July 23, 2026
Mumbai News Kannada
ಪ್ರಕಟಣೆ

ಮಲಾಡ್ ಕನ್ನಡ ಸಂಘದ ಆಶ್ರಯದಲ್ಲಿ ಡಿ. 29 ರಂದು ಸದಸ್ಯ ಬಾಂಧವರಿಗೆ ಮತ್ತು ಮಕ್ಕಳಿಗಾಗಿ ಒಳಾಂಗಣ ಕ್ರೀಡಾಕೂಟ







ನಗರದ ಪ್ರತಿಷ್ಠಿತ ಕನ್ನಡ ಸಂಘದಲ್ಲೊಂದಾದ ಮಲಾಡ್ ಕನ್ನಡ ಸಂಘ ( ರಿ ) ಇದರ ಆಶ್ರಯದಲ್ಲಿ ಸದಸ್ಯ ಬಾಂಧವರಿಗೆ ಮತ್ತು ಮಕ್ಕಳು ಪರಿವಾರದವರಿಗಾಗಿ ಡಿ.29 ರ  ರವಿವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ  ಒಳಾಂಗಣ  ಕ್ರೀಡಾ ಸ್ವರ್ಧೆಯನ್ನು ಮಲಾಡ್ ಪಶ್ವಿಮ , ಮಾರ್ವೆ ರೋಡ್ , ಮಲಾಡ್ ಪೈಯರ್ ಬ್ರಿಗೇಡ್ ನ  ಹತ್ತಿರ , ಯುನಿಟಿ  ಅಪಾರ್ಟ್ಮೆಂಟ್ ಹೌಸಿಂಗ್ ಸೊಸೈಟಿ ಯಲ್ಲಿನ  ಮಲಾಡ್ ಕನ್ನಡ ಸಂಘದ ರಮಾನಾಥ ಎಸ್.ಪಯ್ಯಾಡೆ  ಮೆಮೋರಿಯಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ .

ಸ್ಪರ್ಧೆಯಲ್ಲಿ ಕ್ಯಾರಂ ಸಿಂಗಲ್ ಮತ್ತು ಡಬಲ್ಸ್ ಚೆಸ್ ಮತ್ತು ಚಿನ್ನದ ಮನೆ ಸಾಂಪ್ರದಾಯಿಕ ಕ್ರೀಡೆ ವಯೋಮಾನದ ಅಂತರದಲ್ಲಿ ಜರಗಲಿದೆ 12 ವರ್ಷ ಮಕ್ಕಳಿಗೆ ಹಾಗೂ 13 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲರಿಗೂ ಕ್ಯಾರಂ ಸಿಂಗಲ್ಸ್ ಮತ್ತು ಡಬಲ್ಸ್ , ಹಾಗೂ  ಎಲ್ಲಾ ವಯೋಮಿತಿಯ ಸದಸ್ಯ ಬಾಂಧವರಿಗಾಗಿ  ಚೆಸ್ ಮತ್ತು  ಚೆನ್ನೆಮಣೆ ಸ್ವರ್ಧೆಯನ್ನು ಆಯೋಜಿಸಲಾಗಿದೆ .

ಈ  ಎಲ್ಲಾ ಸ್ವರ್ಧೆಯಲ್ಲಿ ವಿಜೇತ ಕ್ರೀಡಾಳುಗಳಿಗೆ  ಕ್ರೀಡಾ ಕೂಟದ ಕೊನೆಯಲ್ಲಿ ಜರಗಲಿರುವ ಸಮಾರೋಪ ಸಮಾರಂಭದಲ್ಲಿ ಫಲಕ ಮತ್ತು ಮಾನಪತ್ರದಿಂದೊಂದಿಗೆ   ಮೊದಲ ಮತ್ತು ದ್ವೀತಿಯ ಬಹುಮಾನವನ್ನು ನೀಡಿ ಗೌರವಿಸಲಾಗುವುದು . 

ಕ್ರೀಡಾಸ್ವರ್ಧೆಯಲ್ಲಿ ಭಾಗವಹಿಸಲಿಚ್ಚಿಸುವವರು   ಆಶಾಲತಾ ಎಸ್ ಕೋಟ್ಯಾನ್ ಮೊ.ನಂಬ್ರ : 9892654908 ಮತ್ತು  ರಾಕೇಶ್ ಜಿ.ಪೂಜಾರಿ ಮೊ.ನಂಬ್ರ : 9969207322 ಇವರನ್ನು ಸಂಪರ್ಕಿಸಿ  ತಮ್ಮ , ತಮ್ಮ ಹೆಸರನ್ನು ನೊಂದಾಯಿಸಿ ಕೊಳ್ಳುವಂತೆ ವಿನಂತಿಸಿ ಕೊಳ್ಳಲಾಗಿದೆ . ಕ್ರೀಡೆಯ ನಿಯಮ ನಿಬಂಧನೆಗಳು ಸಂಘದ ಅಧ್ಯಕ್ಷ ರು ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ ರ ಅಂತಿಮ ನಿರ್ಧಾರಕ್ಕೆ ಒಳಪಟ್ಟಿದೆ.

ಈ ಕ್ರೀಡಾಸ್ವರ್ಧೆಗೆ  ಎಲ್ಲಾ ಸದಸ್ಯ ಬಾಂಧವರು ಭಾಗವಹಿಸಿ ಸಹಕರಿಸುವಂತೆ  ಮಲಾಡ್ ಕನ್ನಡ ಸಂಘದವತಿಯಿಂದ ಅಧ್ಯಕ್ಷ ನ್ಯಾಯವಾದಿ  ಜಗದೀಶ್ ಹೆಗ್ಡೆ ಮತ್ತು ಪದಾಧಿಕಾರಿಗಳು , ಕಾರ್ಯಕಾರಿ ಸಮಿತಿಯವರು ವಿನಂತಿಸಿ ಕೊಂಡಿದ್ದಾರೆ .

ಕಾರ್ಯಕ್ರಮದ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ.



Related posts

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ನ. 9ರಂದು ಚೈತನ್ಯ ಕಲಾವಿದರು ಬೈಲೂರು, ಇವರಿಂದ “ಅಷ್ಟೆಮಿ” ತುಳು ನಾಟಕ ಪ್ರದರ್ಶನ.

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಥಾಣೆ : ಅ. 8ಕ್ಕೆ ಶ್ರೀ ದುರ್ಗಾ ಹೋಮ, ಶ್ರೀ ದೇವಿ ದರ್ಶನ

Mumbai News Desk

ಮಾ.29 : ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆ ಹೆಜಮಾಡಿ ಜೀರ್ಣೋದ್ಧಾರ ಸಮಿತಿಯಿಂದ ಮುಂಬಯಿಯಲ್ಲಿ “ಸಿರಿ-ನುಡಿ” ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಜೀರ್ಣೋದ್ಧಾರ ಕಾರ್ಯದ ಪ್ರಗತಿ ಪರಿಶೀಲನೆ

Mumbai News Desk

   ನ. 19 ;   ಕುಲಾಲ ಸಂಘ ಮುಂಬಯಿ  93ನೇ ವಾರ್ಷಿಕ ಮಹಾಸಭೆ.

Mumbai News Desk

ಅಕ್ಟೋಬರ್ 26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ, ಸಾಹಿತ್ಯ ಚರ್ಚೆ

Mumbai News Desk

ಫೆ.25 : ಗೋರೆಗಾಂವ್ ಕರ್ನಾಟಕ ಸಂಘ 63ನೇ ನಾಡಹಬ್ಬ, ವಿಚಾರ ಗೋಷ್ಠಿ.

Mumbai News Desk