30 C
Mumbai
April 24, 2026
Mumbai News Kannada
ಪ್ರಕಟಣೆ

ಜೂನ್ 15: ಶ್ರೀ ಭುವನೇಶ್ವರಿ ಸೇವಾ ಸಮಿತಿ ಕೋಟೆ, ಮುಂಬಯಿ – 42ನೇ ವಾರ್ಷಿಕ ಮಹಾಪೂಜೆ





ಕೋಟೆ ಮುಂಬಯಿಯಲ್ಲಿ ಶ್ರೀ ಭುವನೇಶ್ವರಿ ಅಮ್ಮನ ಆರಾಧನೆಯೊಂದಿಗೆ ಸಾಮಾಜಿಕ ಕ್ಷೇತ್ರದಲ್ಲೂ ಸಕ್ರಿಯವಾಗಿರುವ ಶ್ರೀ ಭುವನೇಶ್ವರಿ ಸಮಿತಿಯ ಆಶ್ರಯದಲ್ಲಿ 42ನೇ ವಾರ್ಷಿಕ ಮಹಾಪೂಜೆ (ಮೂರ್ತಿ ಪ್ರತಿಷ್ಠಾ ಮಹೋತ್ಸವ ) ಜೂನ್ 15ರಂದು, ರವಿವಾರ ಕೋಟೆ ಮುಂಬೈ ಮಿಂಟ್ ರೋಡ್ ನ ಕಾಂಜಿ ಕೇಷ್ಟಿ ಭಾಟಿಯಾ ವಾಡಿ ಸಭಾಗ್ರಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಅಂದು ನಡೆಯಲಿರುವ ಕಾರ್ಯಕ್ರಮಗಳು :

ಬೆಳಿಗ್ಗೆ ಗಣಪತಿ ಹೋಮ, ಕಲಶ, ಸುವರ್ಣ ವಸ್ತ್ರ ಪೂಜೆ.
ಬೆಳಿಗ್ಗೆ 10.30 ಗಂಟೆಗೆ ಭಜನೆ ( ವಿದ್ಯಾದಾಯಿನಿ ಭಜನಾ ಮಂಡಳಿ ಕೋಟೆ, ಇವರಿಂದ )
ಬಳಿಕ ಮಹಾ ಅಭಿಷೇಕ, ಮಂಗಳಾರತಿ
12.45 ಗಂಟೆಗೆ : ಶ್ರೀ ದೇವಿ ಆವೇಶ
1.30ರಿಂದ ತೀರ್ಥ ಪ್ರಸಾದ, ಅನ್ನ ಸಂತರ್ಪಣೆ

ಸಂಜೆ 4ರಿಂದ ಧಾರ್ಮಿಕ ಸಭೆ :

ಅಧ್ಯಕ್ಷತೆ – ಡಾ. ಪ್ರಕಾಶ್ ಮೂಡಬಿದ್ರಿ ( ಅಧ್ಯಕ್ಷರು, ಶ್ರೀ ಭುವನೇಶ್ವರಿ ಸೇವಾ ಸಮಿತಿ )
ಆಶೀರ್ವಚನ : ರಾಜೇಶ್ ಭಟ್ (ಪ್ರಧಾನ ಅರ್ಚಕರು, ದೇವಿ ಪಾತ್ರಿ)
ಮುಖ್ಯ ಅತಿಥಿ – ಎಲ್ ವಿ ಅಮೀನ್ ( ಗೌರವ ಅಧ್ಯಕ್ಷರು,ಬಿಲ್ಲವರ ಎಸೋಸಿಯೇಷನ್ ಮುಂಬೈ )
ಗೌರವ ಅತಿಥಿಗಳು :
ಚಂದ್ರಶೇಖರ್ ಬೆಲ್ಚಡ( ಉದ್ಯಮಿ, ಮಾಜಿ ಅಧ್ಯಕ್ಷರು, ತೀಯಾ ಸಮಾಜ ಮುಂಬೈ )
ನಾರಾಯಣ ಆರ್ ಪೂಜಾರಿ (ಮಾಲಕರು, ಸುಮಂಗಲ ಮೆಶಿನರಿಸ್ )
ಅಡ್ವಕೇಟ್ ರಾಜೀವ ವರ್ಮ( ನ್ಯಾಯಾಧೀಶರು ಹೈಕೋರ್ಟ್ )
ಸನ್ಮಾನ :
ಹರೀಶ್ ಜಿ ಅಮೀನ್ ( ಅಧ್ಯಕ್ಷರು, ಬಿಲ್ಲವರ ಎಸೋಸಿಯೇಷನ್, ಮುಂಬೈ )
ಪುರುಷೋತ್ತಮ ಕೋಟ್ಯಾನ್( ಅಧ್ಯಕ್ಷರು, ವಿದ್ಯಾದಾಯಿನಿ ಸಭಾ ಮುಂಬೈ )
ಪ್ರಭಾಕರ್ ಬೆಳುವಾಯಿ (ಸ್ಥಾಪಕರು, ನಮನ ಫ್ರೆಂಡ್ಸ್ )
ಸಂಜೀವ ಬಂಗೇರ ಮತ್ತು ಸುಮಿತ್ರ ಎಸ್ ಬಂಗೇರ (ಉಪಾಧ್ಯಕ್ಷರು, ಶ್ರೀ ಭುವನೇಶ್ವರಿ ಸೇವಾ ಸಮಿತಿ )

ಸಂಜೆ 6.30ಕ್ಕೆ ಶ್ರೀ ದೇವರಿಗೆ ಮಹಾಪೂಜೆಯೊಂದಿಗೆ ವಾರ್ಷಿಕ ಪೂಜೆ ಸಂಪನ್ನಗೊಳ್ಳಲಿದೆ.

ಶ್ರೀ ಭುವನೇಶ್ವರಿ ಸೇವಾ ಸಮಿತಿಯ 42ನೇ ವಾರ್ಷಿಕ ಮಹಾಪೂಜೆಯಲ್ಲಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಭುವನೇಶ್ವರಿ ಮಾತೆಯ ಕೃಪೆಗೆ ಪಾತ್ರರಾಗುವಂತೆ ಸಮಿತಿಯ ಮುಖ್ಯ ಅರ್ಚಕ ಮತ್ತು ದೇವಿ ಪಾತ್ರ ರಾಜೇಶ್ ಭಟ್, ಗೌರವಾಧ್ಯಕ್ಷ ಆರ್ ಕೆ ಮುಲ್ಕಿ, ಅಧ್ಯಕ್ಷ ಡಾ.ಪ್ರಕಾಶ್ ಮೂಡಬಿದ್ರಿ, ಕಾರ್ಯದರ್ಶಿ ಅಶೋಕ್ ಸೈನಿ, ಕೋಶಾಧಿಕಾರಿ ಭಾಸ್ಕರ್ ಪೂಜಾರಿ, ಮತ್ತು ಎಲ್ಲ ಸದಸ್ಯರು ವಿನಂತಿಸಿದ್ದಾರೆ.



Related posts

ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ – ಡಿ. 1ರಂದು ವಾರ್ಷಿಕ ಕ್ರೀಡಾಕೂಟ.

Mumbai News Desk

ಶ್ರೀ ಗುರು ನಾರಾಯಣ ಭಜನಾ ಮಂಡಳಿ ಮೀರಾ-ಭಾಯಂದರ್ : ಸೆ. 14ರಂದು ಶ್ರೀ ಶನಿಗ್ರಂಥ ಪಾರಾಯಣ ಮತ್ತು 171ನೇ ಗುರು ಜಯಂತಿ ಆಚರಣೆ

Mumbai News Desk

ಮುಂಬಯಿ ಕನ್ನಡ ಸಂಘ : ಜ.18 ರಂದು ಶ್ರೀ ಪುರಂದರದಾಸರ ಆರಾಧನೆ

Mumbai News Desk

ಮಾ.15 ರಂದು ಮಹಾನಗರ ಕನ್ನಡ ಸಂಸ್ಥೆ ಡೊಂಬಿವಲಿ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆ

Mumbai News Desk

ಜ. ‌26 ರಂದು” ‘ಮುಲುಂಡ್  ಪಶ್ಚಿಮದಲ್ಲಿ *ಲಗ್ನಾ  ಪಿಶ್ಶ್ಯೆ’  ,ಕೊಂಕಣಿ ನಾಟಕ

Mumbai News Desk

ಶ್ರೀ ಕೋಡ್ಬಬ್ಬು ದೈವಸ್ಥಾನ ಬಸ್ತಿಪಡ್ಪು, ಹೆಜಮಾಡಿ : ಎ. 3 ಹಾಗೂ ಎ. 4ರಂದು ವಾರ್ಷಿಕ ನೇಮೋತ್ಸವ

Mumbai News Desk