September 6, 2026
Mumbai News Kannada
ಪ್ರಕಟಣೆ

ಬ್ರಹ್ಮ ಶೀ ನಾರಾಯಣ ಗುರುಗಳ ದಂತ [ದಿವ್ಯ ದಂತ] ಪ್ರದರ್ಶನ






“ಒಂದೇ ಜಾತಿ, ಒಂದೇ ಮತ ಮತ್ತು ಒಂದೇ ದೇವರು” ಎಂಬ ಸತ್ಯವಾಕ್ಯವನ್ನು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿಯ ಬಳಿಕ ಅವರ ದಂತವನ್ನು [ದಿವ್ಯ ದಂತಮ್‌] ಜೋಪಾನವಾಗಿ ಇರಿಸಿಕೊಳ್ಳಲಾಗಿದ್ದು ಇದನ್ನು ಪ್ರತೀ ವರ್ಷ ಭಕ್ತರ ದರ್ಶನಕ್ಕಾಗಿ ಇರಿಸಲಾಗುತ್ತಿದೆ. ಈ ಬಾರಿ ರವಿವಾರ ಫೆಬ್ರವರಿ 2 ರಂದು ಬೆಳಗ್ಗೆ ಗಂಟೆ 8.30 ರಿಂದ ಸಾಯಂಕಾಲ ಗಂಟೆ 4-00 ರ ವರೆಗೆ ಇದನ್ನು ಭಕ್ತರ ವೀಕ್ಷಣೆಗಾಗಿ ನವಿ ಮುಂಬಯಿಯ ನೆರುಳ್‌ನ ಸೆಕ್ಟರ್‌ 20ರಲ್ಲಿರುವ ಗುರುದೇವಗಿರಿ ಮಂದಿರದ ಆವರಣದಲ್ಲಿ ಇರಿಸಲಾಗುತ್ತದೆ. ಶಿವಗಿರಿ ಆಶ್ರಮದ ಸ್ವಾಮಿಯವರ ನೇತೃತ್ವದಲ್ಲಿ ಇದರ ಆಯೋಜನೆ ಮಾಡಲಾಗಿದೆ. ಈ ದಂತವು ಅಮೇರಿಕಾದಲ್ಲಿರುವ ದಂತವೈದ್ಯರಾದ ಜಿ.ವೊ.ಪಾಲ್‌ ಇವರ ಬಳಿ ಇತ್ತು. ಅದನ್ನೀಗ ನೆರುಳ್‌ನ ಗುರುದೇವಗಿರಿ ಮಂದಿರದಲ್ಲಿ ಒಂದು ಪ್ರತ್ಯೇಕ ಕೊಣೆಯಲ್ಲಿ ಜೋಪಾನವಾಗಿ ಇರಿಸಲಾಗಿದೆ ಎಂದು ಮಂದಿರದ ಆಡಳಿತ ಮಂಡಳಿಯ ಸದಸ್ಯರೊಬ್ಬರು ನನಗೆ ತಿಳಿಸಿದರು. ಪ್ರದರ್ಶನದ ಜೊತೆಗೆ ಗರುದೇವಗಿರಿ ಮಂದಿರದಲ್ಲಿ ವಿವಿಧ ದಾರ್ಮಿಕ ಕಾರ್ಯಕ್ರಮಗಳೂ ಜರಗಲಿದ್ದು ಗುರುಭಕ್ತರು ಇದರ ಪ್ರಯೋಜನ ಪಡೆದು ಧನ್ಯರಾಗಬಹುದು.
-ಸೋಮನಾಥ ಎಸ್‌.ಕರ್ಕೇರ, 9819321186



Related posts

ಡಿ. 21ರಂದು ಅಂಧೇರಿಯಲ್ಲಿ ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ಅವರ ನೇತೃತ್ವದ 37ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk

ಜ. 1 ರಂದು ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ನಲ್ಲಿ ಸತ್ಯನಾರಾಯಣ ಮಹಾಪೂಜೆ ಮತ್ತು ಅನ್ನ ಸಂತರ್ಪಣೆ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ :ಫೆಬ್ರವರಿ 18 ರಂದು ಡೊಂಬಿವಲಿ ಸ್ಥಳೀಯ ಸಮಿತಿವತಿಯಿಂದ ಮಹಿಳಾ ಸದಸ್ಯರಿಗಾಗಿ ಹೂವಿನ ರಂಗೋಲಿ ಸ್ಪರ್ಧೆ :

Mumbai News Desk

ತುಳು ಸಂಘ ಬೊರಿವಲಿ  ಸೆ. 19 ರಂದು  15ನೇ  ವಾರ್ಷಿಕ ಮಹಾಸಭೆ

Mumbai News Desk

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ : ಅ. 9ರಂದು ನಾಗರಪಂಚಮಿ ಉತ್ಸವ.

Mumbai News Desk

ಆ.16: ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯಲ್ಲಿ ವರಮಹಾಲಕ್ಷ್ಮೀ ಪೂಜೆ

Mumbai News Desk