July 23, 2026
Mumbai News Kannada
ಸುದ್ದಿ

ಮುಲ್ಕಿ ಬಪ್ಪನಾಡು ಕ್ಷೇತ್ರದ ಅನುವಂಶೀಯ ಮೊಕ್ತೇಸರ ಎಸ್. ಎಸ್. ಮನೋಹರ ಶೆಟ್ಟಿ ನಿಧನ.








ಮುಲ್ಕಿ. ಮಾ. 18:ಮುಲ್ಕಿ ಶ್ರೀಕ್ಷೇತ್ರ ಬಪ್ಪನಾಡಿನ ಅನುವಂಶೀಯ ಮೊಕ್ತೇಸರರಾದ ಕಕ್ವಗುತ್ತು ಎಸ್. ಎಸ್. ಮನೋಹರ ಶೆಟ್ಟಿ(87)ರವರು ಅನಾರೋಗ್ಯದಿಂದ ಮಾ. 19ರಂದು ನಿಧನರಾಗಿದ್ದಾರೆ.
ಶೆಟ್ಟಿಯವರು ವಿಜಯಾ ಬ್ಯಾಂಕಿನಲ್ಲಿ ಪ್ರಭಂದಕರಾಗಿದ್ದು ಸಮಾಜ ಸೇವೆಯೊಂದಿಗೆ ನಿವೃತ್ತ ಜೀವನ ನಡೆಸುತ್ತಿದ್ದರು.ಮುಲ್ಕಿ ಸುಂದರ ರಾಮ ಶೆಟ್ಟಿ ಟ್ರಸ್ಟಿನ ಗೌರವ ಸಲಹೆಗಾರರಾಗಿ,ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ 1996ರಿಂದ ಸೇವೆ ಸಲ್ಲಿಸುತ್ತಿದ್ದು ದೇವಸ್ಥಾನದ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದರು. ಕುಬೆವೂರು ಶ್ರೀ ಜಾರಂದಾಯ ದೈವಸ್ಥಾನದ ಜೀರ್ಣೋದ್ದಾರ ಸಮಿತಿಯಲ್ಲೂ ಗೌರವಾದ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮುಲ್ಕಿ ಕಕ್ವಗುತ್ತಿನ ಅನುವಂಶೀಯ ಮೊಕ್ತೇಸರರಾದ ದಿ.ಕಾಳಪ್ಪ ಶೆಟ್ಟಿಯವರ ಕುಟುಂಬಿಕರಾದ ಇವರು ಶ್ರೀ ಕ್ಷೇತ್ರ ಬಪ್ಪನಾಡಿನಲ್ಲಿ 29 ವರ್ಷ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿ ಜನಾನುರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.



Related posts

ತಿರುಪತಿ ತಿರುಮಲದಲ್ಲಿ ಕಾಲ್ತುಳಿತ, ಮೃತರ ಸಂಖ್ಯೆ 6ಕ್ಕೆ ಏರಿಕೆ

Mumbai News Desk

ಕಾಪು ಶ್ರೀ ಹೊಸಮಾರಿಗುಡಿ ವ್ಯವಸ್ಥಾಪನಾ ಸಮಿತಿಯಲ್ಲಿ ಮೊಗವೀರ ಸಮುದಾಯಕ್ಕೆ ಅವಕಾಶ ನೀಡಬೇಕು : ಕಾಪು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೈ. ಸುಕುಮಾರ್.

Mumbai News Desk

ಮುಂಬೈ ಕುಲಾಲ ಸಂಘದ ಕುಲಾಲ ಭವನಕ್ಕೆ ಎಸ್. ಆರ್. ಬಂಜನ್ ಅವರಿಂದ ರೂ. 20 ಲಕ್ಷ ದೇಣಿಗೆ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (22/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ “ಲೀಡಿಂಗ್ ಬ್ಯಾಂಕ್ ಅವಾರ್ಡ್ “

Mumbai News Desk

ಸುರತ್ಕಲ್: ಸಿಲಿಂಡರ್ ಸ್ಫೋಟ ಪ್ರಕರಣ ತೀವ್ರವಾಗಿ ಗಾಯಗೊಂಡ ಮಹಿಳೆಯರಿಬ್ಬರ ಸಾವು

Mumbai News Desk