30 C
Mumbai
April 24, 2026
Mumbai News Kannada
ಸುದ್ದಿ

ಕಲ್ಯಾಣ್: ಧಾರ್ಮಿಕ, ಸಾಮಾಜಿಕ ಸಂಘಟಕ, ಭಜನಾ ಗಾಯಕ ದೇವಾನಂದ್ ಜೆ ಸುವರ್ಣ ನಿಧನ





ನಂದಿಕೂರು,ಕೊಳಚೂರು ಶ್ರೀಮತಿ ಯೋಗಿನಿ ಮತ್ತು ಅಡ್ವೇ ಜಯರಾಮ ಕೋಟ್ಯಾನರ ಸುಪುತ್ರ, ಗೊರೇಗಾoವ್ ಮತ್ತು ಕಲ್ಯಾಣ್ ನಿವಾಸಿ ದೇವಾನಂದ್ ಜೆ ಸುವರ್ಣ ಅಲ್ಪ ಕಾಲದ ಅಸೌಖ್ಯದಿಂದಾಗಿ ಇಂದು ಸಂಜೆ(ಡಿ. 14) ದೈವಾದೀನರಾದರು.

ಅವರು ಅಡ್ವೇ ಗರಡಿ ಕೋಟಿ ಚೆನ್ನಯರ, ಶ್ರೀ ನಾರಾಯಣ ಗುರು ಸ್ವಾಮಿಯ, ಶ್ರೀ ನಿತ್ಯಾನಂದ ಸ್ವಾಮಿಯ, ಶ್ರೀ ರಾಘವೇಂದ್ರ ಹಾಗೂ ಶ್ರೀ ಸಾಯಿಬಾಬಾ ಹಾಗೂ ತುಳುನಾಡ ದೈವ ದೇವರುಗಳ ಪರಮ ಭಕ್ತರಾಗಿದ್ದರು. ಶ್ರೀ ನಿತ್ಯಾನಂದ ಸ್ವಾಮಿಯ ಹೆಸರಲ್ಲೇ ಭಜನಾ ಮಂಡಳಿ ಕಟ್ಟಿಕೊಂಡು ಮಹಾರಾಷ್ಟ್ರದಲ್ಲೇ ಪ್ರಸಿದ್ದಿಯ ಭಜನಾ ಗಾಯಕರಾಗಿದ್ದರು. ಬಿಲ್ಲವರ ಎಸೋಸಿಯೇಷನ್ ಮುಂಬಯಿ ಕಲ್ಯಾಣ್ ಸ್ಥಳೀಯ ಕಚೇರಿಯ ಮಾಜಿ ಉಪ ಕಾರ್ಯಧ್ಯಕ್ಷರಾಗಿ, ಬದ್ಲಾಪುರ ಶ್ರೀ ನಿತ್ಯಾನಂದ ಭಜನಾ ಸಮಿತಿಯಲ್ಲಿ ಸೇವೆ ಗೈದು, ಸಮಾಜದ ಸಂಘಟನೆಯಲ್ಲಿ ಹಾಗೂ ತುಳು ಕನ್ನಡ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದುಡಿದವರು. ಮೃತರು ತಾಯಿ, ತಂದೆ,ಪತ್ನಿ, ಇಬ್ಬರು ಪುತ್ರಿ, ಇಬ್ಬರು ತಮ್ಮಂದಿರು, ಇಬ್ಬರು ತಂಗಿ,-ಭಾವoದಿರನ್ನು, ದೊಡ್ಡ ಕುಟುಂಭ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರ ಕ್ರೀಯೆ ಯಾತ್ರೆ ನಾಳೆ, ದಿನಾಂಕ 15.12.2025 ರಂದು ಸಂಜೆ 4 ಗಂಟೆಗೆ ಅವರ ಕಲ್ಯಾಣ್ ಗೃಹದಿಂದ ಹೊರಟು ಕಲ್ಯಾಣ್ ರುದ್ರಭೂಮಿಯಲ್ಲಿ ನೆರವೇರಲಿದೆ.



Related posts

ನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ, 18 ಜನರ ಸಾವು

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಮುನಿರಾಜ್ ಜೈನ್ ಮತ್ತು ದಿ. ನ್ಯಾ. ಸುಭಾಷ್ ಶೆಟ್ಟಿ ಯವರಿಗೆ ನುಡಿ ನಮನ.

Mumbai News Desk

ಯಕ್ಷಗಾನ ವಿಶ್ವಗಾನವಾಗಿ ಮೆರಯಲಿ – ಶ್ರೀ ಶ್ರೀ ಶ್ರೀ ಸಚ್ವಿದಾಂನಂದ ಭಾರತಿ ಸ್ವಾಮೀಜಿ

Mumbai News Desk

ಧಾರ್ಮಿಕ ಕ್ಷೇತ್ರಗಳ ಬಗ್ಗೆ ಸ್ಥಾಪಿತ ಹಿತಾ ಶಕ್ತಿಗಳ ಅಪಪ್ರಚಾರ ಮೂಲಕ ಭಕ್ತಾಭಿಮಾನಿಗಳ ದಿಕ್ಕು ತಪ್ಪಿಸುವುದು ಸನಾತನ ಧರ್ಮಕ್ಕೆ ಮಾರಕ – ತೋನ್ಸೆ ಜಯಕೃಷ್ಣ ಎ. ಶೆಟ್ಟಿ.

Mumbai News Desk

ವೆಂಕಪ್ಪ ನಾರಾಯಣ ಶೆಟ್ಟಿ ನಿಧನ.

Mumbai News Desk

ಭಾರತ ಮತ್ತು ಅಮೆರಿಕ ನಡುವಿನ ಐತಿಹಾಸಿಕ ವ್ಯಾಪಾರ ಒಪ್ಪಂದ 2026: ಸುಂಕ ಕಡಿತ ಮತ್ತು ಆರ್ಥಿಕ ಸಹಭಾಗಿತ್ವದ ಹೊಸ ಯುಗ

Mumbai News Desk