September 6, 2026
Mumbai News Kannada
ಮುಂಬಯಿ

ಬಿಲ್ಲವರ ಅಸೋಸಿಯೇಷನಿನ ಭಾಯಂದರ್ ಸ್ಥಳೀಯ ಕಚೇರಿ. ಹೊಸ ವರ್ಷದ ಗುರುಪೂಜೆ.





.

.

ಮುಂಬಯಿ, ಜ. 4: ಬಿಲ್ಲವರ ಅಸೋಸಿಯೇಷನಿನ ಭಾಯಿಂದರ್ ಸ್ಥಳೀಯ ಕಚೇರಿಯಲ್ಲಿ ನೂತನ ಕಾರ್ಯಕಾರೀ ಸಮಿತಿಯ ಮುಂದಾಳತ್ವದಲ್ಲಿ ಹೊಸ ವರುಷದ ಮೊದಲ ಗುರುವಾರದ ಗುರುಪೂಜೆಯು ವಿಜ್ರಂಭಣೆಯಿಂದ ಜರಗಿತು. ಸುಮಾರು 55 ಗುರು ಭಕ್ತರು ಗುರುಪೂಜೆ ನೀಡಿ ಸಹಕರಿಸಿದ್ದರು.ಆರಂಭದಲ್ಲಿ ಸದಸ್ಯರಿಂದ ಭಜನೆ ನಡೆದು ಫೋರ್ಟ್ ವೆಸ್ಟರ್ನ್ ಇಂಡಿಯಾ ಶನಿ ಮಹಾತ್ಮಾ ಪೂಜಾ ಸಮಿತಿಯ ಪ್ರಧಾನ ಅರ್ಚಕ ಸತೀಶ್ ಕೋಟ್ಯಾನ್ ರವರಿಂದ ಗುರುಪೂಜೆ, ಮಹಾ ಆರತಿ ನಡೆಯಿತು. ಕಚೇರಿಯ ಅರ್ಚಕ ರಾಕೇಶ್ ಅಮೀನ್ ಸಹಕರಿಸಿದ್ದರು.


ಈ ಸಂದರ್ಭದಲ್ಲಿ ಸತೀಶ್ ಕೋಟ್ಯಾನ್ ರವರು ಗುರುಸಂದೇಶದ ಬಗ್ಗೆ ವಿವರಿಸಿ ಹಿತವಚನ ನೀಡಿದರು. ಕೊನೆಯಲ್ಲಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಗುರುಭಕ್ತರು ಉಪಸ್ಥಿತರಿದ್ದರು.ಸ್ಥಳೀಯ ಕಚೇರಿಯ ಕಾರ್ಯಾದ್ಯಕ್ಷ ಶೇಕರ ರಾಮ ಪೂಜಾರಿ, ಗೌ.ಕಾರ್ಯದರ್ಶಿ ಜ್ಯೋತಿ ರತ್ನಾಕರ ಪೂಜಾರಿ ಹಾಗೂ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ಸಮಿತಿಯ ಅಭಿಮಾನಿಗಳು ಪೂಜಾಕಾರ್ಯ ಯಶಸ್ಸಿಗೆ ಸಹಕರಿಸಿದ್ದರು.

.



Related posts

ಶ್ರೀ ಜೈ ಭವಾನಿ ಶನೀಶ್ವರ ದೇವಸ್ಥಾನ, ಡೊಂಬಿವಲಿಯ ನೂತನ ಅಧ್ಯಕ್ಷರಾಗಿ ಸೂರಜ್ ಡಿ. ಸಪಲಿಗ ಆಯ್ಕೆ 

Mumbai News Desk

ಭಾರತ್ ಬ್ಯಾಂಕ್‌ನ ಗೋರೆಗಾಂವ್ ಪಶ್ಚಿಮ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆ

Mumbai News Desk

ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ : ಸೀರೆ, ವಜ್ರಾಭರಣ ಹಾಗೂ ಇನ್ನಿತರ ವಸ್ತುಗಳ ಪ್ರದರ್ಶನ ಮತ್ತು ಮಾರಾಟ,

Mumbai News Desk

ಬೆಸ್ಟ್ ಡಾಕ್ಟರ್ ಅವಾರ್ಡ್ ವಿಜೇತ ಡಾ. ಸದಾನಂದ ಶೆಟ್ಟಿಯವರಿಗೆಕರ್ನಾಟಕ ಸಂಘ ಸಯನ್ ನ ವತಿಯಿಂದ ಆತ್ಮೀಯ ಸನ್ಮಾನ.

Mumbai News Desk

ಮುಂಬಯಿ ಕನ್ನಡ ಸಂಘ : ಅರ್ಚನಾ ಪೂಜಾರಿಯವರಿಗೆ ಸನ್ಮಾನ

Mumbai News Desk

“ಅಂಬರ್ನಾಥ್ ಗೋಪಾಲ್ ಪೂಜಾರಿ” ಯವರಿಗೆ ಬಿಲ್ಲವರ ಅಸೋಸಿಯೇಷನ್, ಡೊಂಬಿವಲಿ ಸ್ಥಳೀಯ ಕಚೇರಿಯ ವತಿಯಿಂದ ಸನ್ಮಾನ

Mumbai News Desk