30.9 C
Mumbai
June 8, 2026
Mumbai News Kannada
ಸುದ್ದಿ

ಬಿಲ್ಲವರ ಅಸೋಸಿಯೇಷನ್ ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ದಿವಂಗತ ಐತಪ್ಪ ಸುವರ್ಣ ರಿಗೆ ನುಡಿ ನಮನ





ಮುಂಬೈ ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ದಿವಂಗತ ಐತಪ್ಪ ಸುವರ್ಣ ರವರಿಗೆ ನುಡಿ ನಮನ ಶ್ರದ್ಧಾಂಜಲಿ ಸಭೆಯು ದಿನಾಂಕ 27 07.2025 ರಂದು ಆದಿತ್ಯವಾರ ಸಂಘದ ವಟಾರದಲ್ಲಿ ನಡೆಯಿತು.

ಪ್ರಾರಂಭದಲ್ಲಿ ಗುರು ಪೂಜೆ ಜರಗಿಸಿ ನಂತರ ಗೌರವ ಕಾರ್ಯದರ್ಶಿ ಜಗದೀಶ್ ಜೇ ಕೋಟ್ಯಾನ್ ರವರು ದಿವಂಗತ ಐತಪ್ಪ ಸುವರ್ಣರ ಕಳೆದ 37 ವರ್ಷಗಳಿಂದ ಸಂಘಕ್ಕೆ ನೀಡಿದ ಸೇವೆ ಅವರ ಜೀವನದ ಬಗ್ಗೆ ಸಭೆಗೆ ತಿಳಿಸಿದರು.

ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಉಪಾಧ್ಯಕ್ಷರಾದ ಸುರೇಶ್ ಕುಮಾರ್ , ಕೋಶಾಧಿಕಾರಿ ರವಿ ಸನಿಲ್ ,ಡೊಂಬಿವಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀಧರ್ ಬಿ ಅಮೀನ್, ಉಪಾಧ್ಯಕ್ಷರಾದ ಚಂದ್ರಹಾಸ್ ಪಾಲನ್, ಸಚಿನ್ ಜಿ ಪೂಜಾರಿ, ಕೋಶಾಧಿಕಾರಿ ಆನಂದ್ ಪೂಜಾರಿ, ಮಾಜಿ ಕಾರ್ಯಾಧ್ಯಕ್ಷರಾದ ದೇವರಾಜ್ ಪೂಜಾರಿ, ವಸಂತ್ ಸುವರ್ಣ, ಈಶ್ವರ ಕೋಟ್ಯಾನ್, ದಿನೇಶ್ ಪೂಜಾರಿ, ಮಾತನಾಡಿ ಶ್ರದ್ಧಾಂಜಲಿ ಅರ್ಪಿಸಿದರು. ಕೊನೆಗೆ ಆಗಮಿಸಿದ ಎಲ್ಲಾ ಸಮಾಜ ಬಾಂಧವರು ಅವರ ಕುಟುಂಬಸ್ಥರು ಎರಡು ನಿಮಿಷದ ಮೌನ ಪ್ರಾರ್ಥನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕೊನೆಗೆ ಕಾರ್ಯದರ್ಶಿ ಧನ್ಯವಾದ ಅರ್ಪಿಸಿದರು.



Related posts

ಭಾಂಡೂಪ್ : ಚಿಕ್ಕು ಅಣ್ಣಪ್ಪ ಪುತ್ರನ್ ನಿಧನ

Mumbai News Desk

ಯೋಗ  ಶಿಸ್ತುಬದ್ಧ ಜೀವನ ನಡೆಸಲು ಸಹಕಾರಿಯಾಗಿದೆ: ಗುತ್ತಿನಾರ್ ರವೀಂದ್ರ ಶೆಟ್ಟಿ

Mumbai News Desk

ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಗೆ ಎಸ್. ಎಸ್. ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ

Mumbai News Desk

ಉಡುಪಿಯ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ

Mumbai News Desk

ಮುಂಬಯಿ : ಕರ್ನಾಟಕ ಬ್ಯಾಂಕ್ ನ ಹಿರಿಯ ಸಿಬ್ಬಂದಿ ನಾರಾಯಣ ಮೊಗವೀರ ಅವರ ಬೀಳ್ಕೊಡುವ ಸಮಾರಂಭ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟ ವತಿಯಿಂದ ಪ್ರತಿಷ್ಠ ತ  ಹೋಟೆಲ್ ಉದ್ಯಮಿ ಶಿವಚಂದ್ರ ಶೆಟ್ಟಿ ದಂಪತಿಗಳಿಗೆ ಸನ್ಮಾನ

Mumbai News Desk