30 C
Mumbai
April 24, 2026
Mumbai News Kannada
ಪ್ರಕಟಣೆ

ಬ್ರಹ್ಮ ಶೀ ನಾರಾಯಣ ಗುರುಗಳ ದಂತ [ದಿವ್ಯ ದಂತ] ಪ್ರದರ್ಶನ






“ಒಂದೇ ಜಾತಿ, ಒಂದೇ ಮತ ಮತ್ತು ಒಂದೇ ದೇವರು” ಎಂಬ ಸತ್ಯವಾಕ್ಯವನ್ನು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿಯ ಬಳಿಕ ಅವರ ದಂತವನ್ನು [ದಿವ್ಯ ದಂತಮ್‌] ಜೋಪಾನವಾಗಿ ಇರಿಸಿಕೊಳ್ಳಲಾಗಿದ್ದು ಇದನ್ನು ಪ್ರತೀ ವರ್ಷ ಭಕ್ತರ ದರ್ಶನಕ್ಕಾಗಿ ಇರಿಸಲಾಗುತ್ತಿದೆ. ಈ ಬಾರಿ ರವಿವಾರ ಫೆಬ್ರವರಿ 2 ರಂದು ಬೆಳಗ್ಗೆ ಗಂಟೆ 8.30 ರಿಂದ ಸಾಯಂಕಾಲ ಗಂಟೆ 4-00 ರ ವರೆಗೆ ಇದನ್ನು ಭಕ್ತರ ವೀಕ್ಷಣೆಗಾಗಿ ನವಿ ಮುಂಬಯಿಯ ನೆರುಳ್‌ನ ಸೆಕ್ಟರ್‌ 20ರಲ್ಲಿರುವ ಗುರುದೇವಗಿರಿ ಮಂದಿರದ ಆವರಣದಲ್ಲಿ ಇರಿಸಲಾಗುತ್ತದೆ. ಶಿವಗಿರಿ ಆಶ್ರಮದ ಸ್ವಾಮಿಯವರ ನೇತೃತ್ವದಲ್ಲಿ ಇದರ ಆಯೋಜನೆ ಮಾಡಲಾಗಿದೆ. ಈ ದಂತವು ಅಮೇರಿಕಾದಲ್ಲಿರುವ ದಂತವೈದ್ಯರಾದ ಜಿ.ವೊ.ಪಾಲ್‌ ಇವರ ಬಳಿ ಇತ್ತು. ಅದನ್ನೀಗ ನೆರುಳ್‌ನ ಗುರುದೇವಗಿರಿ ಮಂದಿರದಲ್ಲಿ ಒಂದು ಪ್ರತ್ಯೇಕ ಕೊಣೆಯಲ್ಲಿ ಜೋಪಾನವಾಗಿ ಇರಿಸಲಾಗಿದೆ ಎಂದು ಮಂದಿರದ ಆಡಳಿತ ಮಂಡಳಿಯ ಸದಸ್ಯರೊಬ್ಬರು ನನಗೆ ತಿಳಿಸಿದರು. ಪ್ರದರ್ಶನದ ಜೊತೆಗೆ ಗರುದೇವಗಿರಿ ಮಂದಿರದಲ್ಲಿ ವಿವಿಧ ದಾರ್ಮಿಕ ಕಾರ್ಯಕ್ರಮಗಳೂ ಜರಗಲಿದ್ದು ಗುರುಭಕ್ತರು ಇದರ ಪ್ರಯೋಜನ ಪಡೆದು ಧನ್ಯರಾಗಬಹುದು.
-ಸೋಮನಾಥ ಎಸ್‌.ಕರ್ಕೇರ, 9819321186



Related posts

ಗುರುನಾರಾಯಣ ಯಕ್ಷಗಾನ ಮಂಡಳಿಯ ಭಾಗವತರಾದ ಗಂಗಾಧರ್ ಸುವರ್ಣ ಅವರ ಕಲಾ ಸೇವೆಗೆ 25 ವರ್ಷ, ಆಗಸ್ಟ್ 2ರಂದು ”ಯಕ್ಷ ಸಂಭ್ರಮ’

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಸಾವರ್ಕರ್ ನಗರ್ -ಥಾಣೆ : ಎ. 13ಕ್ಕೆ ಮಾಸಿಕ ಸಂಕ್ರಮಣ ಪೂಜೆ, ಶ್ರೀ ಶನೀಶ್ವರ ಗ್ರಂಥ ಪಾರಾಯಣ

Mumbai News Desk

ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿ ಭಾಯಂದರ್ ಪೂರ್ವ : ಎ. 12ರಂದು ವಾರ್ಷಿಕ ಶ್ರೀ ಮಹಾದೇವಿ ಮಹಾಪೂಜೆ

Mumbai News Desk

ಮಾ. 23,  ತುಳು ಸಂಘ, ಬೋರಿವಲಿ, 13ನೇ ವಾರ್ಷಿಕೋತ್ಸವ,  ಸಾಂಸ್ಕೃತಿಕ ವೈಭವ, ನಾಟಕ ಪ್ರದರ್ಶನ

Mumbai News Desk

ಉಬಾರಮಣ್ಣು ಶ್ರೀ ಕೋಡ್ಬಬ್ಬು ದೈವಸ್ಥಾನ ಕೊಳುವೈಲು, ಪಾವಂಜೆ : ಎ. 4 ಹಾಗೂ ಎ. 5ರಂದು ವಾರ್ಷಿಕ ನೇಮೋತ್ಸವ

Mumbai News Desk

ಶ್ರೀ ದುರ್ಗಾ ಭಜನಾ ಸೇವಾ ಮಂಡಳ, ಜ.21ಕ್ಕೆ 17ನೇ ವಾರ್ಷಿಕ ಮಹಾಪೂಜೆ.

Mumbai News Desk