July 23, 2026
Mumbai News Kannada
ಪ್ರಕಟಣೆ

ಡಿ. 19ರಂದು ದಹಿಸರ್‌ನಲ್ಲಿ 19ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ







ಮುಂಬಯಿ, ಡಿ. 17: ದಹಿಸರ್ ಪೂರ್ವದ ಜಯಸ್ವಾಮಿ ಅತ್ತೂರು ಗುಂಡ್ಯಡ್ಕ ಅವರ ಆಯೋಜನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ 19ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆಯು ಇದೇ ಬರುವ ಡಿಸೆಂಬರ್ 19, ಶುಕ್ರವಾರದಂದು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

​ದಹಿಸರ್ ಪೂರ್ವದ ರಾವಲ್ಪಾಡದಲ್ಲಿರುವ ಸೇಂಟ್ ಥಾಮಸ್ ಸ್ಕೂಲ್ ಸಮೀಪದ ರಾಧಾಕೃಷ್ಣ ಮಂದಿರ ಸಭಾಂಗಣದಲ್ಲಿ ಈ ಧಾರ್ಮಿಕ ಕಾರ್ಯಕ್ರಮವು ಅಂಧೇರಿಯ ಶ್ರೀ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ವಿವರಗಳು:

  • ಬೆಳಿಗ್ಗೆ 5.30: ಮಹಾಗಣಪತಿ ಹೋಮ.
  • ಬೆಳಿಗ್ಗೆ 7.30: ಪ್ರಾಣಪ್ರತಿಷ್ಠೆ ಪೂಜೆ ಮತ್ತು ಅರ್ಚನೆ.
  • ಬೆಳಿಗ್ಗೆ 8.00 ರಿಂದ 9.00: ಕೇರಳ ಗ್ರೂಪ್ ತಂಡದವರಿಂದ ‘ನಾರಾಯಣೀಯಂ’ ಪಾರಾಯಣ.
  • ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 12.30: ಶ್ರೀ ದುರ್ಗಾಪರಮೇಶ್ವರಿ – ಶನೀಶ್ವರ ದೇವಸ್ಥಾನ (ರಾವಲ್ಪಾಡ, ದಹಿಸರ್ ಪೂರ್ವ) ಇವರಿಂದ ಭಜನಾ ಕಾರ್ಯಕ್ರಮ.
  • ಮಧ್ಯಾಹ್ನ 12.30 ರಿಂದ 1.00: ದೀಪಾರಾಧನೆ ಮತ್ತು ಮಹಾಪೂಜೆ.
  • ಮಧ್ಯಾಹ್ನ 1.00 ರಿಂದ 3.00: ತೀರ್ಥ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ.

​ಈ ಪುಣ್ಯ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಸಂಘಟಕರು ಹಾಗೂ ಆಯೋಜಕರಾದ ಶ್ರೀ ಜಯಸ್ವಾಮಿ ಅತ್ತೂರು ಗುಂಡ್ಯಡ್ಕ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9902581150



Related posts

ಇಂದು: ಗೊರೇಗಾವ್ ಪೂರ್ವದ ಜಯ ಲೀಲಾ ಸಭಾಗೃಹದಲ್ಲಿ* ನಾಗೇಶ್ ಎಂ ಕೋಟ್ಯಾನ್* ಶ್ರದ್ದಾಂಜಲಿ ಸಭೆ.

Mumbai News Desk

ಎ. 14ರಂದು. ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ ಥಾಣೆ ಇಲ್ಲಿ ಶ್ರೀ ಶನಿ ಗ್ರಂಥ ಪಾರಾಯಣ, ಶ್ರೀ ಸತ್ಯನಾರಾಯಣ ಮಹಾಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು.

Mumbai News Desk

ಸೆ. 20 ರಂದು ಡೊಂಬಿವಲಿ ಶ್ರೀ ಜಗದಂಬ ಮಂದಿರದಲ್ಲಿ ಯಕ್ಷಗಾನ ಕಲೆಯ ಆರಾಧನೆ – “ಭಂಡಾರ ಜಾವಡಿ”

Mumbai News Desk

ಜ‌ 5, ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್, ಮುಂಬಯಿ, 42 ವರ್ಷದ ಮಹಾಪೂಜೆ ಇರುಮುಡಿ ಸೇವೆ

Mumbai News Desk

ಶ್ರೀ ಧರ್ಮ ಜಾರಂದಾಯ ದೈವಸ್ಥಾನ, ಹೆಜಮಾಡಿ : ಜ. 25ಕ್ಕೆ ವಾರ್ಷಿಕ ಬಂಡಿ ನೇಮೋತ್ಸವದ

Mumbai News Desk

ಡಿ. 29. ಕನಕದಾಸ ಜಯಂತಿ, ಕುವೆಂಪು ಜಯಂತಿ ಗೌರವಾರ್ಥ,ಕರ್ನಾಟಕ ರಾಜ್ಯೋತ್ಸವ ಸಂಭ್ರಮ – ಕರುನಾಡ ಡಿಂಡಿಮ – 2024.

Mumbai News Desk