July 23, 2026
Mumbai News Kannada
ಸುದ್ದಿ

ಬೊಯಿಸರ್ ಪಶ್ಚಿಮದ ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಪೂಜಾ ಕಾರ್ಯಕ್ರಮ ಸಂಪನ್ನ.







     ಸುದ್ದಿ ವಿವರ: ಪಿ.ಆರ್.ರವಿಶಂಕರ್

                ಬೊಯಿಸರ್ ಪಶ್ಚಿಮದಲ್ಲಿನ ಸಿಡ್ಕೋ ವಲಯದಲ್ಲಿನ  ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಇದೇ ಡಿಸೆಂಬರ್ ತಾ.18 ನೆಯ ಬುಧವಾರದಂದು ಸಂಜೆ ಶ್ರೀ ಗಣೇಶ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ಪೂಜೆಯು ಅದ್ದೂರಿಯಾಗಿ ಜರಗಿತು.

       ಆರಂಭದಲ್ಲಿ   ಮೀರಾ ರೋಡ್ ನ ಪ್ರಸಿದ್ಧ ಲಕ್ಶ್ಮೀನಾರಾಯಣ ಭಜನಾ ಮಂಡಲಿ  ಹಾಗೂ ಅಯ್ಯಪ್ಪ ಭಕ್ತ ಮಂಡಳಿ ಮೀರಾರೊಡ್ ಇವಯರಿಂದ ದೇವರ ಭಜನಾ ಸಂಕೀರ್ತನೆ ಹಾಗೂ ಸ್ವಾಮಿ ಅಯ್ಯಪ್ಪ  ಭಕ್ತಿ ಭಜನಾ ಕಾರ್ಯಕ್ರಮವು ಜರಗಿತು.  ಅಯ್ಯಪ್ಪ ವೃತಧಾರಿಯಾದ ಸಂತೋಷ್ ಶೆಟ್ಟಿ ಸ್ವಾಮಿ ( ತುಂಗಾ  ಹಾಸ್ಪಿಟಲ್ಸ್) ಇವರು  ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮಹಾ ಮಂಗಳಾರತಿಯ ಬಳಿಕ ತೀರ್ಥಪ್ರಸಾದ ಹಾಗೂ ಹರಿವರಾಸನಮ್ ಕಾರ್ಯಕ್ರಮ ಜರಗಿತು. 

   ಸರ್ವ ಭಕ್ತಾಭಿಮಾನಿಗಳ ನಿತ್ಯಜೀವನದಲ್ಲಿನ ಉತ್ತಮ ಆರೋಗ್ಯ , ನೆಮ್ಮದಿ ಹಾಗೂ ಸುಭಿಕ್ಷತೆಯ ಪ್ರಾರ್ಥನೆಗಳೊಂದಿಗೆ ಪೂಜಾ ಕಾರ್ಯಕ್ರಮ ಸಂಪನ್ನಗೊಂಡಿತು.

ಮೀರಾ ರೋಡ್ ನ ಅಯ್ಯಪ್ಪ ಭಕ್ತಮಂಡಳಿಯ ಹಿರಿಯ ಶ್ರೀ ಜಯಶೀಲ ಗುರುಸ್ವಾಮಿಯವರ ಉಪಸ್ಥಿತಿಯಲ್ಲಿ ಜರಗಿದ ಈ ಕಾರ್ಯ ಕ್ರಮದಲ್ಲಿ ಸ್ವಾಮಿ ನಿತ್ಯಾನಂದ ಮಂದಿರದ ವಿಶ್ವಸ್ಥರು ಸತ್ಯಾ ಕೋಟ್ಯಾನ್, ಪಾಲ್ಘರ್ ತಾಲೂಕು ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷ ರಘುರಾಮ್ ಎಮ್.ರೈ , ಮೀರಾ ಡಹಾಣೂ ಬಂಟ್ಸ್ ಸಂಸ್ಥೆಯ ಟ್ರಸ್ಟೀ ಕೆ.ಭುಜಂಗ ಶೆಟ್ಟಿ , ಸ್ಥಳೀಯ ಉದ್ಯಮಿಗಳು , ವಿವಿಧ ಸಂಸ್ಥೆಯ ಪದಾಧಿಕಾರಿಗಳು ,ತುಂಗಾ ಹಾಸ್ಪಿಟಲ್ಸ್ ಸಮೂಹದ ಕರ್ಮಚಾರಿ ಸದಸ್ಯರು ಹಾಗೂ ಸ್ಥಳೀಯ ಅಯ್ಯಪ್ಪ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಪೂಜೆಯ ಬಳಿಕ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಜರಗಿತು.

ಚಿತ್ರ ಹಾಗೂ ಸುದ್ದಿ : ಪಿ.ಆರ್.ರವಿಶಂಕರ್

8483980035



Related posts

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ತಾಯಿ ಲಚ್ಚಿ ಪೂಜಾರಿ ನಿಧನ

Mumbai News Desk

ಮುಲುಂಡ್‌ :    ಲ!  ಜಯರಾಮ್ ಮೂಲ್ಯ ನಿಧನ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (12/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಕುಕ್ಕಳ ಶ್ರೇಯಸ್ ಪೂಜಾರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ

Mumbai News Desk

ಮಂಗಳೂರು: ಬಜ್ಪೆಯಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಭೀಕರ ಹತ್ಯೆ

Mumbai News Desk

ಬಂಟರ ಸಂಘ ಮುಂಬೈಯ ನೂತನ ಟ್ರಸ್ಟಿ   ಉಳ್ತೂರು  ಮೋಹನ್ದಾಸ್ ಶೆಟ್ಟಿ ಅವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಭಿನಂದನೆ.

Mumbai News Desk