ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಬೈಕಂಪಾಡಿ ಅಲ್ಲಿನ ಕೊಪ್ಪಳ ಕಾವೇರಿ ನಿವಾಸಿ ಯಶೋದಾ ಗಣಪ ಪುತ್ರನ್ (80) ಎ. 21ರಂದು, ಭಾಂಡೂಪ್ ಪಶ್ಚಿಮದ ಎಲ್ಬಿಎಸ್ ಮಾರ್ಗದಲ್ಲಿನ ಕಮಲ್ ಪಾರ್ಕ್ ಅಪಾರ್ಟ್ಮೆಂಟ್ನಲ್ಲಿನ ತನ್ನ ಪುತ್ರಿಯ ನಿವಾಸದಲ್ಲಿ ನಿಧನರಾದರು.
ಬ್ಯಾಂಕ್ ಆಫ್ ಬರೋಡ ಇದರ ಉದ್ಯೋಗಿಯಾಗಿದ್ದು ನಿವೃತ್ತರಾಗಿದ್ದ ಮೃತರು ಮೂವರು ಗಂಡು (ಧರ್ಮೇಶ್, ತೇಜಪಾಲ್, ಅನಿಲ್ ಪುತ್ರನ್), ಎರಡು ಹೆಣ್ಣು (ರೋಹಿಣಿ ಪುತ್ರನ್) ಹಾಗೂ ಮುಂಬೈಯ ಸಾಹಿತಿ, ಲೇಖಕಿ,ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಇದರ ಅಧ್ಯಕ್ಷೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂ ಜೆ) ಮಹಾರಾಷ್ಟ್ರ ಘಟಕದ ಸದಸ್ಯೆ ಡಾ. ಜಿ.ಪಿ ಕುಸುಮಾ ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಂಗಳವಾರ ಸಂಜೆ ಭಾಂಡೂಪ್ನಲ್ಲಿ ನೆರವೇರಿಸಲಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.





