ಮುಂಬಯಿ: ಕಾಂಗ್ರೆಸ್ ಹಿರಿಯ ನೇತಾರರು, ಪ್ರಭಾತ್ ಕಾಲೋನಿ ಗಣೇಶೋತ್ಸವ ಮಂಡಳಿ ಮತ್ತು ಪ್ರಭಾತ್ ಕಾಲೋನಿ ಸಿಟಿಜನ್ ಅಸೋಸಿಯೇಷನ್ ಅಧ್ಯಕ್ಷರೂ ಆದ ಶೇಖರ್ ಸಾಲಿಯಾನ್ ಅವರ ನೇತೃತ್ವದಲ್ಲಿ ಪ್ರಭಾತ್ ಕಾಲೋನಿ ಪರಿಸರದಲ್ಲಿ ಜೂನ್ 5ರಂದು ವೃಕ್ಷಾರೋಪಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವು ಹೈವೇ ಪೂರ್ವ ವಾರ್ಡಿನ ಸಹಾಯಕ ಆಯುಕ್ತರಾದ ಮೃದುಲಾ ಅಂಡೆ, ಕಾರ್ಪೊರೇಟರ್ ಪೂಜಾ ಮಹಾಡೇಶ್ವರ್, ವನವಿಭಾಗದ ಅಧಿಕಾರಿ ಹೇಮಂತ್ ಪಾಟೀಲ್, ಸೋನಾಲಿ ಹಾಗೂ ಇತರ ಪದಾಧಿಕಾರಿಗಳ ಸಮ್ಮುಖದಲ್ಲಿ ನೆರವೇರಿತು.
ಅಸೋಸಿಯೇಷನ್ನ ಪದಾಧಿಕಾರಿಗಳಾದ ದೀಪಕ್ ಕಣೇರ್ಕರ್, ಉಮಾ ಮಿಶ್ರಾ, ಮಂಗೇಶ್ ಭಗತ್, ಹರೇಶ್ ಚವ್ಹಾಣ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಹಾಗೆಯೇ ಪ್ರಭಾತ್ ಕಾಲೋನಿ ಪರಿಸರದ ಅನೇಕ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೃಕ್ಷಾರೋಪಣವನ್ನು ಯಶಸ್ವಿಗೊಳಿಸಿದರು.
previous post




