34 C
Mumbai
March 6, 2026
Mumbai News Kannada
ಪ್ರಕಟಣೆ

ಬ್ರಹ್ಮ ಶೀ ನಾರಾಯಣ ಗುರುಗಳ ದಂತ [ದಿವ್ಯ ದಂತ] ಪ್ರದರ್ಶನ






“ಒಂದೇ ಜಾತಿ, ಒಂದೇ ಮತ ಮತ್ತು ಒಂದೇ ದೇವರು” ಎಂಬ ಸತ್ಯವಾಕ್ಯವನ್ನು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿಯ ಬಳಿಕ ಅವರ ದಂತವನ್ನು [ದಿವ್ಯ ದಂತಮ್‌] ಜೋಪಾನವಾಗಿ ಇರಿಸಿಕೊಳ್ಳಲಾಗಿದ್ದು ಇದನ್ನು ಪ್ರತೀ ವರ್ಷ ಭಕ್ತರ ದರ್ಶನಕ್ಕಾಗಿ ಇರಿಸಲಾಗುತ್ತಿದೆ. ಈ ಬಾರಿ ರವಿವಾರ ಫೆಬ್ರವರಿ 2 ರಂದು ಬೆಳಗ್ಗೆ ಗಂಟೆ 8.30 ರಿಂದ ಸಾಯಂಕಾಲ ಗಂಟೆ 4-00 ರ ವರೆಗೆ ಇದನ್ನು ಭಕ್ತರ ವೀಕ್ಷಣೆಗಾಗಿ ನವಿ ಮುಂಬಯಿಯ ನೆರುಳ್‌ನ ಸೆಕ್ಟರ್‌ 20ರಲ್ಲಿರುವ ಗುರುದೇವಗಿರಿ ಮಂದಿರದ ಆವರಣದಲ್ಲಿ ಇರಿಸಲಾಗುತ್ತದೆ. ಶಿವಗಿರಿ ಆಶ್ರಮದ ಸ್ವಾಮಿಯವರ ನೇತೃತ್ವದಲ್ಲಿ ಇದರ ಆಯೋಜನೆ ಮಾಡಲಾಗಿದೆ. ಈ ದಂತವು ಅಮೇರಿಕಾದಲ್ಲಿರುವ ದಂತವೈದ್ಯರಾದ ಜಿ.ವೊ.ಪಾಲ್‌ ಇವರ ಬಳಿ ಇತ್ತು. ಅದನ್ನೀಗ ನೆರುಳ್‌ನ ಗುರುದೇವಗಿರಿ ಮಂದಿರದಲ್ಲಿ ಒಂದು ಪ್ರತ್ಯೇಕ ಕೊಣೆಯಲ್ಲಿ ಜೋಪಾನವಾಗಿ ಇರಿಸಲಾಗಿದೆ ಎಂದು ಮಂದಿರದ ಆಡಳಿತ ಮಂಡಳಿಯ ಸದಸ್ಯರೊಬ್ಬರು ನನಗೆ ತಿಳಿಸಿದರು. ಪ್ರದರ್ಶನದ ಜೊತೆಗೆ ಗರುದೇವಗಿರಿ ಮಂದಿರದಲ್ಲಿ ವಿವಿಧ ದಾರ್ಮಿಕ ಕಾರ್ಯಕ್ರಮಗಳೂ ಜರಗಲಿದ್ದು ಗುರುಭಕ್ತರು ಇದರ ಪ್ರಯೋಜನ ಪಡೆದು ಧನ್ಯರಾಗಬಹುದು.
-ಸೋಮನಾಥ ಎಸ್‌.ಕರ್ಕೇರ, 9819321186



Related posts

ಸೆ. 29ರಂದು ಮಲಾಡ್ ಕನ್ನಡ ಸಂಘ 23ನೇ ವಾರ್ಷಿಕ ಮಹಾಸಭೆ

Mumbai News Desk

ತುಳು ಸಂಘ ಬೊರಿವಲಿ ಸೆ. 28 ರಂದು 14ನೇ ವಾರ್ಷಿಕ ಮಹಾಸಭೆ

Mumbai News Desk

ಜ. 14 ರಂದು ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಜರಿಮರಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ.

Mumbai News Desk

ಡೊಂಬಿವಲಿ: ಜ. 17ರಂದು ಶ್ರೀ ಮಹಾವಿಷ್ಣು ಮಂದಿರದ 49ನೇ ವಾರ್ಷಿಕ ಸತ್ಯನಾರಾಯಣ ಪೂಜೆ, ಶನಿ ಪೂಜೆ

Mumbai News Desk

ಮಿಸ್ಟರ್/ಮಿಸ್/ಮಿಸೆಸ್ ಕರ್ನಾಟಕ ಸ್ಟೈಲ್ ಐಕಾನ್‌-2025: ಗ್ರ್ಯಾಂಡ್ ಫಿನಾಲೆ ಡಿ. 18 ರಂದು ನಿಶಿತಾ ಸೂರ್ಯಕಾಂತ್ ಸುವರ್ಣ ಆಯೋಜನೆಯಲ್ಲಿ ‘ಸೀಸನ್‌ 6’ ರ ಅಂತಿಮ ಹಂತ

Mumbai News Desk

ಬಂಟರ ಸಂಘ ಮುಂಬಯಿ ; ಮೀರಾ -ಭಾಯಂದರ್ ಪ್ರಾದೇಶಿಕ ಸಮಿತಿ  ಜೂ. 16 ರಂದು  ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ವಿದ್ಯಾರ್ಥಿವೇತನ , ದತ್ತು ಸ್ವೀಕಾರ, ವಿಧವಾವೇತನ ,ಅಂಗವಿಕಲರಿಗೆ ಆರ್ಥಿಕ ನೆರವು ವಿತರಣೆ

Mumbai News Desk