
ಮುಂಬೈನ ಘಾಟ್ಕೋಪರ್ ಪಶ್ಚಿಮದ ಅಸಲ್ಪಾದ ಎನ್.ಎಸ್.ಎಸ್. ರಸ್ತೆಯಲ್ಲಿರುವ ಪ್ರಸಿದ್ಧ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಮಂದಿರದಲ್ಲಿ ಶ್ರೀ ದೇವಿಯ ದರ್ಶನ ಸೇವೆಯು ಕೊನೆಯ ಶುಕ್ರವಾರ ಜರುಗಲಿದ್ದು, ಈ ಅಪರೂಪದ ಧಾರ್ಮಿಕ ವಿಧಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಶ್ರೀ ದೇವಿಯ ಆವೇಶ ಭರಿತ ದರ್ಶನ ನೀಡಲು ಊರಿನ ಕಟಪಾಡಿಯ ಚೌಡೇಶ್ವರಿ ದೇವಸ್ಥಾನದ ಪಾತ್ರಿಗಳಾಗಿರುವ ಶ್ರೀ ಸಚಿನ್ ಶೆಟ್ಟಿ ಅವರು ಆಗಮಿಸುತ್ತಿದ್ದು, ದೇವಸ್ಥಾನದ ದೇವಿ ಪಾತ್ರಿಗಳಾಗಿ ದರ್ಶನ ಸೇವೆಯನ್ನು ನಡೆಸಿ ಕೊಡಲಿದ್ದಾರೆ.

ದಿನಾಂಕ 26-06-2026 ರಂದು ಈ ಶ್ರೀ ದೇವಿಯ ಭವ್ಯ ದರ್ಶನ ಸೇವೆಯು ಜರುಗಲಿದ್ದು, ಭಕ್ತಾಧಿಗಳು ಆ ದಿನ ಹೆಚ್ಚಿನ ಸಂಖ್ಯೆಯಲ್ಲಿ ರಾತ್ರಿ 8.00 ಗಂಟೆಗೆ ಸರಿಯಾಗಿ ದೇವಸ್ಥಾನದಲ್ಲಿ ಉಪಸ್ಥಿತರಿದ್ದು ದರ್ಶನ ಸೇವೆಯಲ್ಲಿ ಭಾಗವಹಿಸಿ ತನು-ಮನ-ಧನಗಳಿಂದ ಪುನೀತರಾಗಬೇಕಾಗಿ ವಿನಂತಿಸಲಾಗಿದೆ. ಇದೇ ಶುಭ ದಿನದಂದು ದೇವಸ್ಥಾನದ ಕಾರ್ಯಕರ್ತರೂ ಆಗಿರುವ ಖ್ಯಾತ ಹೋಟೆಲ್ ಉದ್ಯಮಿ ಹಾಗೂ ಕೊಡುಗೆ ದಾನಿಗಳಾಗಿರುವ ಶ್ರೀ ರಮಾನಾಥ್ ಕೋಟ್ಯಾನ್ ಅವರ ಕುಟುಂಬಸ್ಥರ ಪರವಾಗಿ ವಿಶೇಷ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ.

ಭಕ್ತ ಮಹಾಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅನ್ನ ಪ್ರಸಾದವನ್ನು ಸ್ವೀಕರಿಸಿ, ಶ್ರೀ ಕ್ಷೇತ್ರ ಮಾತೆ ಗೀತಾಂಬಿಕೆಯ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಅಧ್ಯಕ್ಷರು, ಗೌರವಾಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಮಹಿಳಾ ವಿಭಾಗದ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಸಂಪರ್ಕಕ್ಕಾಗಿ ಭಕ್ತರು 9867143299 ಮತ್ತು 9594930536 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.




