September 6, 2026
Mumbai News Kannada
ಪ್ರಕಟಣೆ

ಮಲಾಡ್ ಕನ್ನಡ ಸಂಘದ ಆಶ್ರಯದಲ್ಲಿ ಡಿ. 29 ರಂದು ಸದಸ್ಯ ಬಾಂಧವರಿಗೆ ಮತ್ತು ಮಕ್ಕಳಿಗಾಗಿ ಒಳಾಂಗಣ ಕ್ರೀಡಾಕೂಟ





ನಗರದ ಪ್ರತಿಷ್ಠಿತ ಕನ್ನಡ ಸಂಘದಲ್ಲೊಂದಾದ ಮಲಾಡ್ ಕನ್ನಡ ಸಂಘ ( ರಿ ) ಇದರ ಆಶ್ರಯದಲ್ಲಿ ಸದಸ್ಯ ಬಾಂಧವರಿಗೆ ಮತ್ತು ಮಕ್ಕಳು ಪರಿವಾರದವರಿಗಾಗಿ ಡಿ.29 ರ  ರವಿವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ  ಒಳಾಂಗಣ  ಕ್ರೀಡಾ ಸ್ವರ್ಧೆಯನ್ನು ಮಲಾಡ್ ಪಶ್ವಿಮ , ಮಾರ್ವೆ ರೋಡ್ , ಮಲಾಡ್ ಪೈಯರ್ ಬ್ರಿಗೇಡ್ ನ  ಹತ್ತಿರ , ಯುನಿಟಿ  ಅಪಾರ್ಟ್ಮೆಂಟ್ ಹೌಸಿಂಗ್ ಸೊಸೈಟಿ ಯಲ್ಲಿನ  ಮಲಾಡ್ ಕನ್ನಡ ಸಂಘದ ರಮಾನಾಥ ಎಸ್.ಪಯ್ಯಾಡೆ  ಮೆಮೋರಿಯಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ .

ಸ್ಪರ್ಧೆಯಲ್ಲಿ ಕ್ಯಾರಂ ಸಿಂಗಲ್ ಮತ್ತು ಡಬಲ್ಸ್ ಚೆಸ್ ಮತ್ತು ಚಿನ್ನದ ಮನೆ ಸಾಂಪ್ರದಾಯಿಕ ಕ್ರೀಡೆ ವಯೋಮಾನದ ಅಂತರದಲ್ಲಿ ಜರಗಲಿದೆ 12 ವರ್ಷ ಮಕ್ಕಳಿಗೆ ಹಾಗೂ 13 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲರಿಗೂ ಕ್ಯಾರಂ ಸಿಂಗಲ್ಸ್ ಮತ್ತು ಡಬಲ್ಸ್ , ಹಾಗೂ  ಎಲ್ಲಾ ವಯೋಮಿತಿಯ ಸದಸ್ಯ ಬಾಂಧವರಿಗಾಗಿ  ಚೆಸ್ ಮತ್ತು  ಚೆನ್ನೆಮಣೆ ಸ್ವರ್ಧೆಯನ್ನು ಆಯೋಜಿಸಲಾಗಿದೆ .

ಈ  ಎಲ್ಲಾ ಸ್ವರ್ಧೆಯಲ್ಲಿ ವಿಜೇತ ಕ್ರೀಡಾಳುಗಳಿಗೆ  ಕ್ರೀಡಾ ಕೂಟದ ಕೊನೆಯಲ್ಲಿ ಜರಗಲಿರುವ ಸಮಾರೋಪ ಸಮಾರಂಭದಲ್ಲಿ ಫಲಕ ಮತ್ತು ಮಾನಪತ್ರದಿಂದೊಂದಿಗೆ   ಮೊದಲ ಮತ್ತು ದ್ವೀತಿಯ ಬಹುಮಾನವನ್ನು ನೀಡಿ ಗೌರವಿಸಲಾಗುವುದು . 

ಕ್ರೀಡಾಸ್ವರ್ಧೆಯಲ್ಲಿ ಭಾಗವಹಿಸಲಿಚ್ಚಿಸುವವರು   ಆಶಾಲತಾ ಎಸ್ ಕೋಟ್ಯಾನ್ ಮೊ.ನಂಬ್ರ : 9892654908 ಮತ್ತು  ರಾಕೇಶ್ ಜಿ.ಪೂಜಾರಿ ಮೊ.ನಂಬ್ರ : 9969207322 ಇವರನ್ನು ಸಂಪರ್ಕಿಸಿ  ತಮ್ಮ , ತಮ್ಮ ಹೆಸರನ್ನು ನೊಂದಾಯಿಸಿ ಕೊಳ್ಳುವಂತೆ ವಿನಂತಿಸಿ ಕೊಳ್ಳಲಾಗಿದೆ . ಕ್ರೀಡೆಯ ನಿಯಮ ನಿಬಂಧನೆಗಳು ಸಂಘದ ಅಧ್ಯಕ್ಷ ರು ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ ರ ಅಂತಿಮ ನಿರ್ಧಾರಕ್ಕೆ ಒಳಪಟ್ಟಿದೆ.

ಈ ಕ್ರೀಡಾಸ್ವರ್ಧೆಗೆ  ಎಲ್ಲಾ ಸದಸ್ಯ ಬಾಂಧವರು ಭಾಗವಹಿಸಿ ಸಹಕರಿಸುವಂತೆ  ಮಲಾಡ್ ಕನ್ನಡ ಸಂಘದವತಿಯಿಂದ ಅಧ್ಯಕ್ಷ ನ್ಯಾಯವಾದಿ  ಜಗದೀಶ್ ಹೆಗ್ಡೆ ಮತ್ತು ಪದಾಧಿಕಾರಿಗಳು , ಕಾರ್ಯಕಾರಿ ಸಮಿತಿಯವರು ವಿನಂತಿಸಿ ಕೊಂಡಿದ್ದಾರೆ .

ಕಾರ್ಯಕ್ರಮದ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ.



Related posts

ಆಗಸ್ಟ್ 30: ಮಣ್ಣಿನ ಕಂಪು ಮತ್ತು ಸಾಹಿತ್ಯದ ಸಂಭ್ರಮ: ಪ್ರಫುಲ್ಲ ದಿನೇಶ್ ಕುಡೂರ್ ಅವರ ‘ಪೊಲ್ಲಕ್ಕೆನ ಅಜಕೆ’ ಲೋಕಾರ್ಪಣೆ

Mumbai News Desk

ಸೆ.22 ರಿಂದ ಅ. 2 ರ ವರೆಗೆ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯಲ್ಲಿ ನವರಾತ್ರೋತ್ಸವ.

Mumbai News Desk

ಶ್ರೀ ಕೋಡ್ಬಬ್ಬು ದೈವಸ್ಥಾನ ಬಸ್ತಿಪಡ್ಪು, ಹೆಜಮಾಡಿ : ಎ. 3 ಹಾಗೂ ಎ. 4ರಂದು ವಾರ್ಷಿಕ ನೇಮೋತ್ಸವ

Mumbai News Desk

ವಸಾಯಿ ತಾಲೂಕು ಮೊಗವೀರ ಸಂಘದ ವತಿಯಿಂದ ಆಗಸ್ಟ್ 10ರಂದು ‘ಪ್ರತಿಭಾ ಪುರಸ್ಕಾರ’, “ಆಟಿಡೊಂಜಿ ದಿನ”

Mumbai News Desk

ನ.17 ರಂದು ಕರ್ನಾಟಕ ಸಂಘ ಡೊಂಬಿವಲಿ ಕ್ರೀಡಾ ವಿಭಾಗದ ವಾರ್ಷಿಕ ಕ್ರೀಡೋತ್ಸವ ದಂಗಲ್ 2024

Mumbai News Desk

ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಬ್ರಹ್ಮಕಲಶೋತ್ಸವ: ಮಾರ್ಚ್ 6ರಂದು ಬಪ್ಪನಾಡಿನಿಂದ ಹಸಿರು ವಾಣಿ ಹೊರೆ ಕಾಣಿಕೆ ಸಮರ್ಪಣೆ

Mumbai News Desk