July 23, 2026
Mumbai News Kannada
ಸುದ್ದಿ

ಮುಂಬೈ ಕನ್ನಡತಿ ನ್ಯಾ. ಮೀನಾಕ್ಷಿ ಅಚಾರ್ಯರಿಗೆ ಗ್ಲೋಬಲ್ ಲೀಗಲ್ ಅವಾರ್ಡ್ಸ್ ನಿಂದ, “ವರ್ಷದ ವ್ಯವಸ್ಥಾಪಕಿ ಪಾಲುದಾರ ಮಹಿಳೆ” ಪ್ರಶಸ್ತಿ.







ಮುಂಬಯಿ : ಕಾನೂನು ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಮಡಿದ ET ಗ್ಲೋಬಲ್ ಲೀಗಲ್ ಅವಾರ್ಡ್ಸ್ 2025 ರ “ವರ್ಷದ ವ್ಯವಸ್ಥಾಪಕಿ ಪಾಲುದಾರ – ಮಹಿಳೆ” ಪ್ರಶಸ್ತಿಯನ್ನು ಮಹಾನಗರದ ಅಂಧೇರಿ ಪೂರ್ವದ ಖ್ಯಾತ ವಕೀಲೆ ಕನ್ನಡತಿ ನ್ಯಾ. ಮೀನಾಕ್ಷಿ ಪದ್ಮನಾಭ ಅಚಾರ್ಯ ಪಡೆದಿದ್ದಾರೆ.

ಮಾರ್ಚ್ 5, 2025 ರಂದು ಮುಂಬಯಿಯಲ್ಲಿ ನಡೆದ ET ಗ್ಲೋಬಲ್ ಲೀಗಲ್ ಕನ್ವೆನ್ಷನ್ 2025 ರಲ್ಲಿ ಈ ಪ್ರಶಸ್ತಿಯನ್ನು ಭಾರತದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಬಿ.ಎನ್. ಸಾಯಿಕೃಷ್ಣ ಅವರು ಪ್ರಧಾನಿಸಿದರು.

ಕಾನೂನು ಕ್ಷೇತ್ರದಲ್ಲಿ 20 ವರ್ಷಕ್ಕಿಂತಲೂ ಅಧಿಕ ಕಾಲದ ಅನುಭವವನ್ನು ಪಡೆದಿರುವ ನ್ಯಾ. ಮೀನಾಕ್ಷಿ ಅಚಾರ್ಯ ಅವರು ಈಗಾಗಲೇ ಪ್ರತಿಷ್ಠಿತ ಪೋರ್ಬಸ್ ಇಂಡಿಯಾ ಸೇರಿ ಹಲವಾರು ಉನ್ನತ ಮಟ್ಟದ ಪ್ರಶಸ್ತಿ, ಪುರಸ್ಕಾರ ಹಾಗೂ ಸನ್ಮಾನಗಳನ್ನು ದೇಶ ವಿದೇಶಗಳಲ್ಲೂ ಪಡೆದಿದ್ದು ಕಳೆದ ಸುಮಾರು 15 ವರ್ಷಗಳಿಂದ ಮುಂಬಯಿಯ ಅಂಧೇರಿ ಪೂರ್ವದ ಸಹರ್ ನಲ್ಲಿ ಅರ್.ಎಮ್. ಎ. ಲೀಗಲ್ ನ ವ್ಯವಸ್ಥಾಪಕ ಪಾಲುದಾರರಾಗಿದ್ದಾರೆ. ಇವರ ಸಂಸ್ಥೆಯು ದೆಹಲಿ, ಬೆಂಗಳೂರು, ಪುಣೆ, ಹೈದರಾಬಾದ್, ಚಿನ್ನೈ, ಮತ್ತು ಯುನೈಟೆಡ್ ಕಿಂಗ್ ಡಂನಲ್ಲಿ ಖಚೇರಿಯನ್ನು ಹೊಂದಿದೆ. ವಿಲೀನತೆ, ಸ್ವಾಧೀನತೆ, ಖಾಸಗಿ ಷೇರುಗಳು ಮತ್ತು ಹೂಡಿಕೆಗಳು, ವಿದೇಶಿ ಹೂಡಿಕೆ ನೀತಿಗಳು, ಕಾರ್ಪೊರೇಟ್ ಮತ್ತು ವಾಣಿಜ್ಯ ವಹಿವಾಟುಗಳು, ಬಂಡವಾಳ ಮಾರುಕಟ್ಟೆ, ಇ-ವಾಣಿಜ್ಯ, ರಿಯಲ್ ಎಸ್ಟೇಟ್, ಮೂಲಸೌಕರ್ಯ, ಉದ್ಯೋಗ ಮತ್ತು ಕಾರ್ಮಿಕ ವಿಷಯಗಳಲ್ಲಿ ಇವರು ಪರಿಣಿತರು.

ಬಂಟ್ವಾಳ ತಾಲೂಕಿನ ಕುರಿಯಾಲ ಗ್ರಾಮ
ಸೀತಾರಾಮ ಬಾಬು ಆಚಾರ್ಯ ಮತ್ತು ಶೋಭಾ ಸೀತಾರಾಮ ಆಚಾರ್ಯ ದಂಪತಿಯ ಸುಪುತ್ರಿಯಾದ ಇವರು ಮೂಡಬಿದ್ರೆಯ ಇರುವೆಲ್ ನ ಪದ್ಮನಾಭ ರಾಮಣ್ಣ ಆಚಾರ್ಯ ಅವರ ಪತಿ.
ಪುತ್ರ ಧ್ರುವ ಆಚಾರ್ಯ ಬೆಂಗಳೂರಿನಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದಾರೆ.
ಇವರನ್ನು ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್, ಜೈ ಶ್ರೀ ವಿಶ್ವಕರ್ಮ ಭಜನಾ ಸಂಘ, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯು ಸನ್ಮಾನಿಸಿದೆ.



Related posts

ಅರುಣೋದಯ ಎಜುಕೇಶನ್ ಟ್ರಸ್ಟ್‌ನ ‘ಸ್ಟಾರ್ ಕಿಡ್ಸ್’ ಶಾಲಾ ವಾರ್ಷಿಕೋತ್ಸವ ಸಂಭ್ರಮ

Mumbai News Desk

ಸಾಮಾಜಿಕ ಹೋರಾಟಗಾರ ಅಣ್ಣ ಹಜಾರೆ ಅವರನ್ನು ಭೇಟಿಯಾದ ರಾಜೇಂದ್ರ. ವಿ. ಶೆಟ್ಟಿ,

Mumbai News Desk

ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು, ಯತಿವರ್ಯರಾದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ಮುಂಬಯಿ ಭೇಟಿ.

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (06/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನನೂತನ ಗುಡಿಯೊಳಗೆ ಗೋನಿವಾಸ ಸಂಪನ್ನ

Mumbai News Desk

ಮುಲ್ಕಿ ವಿಜಯ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಮಿನಾ ಆಳ್ವ ಆಯ್ಕೆ 

Mumbai News Desk