ಸೂಚನೆ ನೀಡಿದರು,

. ವಸಯಿ ದಾಹಣು ವಲಯದ ಪಾಂಡು ಎಲ್ ಶೆಟ್ಟಿಯವರು. ನವದುರ್ಗ ಲೇಖನ ವನ್ನು ಹೇಗೆ ಬರೆಯುವುದು ತಿಳಿಸುತ ಈ ಪುಸ್ತಕ ಮತ್ತು ಅಕ್ಕಿ ಹಾಕಿದ ಚೀಲವನ್ನು ಶೀಲಾ ಸೇವೇಯ ಮುಂಕಾಂತರ ಅಮ್ಮನ ಸಾನ್ನಿಧ್ಯ  (ಕಾಪು ಹೊಸ ಮಾರಿಗುಡಿ ದೇವಸ್ಥಾನ) ದಲ್ಲಿ ವೊಪ್ಪಿಸ ತಕ್ಕದ್ದು* ಹಾಗೂ *25.02.25 ರಿಂದ 05.03.25 ರವರೆಗೆ ನಡೆಯಲಿರುವ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವಕ್ಕೆ* ತಾವೆಲ್ಲಾರು ಭಕ್ತಾದಿಗಳು ಭಂಧು-ಮಿತ್ರರೊಂದಿಗೆ ಅಮ್ಮನ ಸಾನ್ನಿಧ್ಯಕ್ಕೆ ಬಂದು ಅಮ್ಮನ ಕ್ರಪಾಕಟಾಕ್ಷ ಕ್ಕೆ ಪಾತ್ರ ರಾಗಬೆಕೆಂದು,ತಿಳಿಸಿದರು.

ಕಾರ್ಯಕ್ರಮವನ್ನು ಪ್ರವೀಣ್ ಶೆಟ್ಟಿ ಕಣಂಜಾರು ನಿರೂಪಿಸಿದರು, ಶಂಕರ್ ಆಳ್ವ ಧನ್ಯವಾದಗಳ

 ವೇದಿಕೆಯಲ್ಲಿ ವಸಯಿ ದಾಹಣು ವಲಯದ ಸದಸ್ಯರು ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಕರ್ನರೂ ಶಂಕರ ಆಳ್ವ,ಯಶೋಧರ ಕೋಟ್ಯಾನ್, ಹಾಗೂ ಕಾಪು ಅಮ್ಮನ ಭಕ್ತಾದಿಗಳು ಉಪಸ್ಥಿತರಿದ್ದರು.



Related posts

ಮೂರು ದಶಕಗಳ ಆಯುರ್ವೇದ ಸೇವೆ: ಘಾಟ್‌ಕೋಪರ್‌ನಲ್ಲಿ ಸಾಲ್ಮರ ಆಯುರ್ವೇದದ 10ನೇ ಶಾಖೆ ಶುಭಾರಂಭ

Mumbai News Desk

ಅನಿತಾ ಪಿ. ತಾಕೊಡೆ ಅವರಿಗೆ ಹುಟ್ಟೂರ ಸನ್ಮಾನ

Mumbai News Desk

ಪುಷ್ಪ 2 ಯಶಸ್ಸಿನ ಬೆನ್ನಲ್ಲೇ ನಟ ಅಲ್ಲು ಅರ್ಜುನ್ ಬಂಧನ, ಅಭಿಮಾನಿಗಳು ಶಾಕ್

Mumbai News Desk

ಬಂಟ್ಸ್ ಫೋರಮ್ ಮೀರಾ-ಭಾಯಂದರ್ ವತಿಯಿಂದ ತಿರುಪತಿ ಯಾತ್ರೆ

Mumbai News Desk

ಕರಾವಳಿಯ ಬಹುಮುಖ ಪ್ರತಿಭೆಯ ಸಂಘಟಕ, ಹೋರಾಟಗಾರ, ಮೀನುಗಾರ ಮುಖಂಡ ರಾಮಚಂದ್ರ ಬೈಕಂಪಾಡಿ ನಿಧನ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ  ಪ್ರದೀಪ್ ಎಸ್. ಶೆಟ್ಟಿ  ದುಬೈ ಇವರು ಸೇರ್ಪಡೆ

Mumbai News Desk