28.4 C
Mumbai
March 7, 2026
Mumbai News Kannada
ಪ್ರಕಟಣೆ

ಪೆ 9: ಮೀರಾ – ಡಹಾಣು ಬಂಟ್ಸ್ ಕ್ರೀಡೋತ್ಸವ 2025





ಮೀರಾ ರೋಡ್ ನಿಂದ ಡಹಾಣು ತನಕದ ಬಂಟ ಭಾಂದವರ ಅಶೋತ್ತರಗಳಿಗೆ ಸ್ಪಂದಿಸಲು 2009 ರಲ್ಲಿ ಸ್ಥಾಪನೆಯದ ಮೀರಾ – ಡಹಾಣು ಬಂಟ್ಸ್ (ರಿ ) ಇದರ 3 ನೇ ವರ್ಷದ ಕ್ರೀಡೋತ್ಸವ – 2025, ಫೆ 09 ರಂದು ಆದಿತ್ಯವಾರ, ಹಳೆ ವಿವಾ ಕಾಲೇಜು ಗ್ರೌಂಡ್ ವಿರಾರ್ ಪಶ್ಚಿಮ ಇಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಈ ಕ್ರೀಡಾಕೂಟದಲ್ಲಿ ಮೀರಾ ರೋಡ್ ನಿಂದ ಡಹಾಣು ತನಕ ಎಲ್ಲಾ ಬಂಟ ಭಾಂದವರಿಗೆ ಭಾಗವಹಿಸಲು ಅವಕಾಶ ಕಲ್ಪಿಸುವ ಸಲುವಾಗಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಎಲ್ಲಾ ಕ್ರೀಡಾಳುಗಳಿಗೆ ಕ್ರೀಡೋತ್ಸವಕ್ಕೆ ಆಗಮಿಸಲು ಸುಲಭವಾಗಲು ವಿರಾರ್ ರೈಲ್ವೆ ಸ್ಟೇಷನ್ ನಿಂದ ಬಹಳ ಹತ್ತಿರದಲ್ಲಿ ಇರುವ ವಿಶಾಲವಾದ ಆಟದ ಮೈದಾನ ಹೊಂದಿರುವ ಹಳೆ ವಿವಾ ಕಾಲೇಜು ಸಂಸ್ಥೆಯ ಮೈದಾನದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಹಮ್ಮಿಕೊಳ್ಳಲು ನಿರ್ಧರಿಸಿರುತ್ತಾರೆ. ಈ ಕ್ರೀಡಾ ಕೂಟವು ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ್ ಎಂ ಹೆಗ್ಡೆ ಯವರ ಅದ್ಯಕ್ಷತೆಯಲ್ಲಿ ಗೌರವಧ್ಯಕ್ಷರಾದ ವಿರಾರ್ ಡಾ.ಶಂಕರ ಬಿ ಶೆಟ್ಟಿಯವರ ಉಪಸ್ಥಿತಿಯಲ್ಲಿ ಮುಂಬೈ ಮತ್ತು ಸ್ಥಳೀಯ ಗೌರನ್ವಿತ ಅತಿಥಿಗಳ ಉಪಸ್ಥಿತಿಯಲ್ಲಿ ಬೆಳ್ಳಿಗೆ 8 ಕ್ಕೆ ಪ್ರಾರಂಭ ಗೊಂಡು ಸಂಜೆ 6 ಗಂಟೆ ಗೆ ಸಮಾರೋಪ ಸಮಾರಂಭದೊಂದಿಗೆ ಕ್ರೀಡಾಕೂಟ ಮುಕ್ತಾಯಗೊಳ್ಳಲಿದೆ.
ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಬಂಟ ಸಮುದಾಯದ ನಾಯಕರು ಸ್ಥಳೀಯ ರಾಜಕೀಯ ನೇತಾರರು. ಉದ್ಯಮಿಗಳು ಮತ್ತು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿರುವರು.
ಈ ಕ್ರೀಡೋತ್ಸವಕ್ಕೆ ಕ್ರೀಡಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮೀರಾ ಡಹಾಣು ಬಂಟ್ಸ್ ಕ್ರೀಡೋತ್ಸವ- 2025ನ್ನು ಯಶಸ್ವಿ ಗೊಳಿಸಬೇಕಾಗಿ ಗೌರವಧ್ಯಕ್ಷರು ವಿರಾರ್ ಶಂಕರ್ ಶೆಟ್ಟಿ,ಅಧ್ಯಕ್ಷರು ಪ್ರಕಾಶ್ ಹೆಗ್ಡೆ, ಉಪಾಧ್ಯಕ್ಷರಾದ ಶಂಕರ್ ಆಳ್ವ ಕರ್ನೂರು,
ಸಂಚಾಲಕ, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ
ಮುಕೇಶ್ ಶೆಟ್ಟಿ, ಟ್ರಸ್ಟಿಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತಾ ಶೆಟ್ಟಿ, ಮೀರಾ – ಡಹಾಣು ಬಂಟ್ಸ್ ನ ವಲಯದ ಕಾರ್ಯಧ್ಯಕ್ಷರು, ವಲಯದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಹಾಗೂ ಸಂಸ್ಥೆಯ ಗೌರವ ಪ್ರದಾನ ಕಾರ್ಯದರ್ಶಿ ಸುಕೇಶ್ ವಿ ರೈ ತಿಳಿಸುತ್ತಿದ್ದಾರೆ.



Related posts

ಕರ್ನಾಟಕ ಸಮಾಜ ಸೂರತ್ : ನ. 24ರಂದು ಕರ್ನಾಟಕ ರಾಜ್ಯೋತ್ಸವ

Mumbai News Desk

ಫೆ. 02 ರಂದು ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ರಕ್ತದಾನ ಹಾಗೂ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ, ಥಾಣೆ : ಫೆಬ್ರವರಿ 14 ರಂದು 19ನೇ ವರ್ಷದ ಶ್ರೀ ಶನೀಶ್ವರ ಮಹಾಪೂಜೆ

Mumbai News Desk

ಇತಿಹಾಸ ಪ್ರಸಿದ್ಧ ಕಾಪು ಪಿಲಿಕೋಲಕ್ಕೆ ದಿನ ನಿಗದಿ

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಜೂ. 8 ರಂದು ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯಿಂದ ವಿದ್ಯಾರ್ಥಿವೇತನ,  ವಿಧವೆಯರಿಗೆ ಮತ್ತು ವಿಕಲ ಚೇತನರಿಗೆ ಧನ ಸಹಾಯ 

Mumbai News Desk

ಅಗಸ್ಟ್ 23, ತುಲುವೆರ ಕಲ(ರಿ), ಸಂಸ್ಥೆಯ ಊರು ಮತ್ತು ಮುಂಬೈಯ ಜಂಟಿ ಆಯೋಜನೆಯಲ್ಲಿ ಬಂಟರ ಸಂಘ ಕುರ್ಲಾದ ಎನೆಕ್ಸ್ ಹಾಲ್‌ನಲ್ಲಿ ‘ತುಲುವೆರ ಮಿನದನ’ ಕಾರ್ಯಕ್ರಮ

Mumbai News Desk