30 C
Mumbai
May 21, 2026
Mumbai News Kannada
ಮುಂಬಯಿ

ಶ್ರೀ ಬಾಟ್ಲಾ ದೇವಿ ಅಯ್ಯಪ್ಪ ಭಕ್ತವೃಂದ ಭಾಟ್ಲಾ ದೇವಿ ಮಂದಿರ ದಹಿಸರ್ ಪೂರ್ವ 35ನೇ ಅಯ್ಯಪ್ಪ ಮಹಾಪೂಜೆ,  ಅನ್ನ ಸಂತರ್ಪಣೆ





ಚಿತ್ರ, ವರದಿ : ರಮೇಶ್ ಉದ್ಯಾವರ 

 ದಹಿಸರ್, ಡಿ. 8:  ಶ್ರೀ  ಭಾಟ್ಲದೇವಿ ಮಂದಿರ ದಹಿಸರ್ ಪೂರ್ವ ಇಲ್ಲಿನ ಶ್ರೀ ಭಾಟ್ಲಾದೇವಿ ಅಯ್ಯಪ್ಪ ಭಕ್ತವೃಂದ ಇದರ 35ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆಯು ಡಿ. 7ರಂದು ದಹಿಸರ್ ನ ವಿನಾಯಕ ಗುರುಸ್ವಾಮಿ ಅವರ ದಿವ್ಯಹಸ್ತದಿಂದ ಸಕಲ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೇವಸ್ಥಾನದ ವಠಾರದಲ್ಲಿ ವಿಜೃಂಭಣೆಯಿಂದ ಜರುಗಿತು.

 ಬೆಳಿಗ್ಗೆ ಗಣ ಹೋಮ, ಪ್ರತಿಷ್ಠಾಪನೆ ನೆರವೇರಿತು. ಆ ಬಳಿಕ ಹನುಮಾನ್ ಭಜನಾ ಮಂಡಳಿ ಅಶೋಕವನ ದಹಿಸರ್ ಪೂರ್ವ ಸಂಗಡಿಗರಿಂದ ಮತ್ತು ಅಯ್ಯಪ್ಪ ಸ್ವಾಮಿಯವರಿಂದ ಭಜನೆ ಕೀರ್ತನೆ ಶರಣಘೋಷದೊಂದಿಗೆ ಜರುಗಿತು. 

      ಮಧ್ಯಾಹ್ನ ಮಹಾಪೂಜೆ ಮೊದಲು ಹಿರಿಕಿರಿಯ ಅಯ್ಯಪ್ಪ ಸ್ವಾಮಿ ಶಿಬಿರಾರ್ಥಿಗಳಿಂದ  ಶರಣು ಘೋಷದೊಂದಿಗೆ ಪಡಿಪೂಜೆ ನೆರವೇರಿತು. ಬಳಿಕ ಶ್ರೀ ವಿನಾಯಕ ಗುರುಸ್ವಾಮಿಯವರಿಂದ ಮಹಾಪೂಜೆ ಮಂಗಳಾರತಿ ಜರುಗಿತು.

ಪ್ರಾರಂಭದಲ್ಲಿ ಸನ್ನಿಧಾನ ದೇವತೆ ಬಾಟ್ಲಾದೇವಿಗೆ ವಿಶೇಷ ಪೂಜೆ ಮಹಾಪ್ರಸಾದ ಸಮರ್ಪಿಸಿದ ಬಳಿಕ ಅಯ್ಯಪ್ಪ ಮಹಾಪೂಜೆಗೆ ಚಾಲನೆ ನೀಡಲಾಯಿತು.  ಈ ಸಂದರ್ಭದಲ್ಲಿ ವಿಶೇಷ ಅಲಂಕೃತ ಶ್ರೀ ಗಣಪತಿಯ  ಹಾಗೂ ಶ್ರೀ ಕಟಿಲೇಶ್ವರಿ ದೇವಿಯ ಪ್ರತಿಬಿಂಬಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಗೌ. ಪ್ರ. ಕಾರ್ಯದರ್ಶಿ ಮನ್ಮಥ ಆರ್. ಹೆಗ್ಡೆ ಪಲ್ಲ ಪೂಜೆ ನೆರವೇರಿಸಿದ ಬಳಿಕ ಅಯ್ಯಪ್ಪ ಶಿಭಿರಾರ್ಥಿಯ ವ್ರತಧಾರಿಗಳು ಸಾವಿರಾರು ತುಳು ಕನ್ನಡಿಗ ಭಕ್ತಾಧಿಗಳು ದೇವಸ್ಥಾನದ ಸದಸ್ಯರು ಮಹಾಪ್ರಸಾದ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡರು.

 ಗೌರವಾಧ್ಯಕ್ಷರಾದ ಕೃಷ್ಣ ಎಂ ಶೆಟ್ಟಿ ಮತ್ತು ವಿನಾಯಕ ಗುರುಸ್ವಾಮಿಯವರು ಪೂಜೆಯಲ್ಲಿ ಭಾಗವಹಿಸಿದ ಪರಿಸರದ ವಿವಿಧ ಉದ್ಯಮಿಗಳು ಗಣ್ಯರಿಗೆ ಮತ್ತು ವಿವಿಧ ಶಿಬಿರಾರ್ಥಿಯ ಗುರುಸ್ವಾಮಿಯವರಿಗೆ ಪ್ರಸಾದ ವಿತರಿಸಿದರು.

    ಸಾಯಂಕಾಲ ಬೊರಿವಿಲಿ ಮಹಿಷಮರ್ದಿನಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ಕಾರ್ಯಕ್ರಮ  ಜರುಗಿದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತ್ರಿಶಾ ಸನತ್ ಶೆಟ್ಟಿಯವರಿಂದ ಗಣೇಶ ವಂದನ ಕಟೀಲ ದುರ್ಗೆಯ ನೃತ್ಯ ರೂಪಕ ಅಯ್ಯಪ್ಪ ಸ್ತುತಿ ಹರಿವರಸನಂ ಪ್ರಸ್ತುತಪಡಿಸಿದರು. ಬಳಿಕ ವಿಜಯ ಸಾಲ್ಯಾನ್ ತಂಡದವರಿಂದ ಭಜನಾ ಕಾರ್ಯಕ್ರಮ ಜರುಗಿತು.

 ಈ ಸಂದರ್ಭದಲ್ಲಿ ಸಂಸ್ಥೆ ಯ ಮಾಜಿ ಅಧ್ಯಕ್ಷ ದಹಿಸರ್ ಪರಿಸರದ ಹೋಟೆಲ್ ಉದ್ಯಮಿ  . ಸಮಾಜ ಸೇವಕ ಸದಾನಂದ ಕೆ ಶೆಟ್ಟಿ ಅವರನ್ನು ಅಧ್ಯಕ್ಷೆ ಲತಾ ಸಿ ಪೂಜಾರಿ ಗೌರವ ಅಧ್ಯಕ್ಷ ಕೃಷ್ಣ ಎಂ ಶೆಟ್ಟಿ ಕಾರ್ಯಕಾರಿ ಸಮಿತಿ ಸದಸ್ಯ ರೊಂದಿಗೆ ಭಕ್ತಾಧಿಗಳ ಸಮ್ಮುಖದಲ್ಲಿ ಶಾಲು ಹೊದೆಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

 ಅಂತರಾಷ್ಟ್ರೀಯ ಕ್ರೀಡಾಪಟು ಕಿಕ್ ಬಾಕ್ಸರ್ ಪ್ರಶಸ್ತಿ ವಿಜೇತ ಬಾಲಕೃಷ್ಣ ಶೆಟ್ಟಿ, ದಂಪತಿಗಳು,   ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ನೃತ್ಯ ಸಾದರ ಪಡಿಸಿದ ತ್ರಿಶಾ ಸನತ್ ಶೆಟ್ಟಿ ಅವರನ್ನು ವೇದಿಕೆಯಲ್ಲಿ ಭಕ್ತಾದಿಗಳ ಸಮ್ಮುಖದಲ್ಲಿ ವಿಶೇಷವಾಗಿ ಗೌರವಿಸಲಾಯಿತು.

 ವೇದಿಕೆಯಲ್ಲಿ ಗೌರವಾಧ್ಯಕ್ಷ ಕೃಷ್ಣ ಎಂ ಶೆಟ್ಟಿ ಅಧ್ಯಕ್ಷೆ ಲತಾ ಸಿ ಪೂಜಾರಿ ಗೌ. ಪ್ರಧಾನ ಕಾರ್ಯದರ್ಶಿ ಗೌ. ಪ್ರಧಾನ ಕೋಶಾಧಿಕಾರಿ ಉಷಾ ಸಿ ಪೂಜಾರಿ ಉಪಾಧ್ಯಕ್ಷರಾದ ಶ್ರೀಧರ್ ಕೆ  ಪೂಜಾರಿ ಜೊತೆ ಕಾರ್ಯದರ್ಶಿ ರವೀಂದ್ರ ಎಂ ಭಟ್ ಜೊತೆ ಕೋಶಾಧಿಕಾರಿ ಸ್ವಪ್ನ ಎ ಶೆಟ್ಟಿ ಕಾನೂನು ಸಲಹೆಗಾರರಾದ ನ್ಯಾಯವಾದಿ ಎಚ್ ಎಂ ಶೆಟ್ಟಿ ಉಪಸ್ಥಿತರಿದ್ದರು.

 ಕಾರ್ಯಕಾರಿ ಸಮಿತಿಯ ಸದಸ್ಯರಾದ ಸದಾನಂದ ಕೆ ಶೆಟ್ಟಿ,  ರಾಮಚಂದ್ರ ಎಸ್ ಶೆಟ್ಟಿ ವಾಸುದೇವ ಕೋಟ್ಯಾನ್ ಕರುಣಾಕರ ವಿ ಶೆಟ್ಟಿ ರುಕ್ಮಯ ಎಸ್ ಶೆಟ್ಟಿಗಾರ್ ಸುನಂದಾ ಎಸ್ ಶೆಟ್ಟಿ ವಿಲಾಸಿನಿ ಆರ್ ಶೆಟ್ಟಿ ಮೋಹಿನಿ ಎಂ ಹೆಗ್ಡೆ ದಿನಪೂರ್ತಿ ಜರಗಿದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.ಕಾರ್ಯಕಾರಿ ಸಮಿತಿಯ ಸದಸ್ಯರಾದ ಪರಮೇಶ್ವರ ಎಂ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



Related posts

ಕಿಸನ್ ನಗರ ಶ್ರೀ ಅಯ್ಯಪ್ಪ ಸೇವ ಸಮಿತಿಯ 23 ನೇ ವಾರ್ಷಿಕ ಮಹಾಪೂಜೆ

Mumbai News Desk

ಕರುನಾಡ ಸಿರಿ ವಾರ್ಷಿಕ ಕ್ರೀಡಾಕೂಟ ಯಶಸ್ವಿ ಸಂಪನ್ನ.

Mumbai News Desk

HSC ಪರೀಕ್ಷೆ ಯಲ್ಲಿ ನಿಧಿ ಜಗದೀಶ ಶೆಟ್ಟಿ 90 ಶೇಕಡಾ ಅಂಕ

Mumbai News Desk

ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು,  ಮಹಾರಾಷ್ಟ್ರ ಘಟಕದ ರಜತ ಮಹೋತ್ಸವ ಸಂಭ್ರಮಾಚರಣೆಯ ಪತ್ರಿಕಾಗೋಷ್ಠಿ, 

Mumbai News Desk

ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯಲ್ಲಿ, ಬಂಟರ ಸಂಘ ಮುಂಬಯಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ವತಿಯಿಂದ ಆರ್ಥಿಕ ಧನ ಸಹಾಯ ವಿತರಣೆ ಹಾಗೂ ಟಾಟಾ ಐಐಎಸ್ – ಸಂಜೀವಿನಿ ಲೋಕಾರ್ಪಣೆ

Mumbai News Desk

ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿಯ ಅಶ್ರಯದಲ್ಲಿ ಶೈಕ್ಷಣಿಕ ನೆರವು, ದತ್ತು ಸ್ವೀಕಾರ ಕಾರ್ಯಕ್ರಮ

Mumbai News Desk