July 23, 2026
Mumbai News Kannada
ಮುಂಬಯಿ

ಶ್ರೀ ಗುರು ನಾರಾಯಣ ಭಜನಾ ಮಂಡಳಿ ಮೀರಾ – ಭಾಯಂದರ್ ವತಿಯಿಂದ ಗುರು ಪೂರ್ಣಿಮೆ ಆಚರಣೆ







ನಾರಾಯಣ ಗುರುಗಳ ತತ್ವ ಆದರ್ಶ ಪರಿಪಾಲನೆ ಮುಖ್ಯ ಉದ್ದೇಶ: ಉದಯ ಸುವರ್ಣ

ಶ್ರೀ ಗುರು ನಾರಾಯಣ ಭಜನಾ ಮಂಡಳಿ ಮೀರಾ-ಭಾಯಂದರ್ ವತಿಯಿಂದ ಆಯೋಜಿಸಲ್ಪಟ್ಟ ಪ್ರಥಮ ಗುರು ಪೂರ್ಣಿಮಾ ಪೂಜಾ ಕಾರ್ಯಕ್ರಮವು ಮಂಡಳಿಯ ಮಹಿಳಾ ಸದಸ್ಯರ ವಿಘ್ನಹರ್ತನ ಸ್ಥುತಿಯೊಂದಿಗೆ ಪ್ರಾರಂಭಗೊಂಡು, ಗುರು ಹಿರಿಯರು ಹಾಗೂ ಅತಿಥಿ ಗಣ್ಯರಿಂದ ದೀಪ ಪ್ರಜ್ವಲನೆಯ ಬಳಿಕ ಭಜನಾ ಕೀರ್ತನೆಗೆ ಚಾಲನೆ ನೀಡಲಾಯಿತು.

ವಿಶೇಷವಾಗಿ ಮಕ್ಕಳ ಭಜನಾ ಸಂಕೀರ್ತನೆಯು ಭಕ್ತಾದಿಗಳ ಮನತುಂಬಿತು.

ಅತಿಥಿ ಗಣ್ಯರಲ್ಲಿ ಪ್ರಮುಖರಾದ ಭಾರತ್ ಬ್ಯಾಂಕ್    ಕಾರ್ಯಧ್ಯಕ್ಷ ಸೂರ್ಯಕಾಂತ ಜೆ ಸುವರ್ಣ, ನಿರ್ದೇಶಕ ನರೇಶ್ ಪೂಜಾರಿ ಮತ್ತಿತರ ನಿರ್ದೇಶಕರನ್ನು ಮಂಡಳಿಯ ಅಧ್ಯಕ್ಷ, ಗೌರವಾಧ್ಯಕ್ಷರುಗಳು ಹಾಗೂ ಸಮಿತಿಯ ಎಲ್ಲಾ ಸದಸ್ಯರುಗಳು ಗೌರವ ಪೂರ್ವಕವಾಗಿ ಪ್ರಸಾದ ನೀಡಿ ಗೌರವಿಸಿದರು

ಪೂಜೆಗೆ ಆಗಮಿಸಿದ ಗಣ್ಯರನ್ನು ಹಾಗೂ ದಾನಿಗಳನ್ನು ಗೌರವಿಸಿದ ಭಜನಾ ಮಂಡಳಿಯ ಅಧ್ಯಕ್ಷ ಉದಯ ಸುವರ್ಣ ಮಾತನಾಡಿ ನಾರಾಯಣ ಗುರುಗಳ ತತ್ವದಂತೆ ನಮ್ಮ ಮಂಡಳಿಯ ಸೇವಾಕಾರ್ಯಗಳು ನಡೆಯುತ್ತದೆ, ಪ್ರತಿ ಮನೆ – ಮನೆಯಲ್ಲಿ ಭಜನೆ ಮಾಡುವ ಮೂಲಕ ಧರ್ಮ ಜಾಗೃತಿಯ ಸೇವೆಯನ್ನು ಮಾಡುವ ಮೂಲಕ ಗುರುಗಳ ತತ್ವವನ್ನು ಪರಿಪಾಲನೆ ಮಾಡುವ ಮುಖ್ಯ ಉದ್ದೇಶವಾಗಿದೆ ಎಂದು ನುಡಿದರು.

ಪರಿಸರದ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಭಕ್ತಾದಿಗಳು ತನು- ಮನ -ಧನದಿಂದ  ಪೂಜಾ ಕಾರ್ಯಕ್ರಮವು ವಿಜ್ರಂಭಣೆಯಿಂದ ನೆರವೇರುವಲ್ಲಿ ಸಹಕರಿಸಿದರು.

ಕಿಕ್ಕಿರಿದು ನೆರೆದಿದ್ದ ಭಕ್ತಾದಿಗಳು ಪೂಜಾ ವಿಧಿ- ವಿಧಾನಗಳ ಬಳಿಕ ಶ್ರೀ ಗುರು ಪ್ರಸಾದ ಹಾಗೂ ಅನ್ನ ಪ್ರಸಾದವನ್ನು ನೀಡಲಾಯಿತು.

B. Dinesh Kulal

Mob.: 9821868674



Related posts

ಮಕ್ಕಳು ತಮ್ಮ ಮಾತ- ಪಿತರ ಬಗ್ಗೆ ಅಭಿಮಾನವಿಟ್ಟಲ್ಲಿ ಸಮಾಜ ಮತ್ತಷ್ಟು ಸುಧಾರಣೆ ಯಾಗಬಹುದು – ಧರ್ಮದರ್ಶಿ ಅಶೋಕ್ ಶೆಟ್ಟಿ

Mumbai News Desk

ಅನಿತಾ ಪಿ.ತಾಕೊಡೆಯವರ ಸುವರ್ಣಯುಗ ಕೃತಿಗೆ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ವತಿಯಿಂದ “ವಿಕಾಸ ಪುಸ್ತಕ ಬಹುಮಾನ”

Mumbai News Desk

ಮಹಾರಾಷ್ಟ್ರ : ಎಸ್ ಎಸ್ ಸಿ ಪರೀಕ್ಷೆಯಲ್ಲಿ ಅಬಿನಿ ಬಾಬು ಪೂಜಾರಿ ಗೆ ಶೇ.94.40 ಅಂಕ.

Mumbai News Desk

ತುಳು ಸಂಘ, ಬೋರಿವಲಿ16ನೇ ವಾರ್ಷಿಕೋತ್ಸವ,  ಸಾಂಸ್ಕೃತಿಕ ವೈಭವ, ತುಳು ನಾಟಕ ಪ್ರದರ್ಶನ

Mumbai News Desk

ಅ  29   ಗೋರೆಗಾಂವ್ ಪಶ್ಚಿಮದಲ್ಲಿ ಕಡಬ ಸಂಸ್ಕರಣಾ ಸಮಿತಿಯ ವಾರ್ಷಿಕೋತ್ಸವ –

Mumbai News Desk

ಸಾಂತಾಕ್ರೂಜ್ ಪೇಜಾವರ ಮಠದಲ್ಲಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ 4 ಯ ಆರಾಧನ ಮಹೋತ್ಸವ.

Mumbai News Desk