September 6, 2026
Mumbai News Kannada
ಪ್ರಕಟಣೆ

ಕರ್ನಾಟಕ ಸಂಘ ಕಲ್ಯಾಣ: ಮಾ. 9ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ






ಕಲ್ಯಾಣ (ಪ):3 ಮಾರ್ಚ್ 25 : ಸಂಘದ ಪ್ರಥಮ ಮಹಿಳಾಧ್ಯಕ್ಷೆ ದಿ.ಶಾರದ ಭಾಸ್ಕರ ಶೆಟ್ಟಿಯವರ ಪ್ರೇರಣೆಯಿಂದ ಕಳೆದ ಸುಮಾರು 21 ವರ್ಷಗಳಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಾರ್ಷಿಕ ಕಾರ್ಯಕ್ರಮವಾಗಿ ನಡೆಸುತ್ತಾ ಬಂದಿದ್ದು ಈ ವರ್ಷ ಇದೇ ಬರುವ 9 ಮಾರ್ಚ್ ರಂದು ಮುರ್ಬಾಡ್ ರಸ್ತೆ ಕಲ್ಯಾಣ ಪಶ್ಚಿಮದ ಬ್ರಾಹ್ಮಣ ಸೊಸೈಟಿ ಸಭಾಗ್ರಹದಲ್ಲಿ ಸಂಜೆ 5 ರಿಂದ ಆಚರಿಸಲಿದ್ದೇವೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಂಘಟಕಿ ಹಾಗೂ ಸಮಾಜ ಸೇವಕಿ ಶ್ರೀಮತಿ ಕವಿತಾ ಮಿಶ್ರಾ ಹಾಗೂ ಗೌರವ ಅತಿಥಿಯಾಗಿ ಯೋಗ ಪ್ರಚಾರಕಿ ಶ್ರೀಮತಿ ವೀಣಾ ನಿಮ್ಕರ್ ರವರು ಆಗಮಿಸಲಿದ್ದಾರೆ.ಈ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಶ್ರೀಮತಿ ಮಹಾಲಕ್ಷ್ಮಿ ತೋರ್ವಿ ಯವರನ್ನು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಪ್ರದ್ನ್ಯಾ ಬಾಬನ್ನವರ್ ರವರನ್ನು ತಮ್ಮ ಅಪ್ರತಿಮ, ನಿಸ್ವಾರ್ಥ ಸೇವೆಗಾಗಿ ಸತ್ಕರಿಸಲಾಗುವುದು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಎಲ್ಲಾ ಮಹಿಳೆಯರು ಹಾಗೂ ಮಹನೀಯರು ಭಾಗವಹಿಸಿ ಕಾರ್ಯಕ್ರಮವನ್ನು ಚಂದಕಾಣಿಸಿ ಕೊಡಬೇಕಾಗಿ ಸಂಘದ ಅಧ್ಯಕ್ಷ ಕೆ.ಎನ್.ಸತೀಶ್, ಉಪಾಧ್ಯಕ್ಷರಾದ ಜಯಂತಿ ಹೆಗ್ಡೆ ಹಾಗೂ ವಿಜಯ್ ಪೈ,ಮಹಿಳಾಧ್ಯಕ್ಷೆ ವೀಣಾ ಕಾಮತ್, ಗೌರವ ಕಾರ್ಯದರ್ಶಿ ಜಯಂತ ದೇಶಮುಖ ಹಾಗೂ ಸಮಸ್ತ ಕಾರ್ಯಕಾರಿ ಸಮಿತಿ ಸದಸ್ಯರು ಈ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.



Related posts

ಸೆ.20 : ಮಾತೃಭೂಮಿ ಕೋ -ಆಪರೇಟಿವ್ ಕ್ರೆಡಿಟ್ ಸೊಸೈಟಿ ಇದರ 37ನೇ ವಾರ್ಷಿಕ ಮಹಾಸಭೆ

Mumbai News Desk

ಸಾಂತಕ್ರೂಸ್   ಶ್ರೀ ಮಂತ್ರ ದೇವಿ   ದೇವಸ್ಥಾನ ವಾರ್ಷಿಕ ಮಹಾಪೂಜೆ.

Mumbai News Desk

ಅಖಿಲ ಕರ್ನಾಟಕ ಜೈನ ಸಂಘ, ಮುಂಬೈ ನ.26ಕ್ಕೆ ರಜತ ಮಹೋತ್ಸವ ಸಮಾರಂಭ

Mumbai News Desk

ಮಾ. 31 : ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಿಂದ ಕಾಪುವಿನವರೆಗೆ ಭಜನಾ ಸಂಕೀರ್ತನಾ ಪಾದಯಾತ್ರೆ

Mumbai News Desk

ಶ್ರೀ ಕ್ಷೇತ್ರ ದತ್ತ ಜಗದಂಬಾ ದೇವಸ್ಥಾನ, ‘ಬಾಪ್ಟಿಸ್ಟ್‌ವಾಡಿ’ ಅಂಧೇರಿ ಪೂರ್ವ : ಪುನರ್ ನಿರ್ಮಾಣ, ಹೊಸ ಮೂರ್ತಿ ಸ್ಥಾಪನೆ ಹಾಗೂ ಬ್ರಹ್ಮ ಕಲಶೋತ್ಸವ ನಿಮಿತ್ತ ಮನವಿ ಪತ್ರ ಬಿಡುಗಡೆ

Mumbai News Desk

ನ.19 ರಂದು ಪುಣೆಯಲ್ಲಿ ಸುವರ್ಣಯುಗ ಪುಸ್ತಕ ಬಿಡುಗಡೆ, ಭಾರತ್ ಬ್ಯಾಂಕ್ ನ ನೂತನ ನಿರ್ದೇಶಕರುಗಳಿಗೆ ಸನ್ಮಾನ

Mumbai News Desk