September 6, 2026
Mumbai News Kannada
ಸುದ್ದಿ

ಕಲ್ಯಾಣ್: ಧಾರ್ಮಿಕ, ಸಾಮಾಜಿಕ ಸಂಘಟಕ, ಭಜನಾ ಗಾಯಕ ದೇವಾನಂದ್ ಜೆ ಸುವರ್ಣ ನಿಧನ





ನಂದಿಕೂರು,ಕೊಳಚೂರು ಶ್ರೀಮತಿ ಯೋಗಿನಿ ಮತ್ತು ಅಡ್ವೇ ಜಯರಾಮ ಕೋಟ್ಯಾನರ ಸುಪುತ್ರ, ಗೊರೇಗಾoವ್ ಮತ್ತು ಕಲ್ಯಾಣ್ ನಿವಾಸಿ ದೇವಾನಂದ್ ಜೆ ಸುವರ್ಣ ಅಲ್ಪ ಕಾಲದ ಅಸೌಖ್ಯದಿಂದಾಗಿ ಇಂದು ಸಂಜೆ(ಡಿ. 14) ದೈವಾದೀನರಾದರು.

ಅವರು ಅಡ್ವೇ ಗರಡಿ ಕೋಟಿ ಚೆನ್ನಯರ, ಶ್ರೀ ನಾರಾಯಣ ಗುರು ಸ್ವಾಮಿಯ, ಶ್ರೀ ನಿತ್ಯಾನಂದ ಸ್ವಾಮಿಯ, ಶ್ರೀ ರಾಘವೇಂದ್ರ ಹಾಗೂ ಶ್ರೀ ಸಾಯಿಬಾಬಾ ಹಾಗೂ ತುಳುನಾಡ ದೈವ ದೇವರುಗಳ ಪರಮ ಭಕ್ತರಾಗಿದ್ದರು. ಶ್ರೀ ನಿತ್ಯಾನಂದ ಸ್ವಾಮಿಯ ಹೆಸರಲ್ಲೇ ಭಜನಾ ಮಂಡಳಿ ಕಟ್ಟಿಕೊಂಡು ಮಹಾರಾಷ್ಟ್ರದಲ್ಲೇ ಪ್ರಸಿದ್ದಿಯ ಭಜನಾ ಗಾಯಕರಾಗಿದ್ದರು. ಬಿಲ್ಲವರ ಎಸೋಸಿಯೇಷನ್ ಮುಂಬಯಿ ಕಲ್ಯಾಣ್ ಸ್ಥಳೀಯ ಕಚೇರಿಯ ಮಾಜಿ ಉಪ ಕಾರ್ಯಧ್ಯಕ್ಷರಾಗಿ, ಬದ್ಲಾಪುರ ಶ್ರೀ ನಿತ್ಯಾನಂದ ಭಜನಾ ಸಮಿತಿಯಲ್ಲಿ ಸೇವೆ ಗೈದು, ಸಮಾಜದ ಸಂಘಟನೆಯಲ್ಲಿ ಹಾಗೂ ತುಳು ಕನ್ನಡ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದುಡಿದವರು. ಮೃತರು ತಾಯಿ, ತಂದೆ,ಪತ್ನಿ, ಇಬ್ಬರು ಪುತ್ರಿ, ಇಬ್ಬರು ತಮ್ಮಂದಿರು, ಇಬ್ಬರು ತಂಗಿ,-ಭಾವoದಿರನ್ನು, ದೊಡ್ಡ ಕುಟುಂಭ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರ ಕ್ರೀಯೆ ಯಾತ್ರೆ ನಾಳೆ, ದಿನಾಂಕ 15.12.2025 ರಂದು ಸಂಜೆ 4 ಗಂಟೆಗೆ ಅವರ ಕಲ್ಯಾಣ್ ಗೃಹದಿಂದ ಹೊರಟು ಕಲ್ಯಾಣ್ ರುದ್ರಭೂಮಿಯಲ್ಲಿ ನೆರವೇರಲಿದೆ.



Related posts

ತುಳುರಂಗಭೂಮಿಯಲ್ಲಿ ಇತಿಹಾಸ ಸೃಷ್ಟಿಸಿದ ಜೋಡು ಜೀಟಿಗೆ, – ಒಂದೇ ದಿನ ಎರಡು ಮಹಾನಗರಿಯ ಭವ್ಯ ವೇದಿಕೆಯಲ್ಲಿ ನಾಟಕ ಪ್ರದರ್ಶನ

Mumbai News Desk

ಮೈಸೂರು ದಸರಾ -2023 ರ  ಪ್ರಧಾನ ಕವಿಗೋಷ್ಟಿಯಲ್ಲಿ ಶ್ರೀನಿವಾಸ ಜೋಕಟ್ಟೆ ಕವನ ವಾಚನ

Mumbai News Desk

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಎಂ.ಎಸ್‌ ಉಮೇಶ್‌ ವಿಧಿವಶ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಧನ ಸಹಾಯ

Mumbai News Desk

ಬಾಂಡೂಪ್: ಶೇಖರ್ ನಾಯ್ಕ್ ನಿಧನ

Mumbai News Desk

ನೊಂದವರ ಬಾಳಿಗೆ ಬೆಳಕಾಗುವ ‘ನೆರವು’: 4 ಸಾವಿರ ಕುಟುಂಬಗಳಿಗೆ ₹9.5 ಕೋಟಿ ಆರ್ಥಿಕ ಸಹಾಯ ಹಸ್ತ

Mumbai News Desk