30.9 C
Mumbai
June 8, 2026
Mumbai News Kannada
ಸುದ್ದಿ

ಬೊಯಿಸರ್ ಸೋಮೇಶ್ವರ ಮಂದಿರದ 15 ನೆಯ ವರ್ಧಂತ್ಯುತ್ಸವ ಸಂಪನ್ನ.





ಚಿತ್ರ ವಿವರ : ಪಿ.ಆರ್.ರವಿಶಂಕರ್, ಬೊಯಿಸರ್ : 05.03.2025

ಬೊಯಿಸರ್  ಪರಿಸರದಲ್ಲಿನ    ಧಾರ್ಮಿಕ ಮುಂದಾಳು  ಹಾಗೂ ತುಳುಕನ್ನಡಿಗರ ಪ್ರತಿಷ್ಟಿತ  ಮೀರಾ ಡಹಾಣೂ ಬಂಟ್ಸ್ ( ರಿ) ಸಂಸ್ಥೆಯ ಪಾಲ್ಘರ್ ಬೊಯಿಸರ್ ವಲಯದ ಮಾಜಿ ಅದ್ಯಕ್ಷರಾದ ಶ್ರೀ ವಿಜಯ್ ಶೆಟ್ಟಿಯವರ ಸಮರ್ಥ  ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಸ್ಥಳೀಯ ಶ್ರೀ ಸೋಮೇಶ್ವರ ಮಂದಿರದಲ್ಲಿ ಪ್ರತೀ ವರ್ಷವೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳು ಜರಗುತ್ತಾ ಬಂದಿವೆ.              

ಬೊಯಿಸರ್ ಪೂರ್ವದ ಖೈರಾಪಾಡಾದ ಮಹಾದೇವ್ ನಗರದಲ್ಲಿನ  ಶ್ರೀ ಸೋಮೇಶ್ವರ್ ಮಂದಿರದಲ್ಲಿ ಇದೇ 03 ಮಾರ್ಚ್ 2025 ನೆಯ ಸೋಮವಾರದಂದು ಮಂದಿರದ  15 ನೆಯ ವಾರ್ಷಿಕ ವರ್ಧಂತ್ಯುತ್ಸವ ಕಾರ್ಯಕ್ರಮವು ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಿತು.

     ಪ್ರಾತಃಕಾಲ ಗಣಹೋಮ ಮತ್ತು ಶ್ರೀ ಗಣೇಶಪೂಜೆ ಯೊಂದಿಗೆ ಕಾರ್ಯಕ್ರಮ ಆರಂಭವಾಗಿ ನವ ಅಭಿಷೇಕ ಮತ್ತು ನಾಗ ಪೂಜೆಯ ಬಳಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಜರಗಿತು. ಜೊತೆಗೆ ಸ್ಥಳೀಯ ಭಜನಾ ಮಂಡಳಿಯವರ ವತಿಯಿಂದ ಭಕ್ತಿಪ್ರಧಾನ ಗೀತೆಗಳು , ಭಜನಾ ಕಾರ್ಯಕ್ರಮವಿತ್ತು.

ಮದ್ಯಾಹ್ನ 12.30 ರ ಮಹಾ ಮಂಗಳ ಆರತಿಯ ಬಳಿಕ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯು ಜರಗಿತು.

ವೈದಿಕ  ಪೂಜಾ ವಿಧಿವಿಧಾನಗಳು ಡಾ •ಎಮ್. ಜೆ.ಪ್ರವೀಣ್ ಭಟ್ ( ಅಂತರ ರಾಷ್ಟ್ರೀಯ ಆಧ್ಯಾತ್ಮಿಕ ಗುರು) ಇವರ ನೇತೃತ್ವ ಹಾಗೂ ಪುರೋಹಿತ ಶ್ರೀನಿವಾಸ ಉಡುಪ ಐರೋಳಿ ಇವರ ಸಹಕಾರದಲ್ಲಿ ಜರಗಿದವು.

  ಕಾರ್ಯಕ್ರಮದಲ್ಲಿ ಸೋಮೇಶ್ವರ್ ಮಂದಿರ್ ಮಿತ್ರಮಂಡಳ್ ಮತ್ತು ಮಹಿಳಾ ವಿಭಾಗದ ಸದಸ್ಯರು , ಸ್ಥಳೀಯ ಭಕ್ತಾಭಿಮಾನಿಗಳು , ವಿವಿಧ ಸಂಸ್ಥೆಯ ಪದಾಧಿಕಾರಿಗಳು , ಪಾಲ್ಘರ್, ಬೊಯಿಸರ್ ಹಾಗೂ ಡಹಾಣೂ ವಿನ ವಿವಿಧ ಸ್ಥಳಗಳಿಂದ ಆಗಮಿಸಿದ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

✒️ ಚಿತ್ರ ಮತ್ತು ಸುದ್ದಿ : ಪಿ.ಆರ್.ರವಿಶಂಕರ್, ಡಹಾಣು 8483980035



Related posts

ಕುಲಶೇಖರ: ಶ್ರೀ ವೀರನಾರಾಯಣ ದೇವಸ್ಥಾನದ ಕುಂಭ ಮಹೋತ್ಸವ ಸಂಪನ್ನ

Mumbai News Desk

ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ – ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಗೆ ಅರ್ಜಿ ಸಲ್ಲಿಸುವುದು ಹೇಗೆ?

Mumbai News Desk

*ಶ್ರೀ ವೀರನಾರಾಯಣ ದೇವಸ್ಥಾನದ ಕುಂಭ ಮಹೋತ್ಸವ, ಸೇವಕರ್ತ ಪ್ರೇಮಾನಂದ ಕುಲಾಲ್ ವರಿಗೆ ಗೌರವ,

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಸುಳ್ಳು ಸುದ್ದಿಗಳಿಗೆ ಸ್ಪಷ್ಟಿಕರಣ:

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ   ಮುಖ್ಯಮಂತ್ರಿ  ದೇವೇಂದ್ರ ಫಡ್ನವಿಸ್  ಗೆ ಆಹ್ವಾನ

Mumbai News Desk

ಅಜಿತ್ ಪವಾರ್ ನಿಧನ : ಮಹಾರಾಷ್ಟ್ರ ಸರ್ಕಾರದ ಅಧಿಕೃತ ಪ್ರಕಟಣೆ

Mumbai News Desk