30 C
Mumbai
April 24, 2026
Mumbai News Kannada
ಮುಂಬಯಿ

ಆರೋಹಿ(ಖುಷಿ )ಶಿವ ಪ್ರಸಾದ ಪೂಜಾರಿಗೆ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಬಂಗಾರದ ಪದಕ





ಇತ್ತೀಚಿಗೆ ಮುಂಬಯಿಯ ಮುಲುಂದ್ ನ ಪ್ರಿಯದರ್ಶಿನಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ 30ನೇ ಯುರೋ ಎಷ್ಯಾ ಅಂತಾರಾಷ್ಟಿಯ ಡಬ್ಲ್ಯೂ ಎಫ್ ಎಸ್ ಕೆ ಓ ( WFSKO ) ಓಪನ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ , ಥಾಣೆ ಪಶ್ಚಿಮ ನವೋದಯ ಇಂಗ್ಲೀಷ್ ಶಾಲೆಯನ್ನು ಪ್ರತಿನಿದಿಸಿದ ಆರೋಹಿ ಎಸ್ ಪೂಜಾರಿ 1 ಚಿನ್ನ, 1 ಬೆಳ್ಳಿ ಪದಕ ಪಡೆದು ಸಾಧನೆಗೈದಿದ್ದಾರೆ. ಚಾಂಪಿಯನ್ಶಿಪ್ ನಲ್ಲಿ ಯು. ಕೆ (U. K), ಮರಿಶಿಯಸ್, ಶ್ರೀಲಂಕಾ, ನೇಪಾಳ ಮತ್ತು ಸೌದಿ ಅರೇಬಿಯಾ – ಒಟ್ಟು 7 ದೇಶದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಥಾಣೆ ಪಶ್ಚಿಮ ಸಾವರ್ಕರ್ ನಗರದ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಸಂಸ್ಥಾಪಕ, ಶಿವಪ್ರಸಾದ್ ಪೂಜಾರಿ ಪುತ್ತೂರು, ಹಾಗೂ ಆಶಾ ಪೂಜಾರಿ ದಂಪತಿ ಅವರ ಸುಪುತ್ರಿಯಾಗಿರುವ ಆರೋಹಿ (ಖುಷಿ ) , ನವೋದಯ ಇಂಗ್ಲಿಷ್ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ.ಕರಾಟೆ ಹಾಗೂ ಇತರ ಕ್ರೀಡೆಗಳ್ಳಲ್ಲಿ ಆಸಕ್ತಳಾಗಿರುವ ಆರೋಹಿ ನ್ರತ್ಯ, ಭಜನೆ, ಶಾಸ್ತ್ರಿಯ ಸಂಗೀತದಲ್ಲೂ ಪರಿಣತಿ ಹೊಂದಿರುವಳು. ಕಳೆದ ವರ್ಷ ನವಂಬರ್ ನಲ್ಲಿ ಗಂಧರ್ವ ಮಂಡಲ ಆಯೋಜಿಸಿದ ಸಂಗೀತ ಸ್ಪರ್ಧೆಯಲ್ಲಿ ಆರೋಹಿ ಪ್ರಥಮ ಸ್ಥಾನದಲ್ಲಿ ಉತ್ತಿರ್ಣಲಾಗಿರುವಳು.
ಅರೋಹಿಯ ಸಿದ್ಧಿ ಸಾಧನೆಗಳು ಪ್ರತಿ ದಿನವೂ ಅರೋಹಣವಾಗುತ್ತಿರಲಿ. ಹೆತ್ತವರಿಗೆ ಹಾಗೆಯೇ ಅವಳ ಪರಿವಾರದವರಿಗೆ ಸದಾ ಖುಶಿ ಯನ್ನು ತರಲಿ ಎಂಬ ಆಶಯ ನಮ್ಮದು ಕೂಡ. ಅವಳ ಮುಂದಿನ ಬದುಕಿಗೆ ಶುಭ ಹಾರೈಕೆಗಳು.



Related posts

ಹೊಸ ಆಂಗಣ ಪತ್ರಿಕೆಯ ವತಿಯಿಂದ ತಿಂಗಳ ಬೆಳಕು ಕಾರ್ಯಕ್ರಮ, ಸನ್ಮಾನ.

Mumbai News Desk

ವಸಾಯಿ ಕರ್ನಾಟಕ ಸಂಘ  38ನೇ ವಾರ್ಷಿಕ ಮಹಾಸಭೆ,

Mumbai News Desk

ಭಾರತ್ ಬ್ಯಾಂಕ್ ಬೊರಿವಲಿ ಪಶ್ಚಿಮ ಶಾಖೆಯಲ್ಲಿ 46ನೇ ಸಂಸ್ಥಾಪನಾ ದಿನಾಚರಣೆ.

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಶಾಖೆಯ ಕಾರ್ಯಕಾರಿ ಸಮಿತಿಯ ಸ್ನೇಹ ಸಮ್ಮಿಲನ

Mumbai News Desk

ಪೇಜಾವರ ಮಠದಲ್ಲಿ ಮನಸೂರೆಗೊಂಡ ಪುತ್ತೂರು ನರಸಿಂಹ ನಾಯಕ್ ಭಕ್ತಿ ಸಂಗೀತ ಕಚೇರಿ

Mumbai News Desk

ಡೊಂಬಿವಲಿ  ಶ್ರೀ ಜಗದಂಬಾ ಮಂದಿರ 10ನೇ ವಾರ್ಷಿಕೋತ್ಸವ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ,

Mumbai News Desk