

ವಸಾಯಿ ಶ್ರೀ ಮಣಿಕಂಠ ಸೇವಾ ಸಮಿತಿಯ 23ನೇ ವರ್ಷದ ಅಯ್ಯಪ್ಪ ಮಹಾಪೂಜೆಯು 13-12-2024ನೇ ಶುಕ್ರವಾರ, ಶ್ರೀ ಜಯಶೀಲ ಗುರುಸ್ವಾಮಿ ಮೀರಾರೋಡ್ ಇವರ ದಿವ್ಯ ಹಸ್ತದಿಂದ ಆರ್ನ ಸ್ವರ್ಣ ಬಾಂಕ್ವೆಟ್ ಹಾಲ್, ದತ್ತನಿ ಮಾಲ್, ಸ್ಮಾರ್ಟ್ ಬಾಜರ್ ಹತ್ತಿರ, ವಸಯಿ (ಪ) ಇಲ್ಲಿ ವಿಜೃಂಭಣೆಯಿಂದ ನಡೆಯಲಿದೆ .
ಬೆಳಿಗ್ಗೆ 06.30 ರಿಂದ ಗಣಹೋಮ, ಶ್ರೀ ಕೃಷ್ಣ ಭಟ್ ನಾಲಸೋಪರ ಅವರಿಂದ, ಬೆಳಿಗ್ಗೆ 09.00 ರಿಂದ 11.00ರ ತನಕ ಭಜನಾ ಕಾರ್ಯಕ್ರಮ : ಸ್ಥಳೀಯ ಮಹಿಳೆಯರಿಂದ,ಬೆಳಿಗ್ಗೆ 11.00 ರಿಂದ 12.00ರ ತನಕ : ಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಮೀರಾರೋಡ್
ಮಧ್ಯಾಹ್ನ 12,00 ರಿಂದ 01.30ರ ತನಕ ಮಹಾಪೂಜೆ, ಮಂಗಳಾರತಿ ಮತ್ತು ತೀರ್ಥ-ಪ್ರಸಾದ ವಿತರಣೆ
ಮಧ್ಯಾಹ್ನ 01.30 ರಿಂದ 04.00ರ ತನಕ ಅನ್ನ ಸಂತರ್ಪಣೆ ನಡೆಯಲಿದೆ,
ಆ ಪ್ರಯುಕ್ತ ಭಕ್ತಾಭಿಮಾನಿಗಳಾದ ತಾವೆಲ್ಲರೂ ಮಹಾಪೂಜೆಯಲ್ಲಿ ಭಾಗವಹಿಸಿ, ತೀರ್ಥ-ಪ್ರಸಾದವನ್ನು ಸ್ವೀಕರಿಸಿ, ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಮಣಿಕಂಠ ಸೇವಾ ಸಮಿತಿ, ವಸಾಯಿ (ಪಶ್ಚಿಮ)ಕರ್ನೂರು ಶಂಕರ್ ಆಳ್ವ (ಗೌರವ ಅಧ್ಯಕ್ಷ)
ಯಶೋಧರ್ ವಿ. ಕೋಟ್ಯಾನ್ (ಅಧ್ಯಕ್ಷ), ಎಕ್ಕಾರ್ ದಿನೇಶ್ ಹೆಗ್ಡೆ (ಉಪಾಧ್ಯಕ್ಷ), ನಿತ್ಯಾನಂದ ಶೆಟ್ಟಿ (ಕಾರ್ಯದರ್ಶಿ), ರಾಧಕೃಷ್ಣ ಶೆಟ್ಟಿ (ಖಜಾಂಚಿ)ಸುಧೀರ್ ಸಾಲ್ಯಾನ್ (ಜೊತೆ ಖಜಾಂಚಿ), ದಿನೇಶ್ ಭಂಡಾರಿ
(ಪೂಜಾ ಸಮಿತಿ ಸಲಹಾಗಾರ), ಉಮೇಶ್ ಕಾಂತಾವರ (ಪೂಜಾ ಸಮಿತಿ ಸಲಹಾಗಾರ) ವಿನಂತಿಸಿಕೊಂಡಿದ್ದಾರೆ,




